ಬೆಂಗಳೂರು: ರಾಜ್ಯದ ಜನತೆಯ ಸೇವೆ ಮಾಡಲು ಮತ್ತೊಂದು ಅವಕಾಶ ಸಿಕ್ಕಿದೆ. ಪಕ್ಷದ ಕಾರ್ಯಕರ್ತರಿಗೆ ಇನ್ನು ಹೆಚ್ಚಿನ ರೀತಿಯಲ್ಲಿ ಸಂಘಟನೆ ಮಾಡಲು ಇದೊಂದು ಸ್ಫೂರ್ತಿಯಾಗಲಿ ಅಂತ ನೂತನ ಉಪಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸುತ್ತಿರುವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ತಮ್ಮ ನಿವಾಸ ಸದಾಶಿವನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇದೇ ತಿಂಗಳ 25ರಂದು ಬಹುಮತ ಸಾಬೀತುಪಡಿಸಿದ ಬಳಿಕ ರಾಜ್ಯದ ಜನತೆಯ ಹಿತದೃಷ್ಟಿಗೆ ಮುಂದಿನ ಯೋಜನೆಗಳನ್ನು ಕೈಗೊಳ್ಳುವುದಾಗಿ ಹೇಳಿದ್ರು.
ಒಟ್ಟಿನಲ್ಲಿ ಬಹುಮತ ಸಾಬೀತಿನ ಬಳಿಕವೇ ಮುಖ್ಯಮಂತ್ರಿ, ಸಂಪುಟ ರಚನೆ ಹಾಗೂ ಖಾತೆಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಇನ್ನು ತಾಂತ್ರಿಕ ಕಾರಣದಿಂದಾಗಿ ವಿಶ್ವಾಸಮತ ಸಾಬೀತು ಮಾಡುವ ದಿನಾಂಕ ಮುಂದೆ ಹೋಗಿದೆ. ಸ್ಪೀಕರ್ ಎಲೆಕ್ಷನ್ ಆದ ಬಳಿಕ ವಿಶ್ವಾಸಮತ ಸಾಬೀತು ಪಡಿಸಬೇಕಾಗಿದೆ. ಹೀಗಾಗಿ ಸ್ಪೀಕರ್ ಎಲೆಕ್ಷನ್ ಮೊದಲು ಆಗಬೇಕು ಅಂತ ಅವರು ಹೇಳಿದ್ರು.
ಈ ಸರ್ಕಾರ ಸಂಪೂರ್ಣವಾಗಿ 5 ವರ್ಷ ಪೂರೈಸುವ ಭರವಸೆ ಇದೆ. ಸಮನ್ವಯ ಸಮಿತಿ ಮಾಡಬೇಕೆನ್ನುವ ಯೋಚನೆ ಮಾಡಿದ್ದೇವೆ. ಈ ಂದ್ಯೆ ಸಣ್ಣಪುಟ್ಟ ವ್ಯತ್ಯಾಸಗಳು ಬಂದ್ರೆ ಅದನ್ನು ಸರಿಪಡಿಸಕೊಂಡು ಹೋಗುತ್ತೇವೆ. 5 ವರ್ಷ ಜನರ ಸೇವೆಯನ್ನು ಮಾಡಬೇಕೆನ್ನುವುದು ಎರಡೂ ಪಕ್ಷಗಳ ಉದ್ದೇಶವಾಗಿದೆ ಅಂತ ಅವರು ಭರವಸೆ ನೀಡಿದ್ರು.
ಸದ್ಯ ಪರಮೇಶ್ವರ್ ನಿವಾಸದ ಮುಂದೆ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಸಂಭ್ರಮ ಮನೆ ಮಾಡಿದೆ.