ಬೆಂಗಳೂರು: ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ತಿಂಗಳ ಬಳಿಕ ಕೊನೆಗೂ ಜಿಲ್ಲಾ ಉಸ್ತುವಾರಿಗಳ ನೇಮಕವಾಗಿದೆ.
ಕಾಂಗ್ರೆಸ್ಸಿನ ನಾಲ್ವರು ಪ್ರಮುಖ ನಾಯಕರು ತಲಾ ಎರಡು ಜಿಲ್ಲೆಗಳ ಉಸ್ತುವಾರಿ ಹೊತ್ತಿದ್ದು, ಉಳಿದಂತೆ ಎಲ್ಲಾ ಸಚಿವರುಗಳಿಗೆ ಒಂದೊಂದು ಜಿಲ್ಲೆಯನ್ನು ನೀಡಲಾಗಿದೆ.
ಉಪಮುಖ್ಯಮಂತ್ರಿ ಸ್ಥಾನದ ಜೊತೆಗೆ ಡಾ.ಜಿ.ಪರಮೇಶ್ವರ್ ಬೆಂಗಳೂರು ನಗರ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಡಿಕೆ ಶಿವಕುಮಾರ್ ರಾಮನಗರ, ಬಳ್ಳಾರಿ, ಆರ್.ವಿ. ದೇಶಪಾಂಡೆ ಉತ್ತರ ಕನ್ನಡ ಮತ್ತು ಧಾರವಾಡ, ಕೃಷ್ಣಭೈರೇಗೌಡ ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಸಿಕ್ಕಿದೆ.
ಯಾವ ಜಿಲ್ಲೆಗೆ ಯಾರು ಉಸ್ತುವಾರಿ?
ಡಾ.ಜಿ ಪರಮೇಶ್ವರ್: ಬೆಂಗಳೂರು, ತುಮಕೂರು
ಎಚ್.ಡಿ.ರೇವಣ್ಣ: ಹಾಸನ
ಜಿ.ಟಿ. ದೇವೇಗೌಡ: ಮೈಸೂರು
ಡಿ.ಕೆ.ಶಿವಕುಮಾರ್: ರಾಮನಗರ, ಬಳ್ಳಾರಿ
ರಮೇಶ್ ಜಾರಕಿಹೊಳಿ: ಬೆಳಗಾವಿ
ಶಿವಾನಂದ ಪಾಟೀಲ್: ಬಾಗಲಕೋಟೆ
ಪ್ರಿಯಾಂಕ್ ಖರ್ಗೆ: ಕಲಬುರಗಿ
ರಾಜಶೇಖರ್ ಪಾಟೀಲ್: ಯಾದಗಿರಿ
ವೆಂಕಟರಮಣಪ್ಪ : ಚಿತ್ರದುರ್ಗ
ಕೆ.ಜೆ.ಜಾರ್ಜ್: ಚಿಕ್ಕಮಗಳೂರು
ಆರ್.ವಿ.ದೇಶಪಾಂಡೆ: ಉತ್ತರ ಕನ್ನಡ, ಧಾರವಾಡ
ಸಿ.ಎಸ್.ಪುಟ್ಟರಾಜು: ಮಂಡ್ಯ
ಜಮೀರ್ ಅಹಮ್ಮದ್: ಹಾವೇರಿ
ಆರ್.ಶಂಕರ್: ಕೊಪ್ಪಳ
ಎನ್ ಮಹೇಶ್: ಗದಗ
ವೆಂಕಟರಾವ್ ನಾಡಗೌಡ:ರಾಯಚೂರು
ಎಸ್.ಆರ್. ಶ್ರೀನಿವಾಸ್: ದಾವಣಗೆರೆ
ಸಾ.ರಾ.ಮಹೇಶ್ : ಕೊಡಗು
ಶಿವಶಂಕರ್ ರೆಡ್ಡಿ : ಚಿಕ್ಕಬಳ್ಳಾಪುರ
ಕೃಷ್ಣಭೈರೇಗೌಡ : ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ
ಯು.ಟಿ ಖಾದರ್: ದಕ್ಷಿಣ ಕನ್ನಡ
ಪುಟ್ಟರಂಗಶೆಟ್ಟಿ: ಚಾಮರಾಜನಗರ
ಜಯಮಾಲ: ಉಡುಪಿ
ಬಂಡೆಪ್ಪ ಕಾಶೆಂಪೂರ್: ಬೀದರ್
ಡಿ.ಸಿ. ತಮ್ಮಣ್ಣ: ಶಿವಮೊಗ್ಗ
ಎಂ.ಸಿ. ಮನಗೂಳಿ: ವಿಜಯಪುರ