ಮಂಡ್ಯ: ಕೆಆರ್ಎಸ್ನಲ್ಲಿನ ಕಾವೇರಿ ಆರತಿ (Cauvery Aarti) ಹಾಗೂ ಮಂಡ್ಯ ಜಿಲ್ಲೆಯ ಯುವಜನರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಅಮ್ಯೂಸ್ಮೆಂಟ್ ಪಾರ್ಕ್ ಮಾಡಿಯೇ ಮಾಡುತ್ತೇವೆ ಎಂದು ಮಂಡ್ಯ ಶಾಸಕ ಗಣಿಗ ರವಿಕುಮಾರ್ (Ganiga Ravikumar) ಹೇಳಿದ್ದಾರೆ.
ಸದ್ಯ ಕೆಆರ್ಎಸ್ ಡ್ಯಾಂ (KRS Dam) ಬಳಿ ಕಾವೇರಿ ಆರತಿ ಹಾಗೂ ಅಮ್ಯೂಸ್ಮೆಂಟ್ ಪಾರ್ಕ್ (Amusement Park) ಮಾಡಲು ರೈತ ಸಂಘಟನೆಗಳು ವ್ಯಾಪಕವಾಗಿ ವಿರೋಧ ವ್ಯಕ್ತಪಡಿಸುತ್ತಿವೆ. ಈ ಸಂಭಂಧ ಹೋರಾಟಗಳನ್ನೂ ರೂಪಿಸುತ್ತಿವೆ. ಈ ವಿಚಾರವಾಗಿ ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ, ಕೆಆರ್ಎಸ್ನಲ್ಲಿ ಕಾವೇರಿ ಆರತಿ ಹಾಗೂ ಅಮ್ಯೂಸ್ಮೆಂಟ್ ಪಾರ್ಕ್ ಆದ್ರೆ ಜಿಲ್ಲೆಯ ಯುವಕರಿಗೆ ಉದ್ಯೋಗ ಸೃಷ್ಟಿಯಾಗುವುದರ ಜೊತೆಗೆ ದೇಶ-ವಿದೇಶದಿಂದ ಪ್ರವಾಸಿಗರು ಬರ್ತಾರೆ. ಅದರ ಅನುಕೂಲ ರೈತರು ಹಾಗೂ ರೈತರ ಮಕ್ಕಳಿಗೆ ಆಗುತ್ತೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಲಬುರಗಿ | ಪತ್ನಿಯ ಶೀಲ ಶಂಕಿಸಿ ನಡುರಸ್ತೆಯಲ್ಲೇ ಚಾಕುವಿನಿಂದ ಇರಿದು ಕೊಂದ ಪತಿ
ವಿರೋಧ ಮಾಡುವವರು ಇದನ್ನ ಅರ್ಥ ಮಾಡಿಕೊಳ್ಳಬೇಕು. ಮಂಡ್ಯ ದೊಡ್ಡ ಹಳ್ಳಿ ರೀತಿ ಇದೆ, ಅಭಿವೃದ್ಧಿ ಆಗಬೇಕು ಅಂದ್ರೆ ಮಂಡ್ಯಕ್ಕೆ ಜನರು ಬರಬೇಕು. ಈ ಎರಡು ಯೋಜನೆಗಳಿಂದ ಜಲಾಶಯಕ್ಕೆ ಧಕ್ಕೆ ಆಗಲ್ಲ, ಅಪಾಯವೂ ಇಲ್ಲ. ಜನರು ಬಂದ್ರೆ ಡ್ಯಾಂ ಕಲ್ಲಿಗೆ ಗುದ್ದುತ್ತಾರಾ? ಯಾವುದೇ ಸಮಸ್ಯೆಗಳು ಆಗೋದಿಲ್ಲ. ಹಾಗಾಗಿ ಕಾವೇರಿ ಆರತಿಯನ್ನ ನಮ್ಮ ಸರ್ಕಾರ ಮಾಡೇ ಮಾಡುತ್ತೆ ಎಂದು ಶಪಥ ಮಾಡಿದರು. ಇದನ್ನೂ ಓದಿ: ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ತಲಾ 5 ಕೋಟಿ ಪರಿಹಾರ ಕೊಡ್ಬೇಕು: ವಾಟಾಳ್ ನಾಗರಾಜ್ ಆಗ್ರಹ
ಇನ್ನೂ 20 ರೂ. ಕರ್ಫೂರ ಹಚ್ಚೋಕೆ ಯಾಕೆ 100 ಕೋಟಿ ರೂ. ಎಂಬ ರೈತರ ಪ್ರಶ್ನೆಗೆ ಉತ್ತರಿಸಿ, ಕರ್ಫೂರ ಹಚ್ಚೋಕೆ 20 ಸಾಕು. ಆದ್ರೆ ಆರತಿ ಮಾಡಲು ಮೂಲಭೂತ ಸೌಕರ್ಯ ಬೇಕು. 20 ಸಾವಿರ ಜನರು ಕುಳಿತು ನೋಡಲು ವ್ಯವಸ್ಥೆ ಬೇಕು. ಯೋಜನೆಗೆ ಡಿಪಿಆರ್ ಆಗುತ್ತೆ. ವಿರೋಧ ಮಾಡುವವರು ಡಿಪಿಆರ್ ತರಿಸಿಕೊಂಡು ನೋಡಿ ಎಂದು ಸ್ಪಷ್ಟನೆ ಕುಟುಕಿದ್ದಾರೆ.
ಯಾವುದಕ್ಕೆ ಎಷ್ಟು ಖರ್ಚು ಆಗುತ್ತೆ ಎಂದು ಪರಿಶೀಲಿಸಿ, ಭ್ರಷ್ಟಚಾರ ಕಂಡ್ರೆ ಕೇಸ್ ಹಾಕಿ ಜೈಲಿಗೆ ಕಳುಹಿಸಿ. ಅದು ಬಿಟ್ಟು ಮಾಡುವ ಮುನ್ನವೇ ಅದ್ಯಾಕೆ, ಇದ್ಯಾಕೆ? ಅನ್ನೋದು ಸರಿಯಲ್ಲ. ಕರ್ಪೂರ 20 ರೂಪಾಯಿ ಆದ್ರೆ ಅದರ ಹಿಡಿ 400 ರೂಪಾಯಿ. ರೈತರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಕಾವೇರಿ ಆರತಿ ಮಾಡೇ ಮಾಡುತ್ತೇವೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ರಸ್ತೆಯಲ್ಲೇ ಮಹಿಳೆಯರನ್ನ ತಬ್ಬಿಕೊಂಡು ತುಟಿಗೆ ಚುಂಬಿಸ್ತಿದ್ದ – ಬೆಂಗಳೂರಿನ ಬೀದಿ ಕಾಮಣ್ಣ ಪೊಲೀಸ್ ವಶಕ್ಕೆ