– ಸಹೋದರಿಯರಿಂದ ಸಹೋದರನ ಮೇಲೆ ಆರೋಪ
ಬೆಂಗಳೂರು: ಆಸ್ತಿಯನ್ನು ಬರೆದುಕೊಡದ್ದಕ್ಕೆ ಸಿಟ್ಟಾಗಿ ತಂದೆ, ತಾಯಿಯನ್ನು ಗೃಹ ಬಂಧನದಲ್ಲಿರಿಸಿ ಹಲ್ಲೆ ನಡೆಸಿದ ಆರೋಪ ಕಾಂಗ್ರೆಸ್ ಮುಖಂಡನ ಮೇಲೆ ಕೇಳಿ ಬಂದಿದೆ.
ಸಹೋದರನಾದ ತೇಜುಮೂರ್ತಿ ನಮ್ಮ ತಂದೆ ಹಿರಪ್ಪ(80), ತಾಯಿ ಲಕ್ಷ್ಮಮ್ಮ(67) ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಹೋದರಿಯರು ಆರೋಪಿಸಿದ್ದಾರೆ.
ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬನ್ನೇರುಘಟ್ಟದ ನಿವಾಸಿ ತೇಜುಮೂರ್ತಿ ಆಸ್ತಿ ನೀಡದ್ದಕ್ಕೆ ಪೋಷಕರನ್ನು ಗೃಹ ಬಂಧನದಲ್ಲಿ ಇರಿಸಿದ್ದಾನೆ. ಈ ವಿಚಾರವನ್ನು ಪ್ರಶ್ನಿಸಲು ಬಂದಿದ್ದಕ್ಕೆ ನಮ್ಮ ಮೇಲೆಯೆ ಹಲ್ಲೆಗೆ ಯತ್ನಿಸಿದ್ದಾನೆ ಎಂದು ಸಹೋದರಿಯರು ಹೇಳಿದ್ದಾರೆ. ತೇಜುಮೂರ್ತಿ ಹಲ್ಲೆ ನಡೆಸುವ ದೃಶ್ಯ ಮೊಬೈಲಿನಲ್ಲಿ ಸೆರೆ ಆಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಬನ್ನೇರುಘಟ್ಟ ಠಾಣೆಯಲ್ಲಿ ದೂರು ದಾಖಲಿಸಿಸಲು ಹಿರಪ್ಪನ ಪುತ್ರಿಯರು ಹೋಗಿದ್ದರು. ಆದರೆ ತೇಜುಮೂರ್ತಿಯ ಒತ್ತಡಕ್ಕೆ ಮಣಿದ ಪೊಲೀಸರು ಕಾಟಾಚಾರಕ್ಕೆ ದೂರು ದಾಖಲಿಸಿಕೊಂಡಿದ್ದಾರೆ ಎಂದು ಹಿರಪ್ಪನ ಪುತ್ರಿ ಆರೋಪಿಸಿದ್ದಾರೆ.
ಸದ್ಯ ಪುತ್ರಿಯರು ಪೋಷಕರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.