– ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡೋಕು ಸಿದ್ಧ ಎಂದಿದ್ದ ಎ. ಮಂಜು
ಮಡಿಕೇರಿ: ಜಾತಿ ಜನಗಣತಿ ವರದಿ ಜಾರಿಗೆ ತರುವ ವಿಚಾರದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ನಲ್ಲೇ ಆಂತಕರಿಕ ಕಚ್ಚಾಟ ಹೆಚ್ಚಾಗಿದೆ. ಪ್ರತಿಪಕ್ಷಗಳಿಂದಲೂ ವಾಗ್ದಾಳಿ ನಡೆಯುತ್ತಿದೆ. ಈ ನಡುವೆ ಜಾತಿ ಜನಗಣತಿ ವರದಿ ಜಾರಿಯಾದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡೋದಕ್ಕೂ ಸಿದ್ಧ ಎಂದು ಶಾಸಕ ಎ. ಮಂಜು (A Manju) ಹೇಳಿದ್ದಾರೆ. ಆದ್ರೆ ಅವರ ಪುತ್ರ ಮಡಿಕೇರಿಯ ಕಾಂಗ್ರೆಸ್ ಶಾಸಕ ಮಂಥರ್ ಗೌಡ (Mantar Gowda) ಯಾವುದೇ ಕಾರಣಕ್ಕೂ ನಮ್ಮ ತಂದೆ ರಾಜೀನಾಮೆ ಕೊಡಲ್ಲ ಅಂದಿದ್ದಾರೆ.
ಮಡಿಕೇರಿಯಲ್ಲಿ (Madikeri) ಮಾತಾನಾಡಿದ ಅವರು, ಜಾತಿ ಜನಗಣತಿ (Caste Census) ವಿಚಾರವಾಗಿ ಮೊನ್ನೆ ಉಪ ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಆ ಸಭೆಯಲ್ಲಿ ಜಾತಿ ಜನಗಣತಿ ಸರ್ವೇ ಇನ್ನೊಂದು ಬಾರಿ ಮಾಡಲಿ ಎಂಬ ಚರ್ಚೆಯಾಗಿದೆ. ಬಹಳಷ್ಟು ಮಂದಿ ನಮ್ಮನೆಗೆ ಬಂದಿಲ್ಲ ಅಂತಾರೆ, ಆದ್ದರಿಂದ ಮರು ಸರ್ವೆಗೆ ಸಿಎಂ ಒಪ್ಪಿಗೆ ಸೂಚಿಸುತ್ತಾರೆ ಅನ್ನೋ ವಿಶ್ವಾಸ ನಮಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಕ್ಕಲಿಗ ಸಮುದಾಯಕ್ಕೆ ಅನ್ಯಾಯ ಆದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡೋಕು ಸಿದ್ಧ: ಎ.ಮಂಜು
ನಮ್ಮ ತಂದೆ ಅವರು ಈ ವಿಚಾರವಾಗಿ ರಾಜೀನಾಮೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ನಮ್ಮ ತಂದೆಯ ಪಕ್ಷ ಬೇರೆ ಇದೆ. ಅದಕ್ಕೆ ನಾವು ನಮ್ಮ ಪಕ್ಷವನ್ನು ಬಿಟ್ಟು ಕೋಡೋಕೆ ಆಗಲ್ಲ. ರಾಜೀನಾಮೆ ವಿಚಾರ ಅವರ ಅನಿಸಿಕೆ… ಅವರ ಪಾರ್ಟಿ.. ಅವರ ನಿಲುವು ಇರಬಹುದು. ಅದಕ್ಕೂ ನಮಗೂ ಸಂಬಂಧ ಇಲ್ಲ. ನಮ್ಮ ತಂದೆ ಅವರು ಹಿರಿಯ ರಾಜಕಾರಣಿಗಳು, ಮಕ್ಕಳ ಮಾತು ಯಾವತ್ತೂ ಕೇಳುವುದಿಲ್ಲ. ಒಟ್ಟಿನಲ್ಲಿ ಇಂದಿನ ಪರಿಸ್ಥಿತಿಯಲ್ಲಿ ಅವರು ರಾಜೀನಾಮೆ ಕೊಡಲ್ಲ. ಜಾತಿ ಜನಗಣತಿ ವರದಿ ಬಗ್ಗೆ ಮುಖ್ಯಮಂತ್ರಿಗಳು ಸರಿಯಾದ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ನುಡಿದಿದ್ದಾರೆ.
ಶಾಸಕ ಎ. ಮಂಜು ಹೇಳಿದ್ದೇನು?
