ಬೆಂಗಳೂರು: ಕರೆಂಟ್ ಬಿಲ್ ಕಟ್ಟಿ ಸಿದ್ದರಾಮಯ್ಯನವರಿಗೆ (Siddaramaiah) ಅವಮಾನ ಮಾಡಬೇಡಿ ಎಂದು ಮಾಜಿ ಸಚಿವ ಅಶೋಕ್ (R Ashok) ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣಾ (Karnataka Election) ಪ್ರಚಾರದ ಸಮಯದಲ್ಲಿ ಸಿದ್ದರಾಮಯ್ಯನವರು ನನಗೂ ಉಚಿತ, ನಿಮಗೂ ಉಚಿತ ಎಂದು ಹೇಳಿದ್ದರು. ಸಿದ್ದರಾಮಯ್ಯನವರು ಈಗ ರಾಜ್ಯದ ಮುಖ್ಯಮಂತ್ರಿಯಾಗಿರುವ ಹಿನ್ನೆಲೆಯಲ್ಲಿ ಕರೆಟ್ ಬಿಲ್ ಕಟ್ಟಿದರೆ ಅದು ಮುಖ್ಯಮಂತ್ರಿ ಹುದ್ದೆಗೆ ಮಾಡುವ ಅವಮಾನ. ನಾನೇ ಕರೆಂಟ್ ಬಿಲ್ ಕಟ್ಟುವುದಿಲ್ಲ ಎಂದು ಸಿಎಂ ಅವರೇ ಹೇಳಿದ ಹಿನ್ನೆಲೆಯಲ್ಲಿ ಯಾರೂ ಕರೆಟ್ ಬಿಲ್ ಕಟ್ಟಬಾರದು ಎಂದು ಮನವಿ ಮಾಡಿದರು. ಇದನ್ನೂ ಓದಿ: Karnataka Cabinet Expansion – ಪ್ರಮುಖ ಐದು ಖಾತೆಗಳಿಗೆ ಡಿಕೆ ಶಿವಕುಮಾರ್ ಪಟ್ಟು
ಸರ್ಕಾರದ ಬಂದ ಮೊದಲ ಕ್ಯಾಬಿನೆಟ್ನಲ್ಲಿ 5 ಗ್ಯಾರಂಟಿ (Congress Guarantee) ಯೋಜನೆ ಜಾರಿ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕರು ಘೋಷಣೆ ಮಾಡಿದ್ದಾರೆ. ಹೀಗಾಗಿ ಇನ್ನು ಮುಂದೆ ಯಾರೂ 200 ಯೂನಿಟ್ಗೆ ವಿದ್ಯುತ್ ಬಿಲ್ ಕಟ್ಟಬಾರದು ಮತ್ತು ಮಹಿಳೆಯರು ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಟಿಕೆಟ್ ತೆಗೆದುಕೊಳ್ಳಬಾರದು ಎಂದು ಜನರಲ್ಲಿ ವಿನಂತಿ ಮಾಡಿದರು.
ಚುನಾವಣೆ ಸಮಯದಲ್ಲಿ ಯಾವುದೇ ಷರತ್ತುಗಳನ್ನು ಹಾಕಿಲ್ಲ. ಹೀಗಾಗಿ ಈಗ ಷರತ್ತು ವಿಧಿಸುವಂತಿಲ್ಲ. ನಾನು ಕರೆಟ್ ಬಿಲ್ ಕಟ್ಟುವುದಿಲ್ಲ. ಕರೆಂಟ್ ಬಿಲ್ ಕಟ್ಟದ ಜನರ ಪರ ಬಿಜೆಪಿ ಇದೆ. ಬಿಲ್ ಕಟ್ಟದ ಮನೆಗಳಿಗೆ ಸಂಪರ್ಕ ತೆಗೆದರೆ ನಾನೇ ಹೋಗುತ್ತೇನೆ. ಆ ಜನರ ಪರ ನಾನೇ ಹೋಗಿ ಬೆಂಬಲಕ್ಕೆ ನಿಲ್ಲುತ್ತೇನೆ. ನಾವು ಆರು ತಂಡ ಮಾಡಿ ರಾಜ್ಯ ಸುತ್ತುತ್ತೇವೆ. ಜನರ ಮುಂದೆ ನಾವು ಗ್ಯಾರಂಟಿ ವಿಷಯ ಮಾತನಾಡಿ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಚ್ಚರಿಕೆ ನೀಡಿದ್ದಾರೆ.