ಮೈಸೂರು: ಅಂಬಾರಿ ದಿನ ವಿಪಕ್ಷ ನಾಯಕ ಸಿದ್ದರಾಮಯ್ಯ ನಾನ್ವೆಜ್ ತಿಂದಿದ್ದ ವೀಡಿಯೋ ತಾಕತ್ ಇದ್ದೆ ರಿಲೀಸ್ ಮಾಡು ಎಂದು ಸಂಸದ ಪ್ರತಾಪ್ ಸಿಂಹ ಅವರಿಗೆ ಕಾಂಗ್ರೆಸ್ನ ಸೀತಾರಾಂ ಸವಾಲೆಸೆದಿದ್ದಾರೆ.
ಸಿದ್ದರಾಮಯ್ಯ 2017 ರಲ್ಲಿ ನಾನ್ ವೆಜ್ ತಿಂದು ದಸರಾ ಅಂಬಾರಿಗೆ ಪುಷ್ಪಾರ್ಚನೆ ಮಾಡಿದ ವಿಚಾರದ ಬಗ್ಗೆ ಅಂದಿನ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಮುಖಂಡ ಸೀತರಾಂ ಕಿಡಿಕಾರಿದ್ದಾರೆ. 2017ರ ಘಟನೆಯ ವೀಡಿಯೋ ಇದ್ದರೆ ತೋರಿಸು. ನಿನಗೆ ತಾಕತ್ತಿದ್ದರೆ ಆ ವೀಡಿಯೋ ಬಿಡುಗಡೆ ಮಾಡು ಎಂದು ಪ್ರತಾಪ್ ಸಿಂಹಗೆ ಸವಾಲು ಹಾಕಿದ್ದಾರೆ. ಇದನ್ನೂ ಓದಿ: ನಾಟಿ ಕೋಳಿ ಊಟ ಮಾಡಿ ಅಂಬಾರಿಗೆ ಪುಷ್ಪಾರ್ಚನೆ: ಸಿದ್ದು ವಿರುದ್ಧ ಪ್ರತಾಪ್ ಸಿಂಹ ಕಿಡಿ
ಚಾಮುಂಡಿ ಅಮ್ಮನ ಸನ್ನಿಧಾನಕ್ಕೆ ಹೋಗೋಣ ಅಲ್ಲೇ ಪ್ರಮಾಣ ಮಾಡೋಣ. ನಾನು ಅಂದು ಅವರ ಜೊತೆಯಲ್ಲೇ ಇದ್ದೆ. ಚಪಾತಿ, ಅನ್ನ ಸಾರು ತಿಂದು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಹಾಗೂ ನಂದಿಧ್ವಜ ಪೂಜೆ ಮಾಡಿದ್ರು. ಆದರೆ ಇಲ್ಲದ ಸುಳ್ಳು ಹೇಳಿ ಜನರಿಗೆ ದಾರಿ ತಪ್ಪಿಸಬೇಡಿ. ಆಗೊಮ್ಮೆ ನೀವೂ ಹೇಳಿದ್ದು ನಿಜವಾದ್ರೆ ಬನ್ನಿ ಚಾಮುಂಡಿ ಬೆಟ್ಟಕ್ಕೆ ಪ್ರಮಾಣ ಮಾಡಿ ಎಂದು ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]