ಈ ಸರ್ಕಾರಕ್ಕೆ ಜಾತಿಗಣತಿ ಮಾಡಲು ಅಧಿಕಾರ ಕೊಟ್ಟವರು ಯಾರು? ಜಾತಿಗಣತಿ ಮಾಡಬೇಕಿರೋದು ಕೇಂದ್ರ ಸರ್ಕಾರ. ರಾಜ್ಯ ಯಾಕೆ ಜನಗಣತಿ ಮಾಡಬೇಕು. ಸಿದ್ದರಾಮಯ್ಯ ಸರ್ಕಾರ ಮಾಡಿರೋದು ಜಾತಿಗಣತಿ ಅಲ್ಲ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ.ಇಂತಹ ಸಮೀಕ್ಷೆಯಲ್ಲಿ ಜನರ ಸಾಮಾಜಿಕ, ಶೈಕ್ಷಣಿಕ ವರದಿ ಬಗ್ಗೆ ಅಂಕಿಅಂಶಗಳನ್ನ ಕೊಡಬೇಕು. ಅದು ಬಿಟ್ಟು ಇವರು ಯಾಕೆ ಜಾತಿಗಣತಿ ಅಂಕಿಅಂಶಗಳನ್ನ ಕೊಡ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಕುರ್ಚಿ ಕಿತ್ತಾಟ ಜೋರಾಗಿದೆ.ಕುರ್ಚಿ ಕಿತ್ತಾಟ ಮರೆ ಮಾಚೋಕೆ ಇದೆಲ್ಲ ಮಾಡ್ತಿದ್ದಾರೆ.ಇದು ಸರಿಯಲ್ಲ. ಇದನ್ನೂ ಓದಿ: ಕೋಮುದ್ವೇಷ ಪ್ರಚೋದನಾ ಭಾಷಣ ಆರೋಪ; ಆಂದೋಲಾ ಶ್ರೀ ವಿರುದ್ಧ FIR ದಾಖಲು
ಸಿದ್ದರಾಮಯ್ಯ ಅವರು ಈ ಜಾತಿಗಣತಿ ವರದಿ ಅಂಗೀಕಾರ ಮಾಡಬಾರದು. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಎಲ್ಲಾ ಒಕ್ಕಲಿಗ ಶಾಸಕರು ಪಕ್ಷಾತೀತವಾಗಿ ಈ ಬಗ್ಗೆ ಧ್ವನಿ ಎತ್ತಬೇಕು. ನಮ್ಮ ಸಮುದಾಯಕ್ಕೆ ಅನ್ಯಾಯ ಆದ್ರೆ ನಾವು ಸಹಿಸೊಲ್ಲ. ನನಗೆ ಸಮುದಾಯದ ಮುಖ್ಯ ಶಾಸಕ ಸ್ಥಾನ ಮುಖ್ಯ ಅಲ್ಲ. ಸಮುದಾಯಕ್ಕಾಗಿ ಬೇಕಿದ್ರೆ ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಡೋಕೆ ಸಿದ್ಧ.
ನನ್ನ ಮನೆಗೆ ಬಂದು ಸಮೀಕ್ಷೆಯೇ ಮಾಡಿಲ್ಲ. ಇದಕ್ಕೇನು ಹೇಳೋದು. ಜಯಪ್ರಕಾಶ್ ಹೆಗ್ಡೆ ಇದನ್ನ ಜಾತಿ ಸಮೀಕ್ಷೆ ಅಂತ ಹೇಳಲಿ ನೋಡೋಣ.ಡಿಕೆಶಿವಕುಮಾರ್ ಸಮುದಾಯಕ್ಕೆ ಅನ್ಯಾಯ ಮಾಡಲು ಬಿಡಬಾರದು. ಇವತ್ತಿನ ಕ್ಯಾಬಿನೆಟ್ನಲ್ಲಿ ಇದನ್ನ ಅಂಗೀಕಾರ ಮಾಡಿದ್ರೆ ಉಗ್ರ ಹೋರಾಟ ಮಾಡ್ತೀವಿ ಅಂತ ಸರ್ಕಾರಕ್ಕೆ ಶಾಸಕ ಎ ಮಂಜು ಎಚ್ಚರಿಕೆ ಕೊಟ್ಟಿದ್ದರು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಹೊಸ ಶಿಕ್ಷಣ ನೀತಿ ಜಾರಿ – ಹಿಂದಿ 3ನೇ ಕಡ್ಡಾಯ ಭಾಷೆ