ತಾನು ಹೋಗುವಾಗ ಎದ್ದು ನಿಂತು ನಮಸ್ಕಾರ ಮಾಡದ ವೃದ್ಧನಿಗೆ `ಕೈ’ ಮುಖಂಡನಿಂದ ಹಲ್ಲೆ

Public TV
1 Min Read
GLB

ಕಲಬುರಗಿ: ತನ್ನ ಕಾರು ಬಂದಾಗ ಎದ್ದು ನಿಂತು ಮರ್ಯಾದೆ ಕೊಡದಿರುವುಕ್ಕೆ, ವೃದ್ಧನ ಮೇಲೆ ಕಾಂಗ್ರೆಸ್ ಮುಖಂಡನೋರ್ವ ಹಲ್ಲೆ ಮಾಡಿರುವ ಘಟನೆ ಕಲಬುರಗಿಯ ಹಸನಾಪುರ ಗ್ರಾಮದಲ್ಲಿ ನಡೆದಿದೆ.

ಅದೇ ಗ್ರಾಮದ ಮಾಜಿ ತಾಲೂಕು ಪಂಚಾಯತ್ ಸದಸ್ಯ ಸೀತಾರಾಂ ಸುಬೇದಾರ್ ಗ್ರಾಮದಲ್ಲಿ ಹೋಗುವಾಗ ಲಕ್ಕಪ್ಪ ಎಂಬ ವೃದ್ಧ ಎದ್ದು ನಿಂತು ನಮಸ್ಕಾರ ಮಾಡಿಲ್ಲ. ಈ ಹಿಂದೆ ನೀನು ನನ್ನಿಂದ ಹಣ ಪಡೆದಿದ್ಯಾ ಅಂತ ಕುಟುಂಬ ನೆಪ ಹೇಳಿ ಸೀತಾರಂ ಹಾಗು ಆತನ ಅಳಿಯ ಇಂದ್ರಜೀತ್ ವೃದ್ಧನ ಮೇಲೆ ದರ್ಪ ತೋರಿಸಿದ್ದಾರೆ. ಈ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದು, ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

vlcsnap 2018 03 14 09h22m28s157

ತನ್ನ ಮೇಲೆ ದರ್ಪ ತೋರಿದ ಸಂದರ್ಭದಲ್ಲಿ ಪೊಲೀಸ್ ಠಾಣೆಗೆ ದೂರು ಕೊಡುತ್ತೇನೆ ಅಂತ ಹೇಳಿದೆ. ಈ ವೇಳೆ ಅವರು ನಿನಗೆ ಯಾವ ಪಿಎಸ್‍ಐ ಪರಿಚಯ ಇದ್ರೂ ಅವನೇನೂ ಕಿತ್ಗೋಳ್ಳಕ್ಕಾಗಲ್ಲ, ನಾನು ಯಾರೂಂತ ನಿನಗೆ ಗೊತ್ತಿಲ್ಲ ಮಗನೇ ಅಂತ ಅವಾಜ್ ಹಾಕಿ ಮೂವರು ನನಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಅವರನ್ನು ತನ್ನ ಕಾರೊಳಗೆ ಹಾಕಿ ಕರೆದುಕೊಂಡು ಹೋದ್ರು ಅಂತ ಹಲ್ಲೆಗೊಳಗಾದ ವೃದ್ಧ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.

vlcsnap 2018 03 14 09h21m38s132

ದರ್ಪ ಮೆರೆದ ಕಾಂಗ್ರೆಸ್ ಮುಖಂಡ ಜೇವರ್ಗಿ ಶಾಸಕ ಅಜಯ್ ಸಿಂಗ್ ಮತ್ತು ಅಫಜಲಪುರ ಶಾಸಕ ಮಾಲೀಕಯ್ಯ ಗುತ್ತೇದಾರ ಬೆಂಬಲಿಗನಾಗಿದ್ದಾನೆ ಎನ್ನಲಾಗಿದೆ. ಸದ್ಯ ಹಲ್ಲೆಗೆ ಒಳಗಾದ ವೃದ್ಧ ಕಲಬುರಗಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

https://www.youtube.com/watch?v=MUcR_NmTNDM

Share This Article
Leave a Comment

Leave a Reply

Your email address will not be published. Required fields are marked *