– ಇದು ಮತಾಂತರ ಷಡ್ಯಂತ್ರ, ಇಲ್ಲ ಅಂದ್ರೆ ಸಾಬಿ ಸಮೀರ್ ಯಾಕೆ ಬರ್ತಾನೆ?: ವಿಪಕ್ಷ ನಾಯಕ ಪ್ರಶ್ನೆ
ಬೆಂಗಳೂರು: ಧರ್ಮಸ್ಥಳ ಷಡ್ಯಂತ್ರ ಕೇಸನ್ನ ರಾಜ್ಯ ಸರ್ಕಾರವೇ NIA ಗೆ ಕೊಡಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಸರ್ಕಾರವನ್ನ ಆಗ್ರಹಿಸಿದರು.
ಮಾಸ್ಕ್ ಮ್ಯಾನ್ ಬಂಧನ, ಸುಜಾತ ಭಟ್ ಹೇಳಿಕೆ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಧರ್ಮಸ್ಥಳ ಕೇಸ್ ಮೊದಲಿನಿಂದ ಷಡ್ಯಂತ್ರ ಅಂತ ನಾವು ಹೇಳಿದ್ವಿ. ಸರ್ಕಾರ ಅತುರದ ನಿರ್ಧಾರ ಮಾಡಿತು. ದೂರು ಕೊಟ್ಟವನ ಪೂರ್ವ ಪರಿತೆ ನೋಡದೆ, ಯೋಚನೆ ಮಾಡದೇ ಸಿಎಂ ಜೊತೆ ಇರುವ ಪ್ರಗತಿಪರರ ಮಾತು ಕೇಳಿ SIT ಮಾಡಿದ್ರು. SIT ತನಿಖೆಯಿಂದ ಬುರುಡೆ ಬಂತು ಅಷ್ಟೆ. ಸಿಎಂ ಕಾಮನ್ಸೆನ್ಸ್ ಉಪಯೋಗ ಮಾಡಬೇಕಿತ್ತು. ಧರ್ಮಸ್ಥಳದ ಭಕ್ತರ ಭಾವನೆಗೆ ನೋವು ಆಗಿದೆ. ಇದನ್ನ ಸಿದ್ದರಾಮಯ್ಯ ವಾಪಸ್ ಕೋಡೊಕೆ ಆಗುತ್ತಾ? ಈ ಸರ್ಕಾರದ್ದು ತಪ್ಪು ಅಂತ ಆಯ್ತು. ಮಾಸ್ಕ್ ಮ್ಯಾನ್ ಬಗ್ಗೆ ಮೊದಲೇ ತನಿಖೆ ಮಾಡಿದ್ರೆ ಮುಗಿದು ಹೋಗ್ತಿತ್ತು ಎಂದು ಸರ್ಕಾರದ ನಡೆ ಖಂಡಿಸಿದರು. ಇದನ್ನೂ ಓದಿ: ಇದು ಅಣ್ಣಪ್ಪ ಸ್ವಾಮಿಯ ಸತ್ಯ ದರ್ಶನ – ಹೆಗ್ಗಡೆ ಮಾತು ಮತ್ತೆ ವೈರಲ್
ಅನನ್ಯ ಭಟ್ ಕೇಸ್ ಕೂಡಾ ಸುಳ್ಳು ಅಂತ ಗೊತ್ತಾಗಿದೆ. ಎಲ್ಲರೂ ದುಡ್ಡು ತಗೊಂಡು ಮಾಡಿದ್ದಾರೆ. ಮಾಸ್ಕ್ ಮ್ಯಾನ್ ಹಿಂದೆ ಇರೋನು ಸಮೀರ್. ಸಮೀರ್ ಸೂತ್ರಧಾರ. ಎಲ್ಲರನ್ನೂ ಜೊತೆಗಾರ ಮಾಡಿಕೊಳ್ತಾನೆ. ಪ್ರಗತಿಪರರ ಟೀಂ ಸೆಟಪ್ ಮಾಡಿಕೊಳ್ತಾನೆ. ಡ್ರಾಮಾ ಮಾಡೋಕೆ ಮಾಸ್ಕ್ ಮ್ಯಾನ್, ಅನನ್ಯ ಭಟ್ ಹುಡುಕುತ್ತಾರೆ. ತನಿಖೆ ಹೇಗೆ ಮಾಡಬೇಕು ಅಂತ ಅದನ್ನು ಇವರೇ ನಿರ್ಧಾರ ಮಾಡ್ತಾರೆ. ಭದ್ರತೆ ಕೊಡಬೇಕು ಅಂತ ಹೇಳ್ತಾರೆ. 25 ದಿನ ಸಿಎಂಗೂ ಇಷ್ಟು ಸೆಕ್ಯುರಿಟಿ ಇರಲಿಲ್ಲ. ಮಾಸ್ಕ್ ಮ್ಯಾನ್ಗೆ ಇತ್ತು. ಸಿಎಂಗಿಂತ ಹೈ ಸೆಕ್ಯುರಿಟಿ ಕೊಟ್ರು. ಯಾಕೆ ಕೊಟ್ರು? ಮಂಜುನಾಥನನ್ನ ಅವಹೇಳನ ಮಾಡಬೇಕು ಅನ್ನೋದು ಇವರ ಷಡ್ಯಂತ್ರ. ಇದು ಮತಾಂತರ ಷಡ್ಯಂತ್ರ. ಇಲ್ಲ ಅಂದರೆ ಸಾಬಿ ಸಮೀರ್ ಯಾಕೆ ಬರ್ತಾನೆ? ಧರ್ಮಸ್ಥಳದ ಬಗ್ಗೆ ಕೇಳೋಕೆ ಇವರು ಯಾರು ಅಂತ ಕಿಡಿಕಾರಿದರು.
ಅನೇಕ ಕಡೆ ಮಸೀದಿ ಮೇಲೆ ದೂರು ಬಂದಿದೆ. ಯಾವುದಾದ್ರು ಮಸೀದಿ ಅಗೆದ್ರಾ? ಹಿಂದೂಗಳು ಟಾರ್ಗೆಟ್ ಮಾಡಬೇಕು. ಇದು ಸಿಎಂ, ಸಿಎಂ ಸಂಪುಟದ ಕೆಲಸ. ಡಿಕೆ ವೋಟ್ಬ್ಯಾಂಕ್ಗೆ ಮಾತಾಡ್ತಿದ್ದಾರೆ ಅಷ್ಟೆ. ಇಷ್ಟೆಲ್ಲಾ ಕೇಸ್ ಆಗೋಕೆ ಸಿಎಂ ಕಾರಣ. ಪೊಲೀಸರ ಕೆಲಸ ಬಿಟ್ಟು ಬುರುಡೆ ಹುಡುಕೋಕೆ ಬಿಟ್ರಿ. ತನಿಖೆಗೆ ಕೋಟ್ಯಂತರ ರೂಪಾಯಿ ಖರ್ಚು ಆಗಿದೆ. ಯಾರ್ ಕೊಡ್ತಾರೆ. ಬೆಟ್ಟ ಅಗೆದು ಇಲಿಯೂ ಸಿಗಲಿಲ್ಲ. ಕರ್ನಾಟಕದ ಇತಿಹಾಸದಲ್ಲಿ ಇಂತಹ ಪ್ರಹಸನ ಅಗಿರಲಿಲ್ಲ. ಕಾಂಗ್ರೆಸ್ ಪಕ್ಷ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಮುಸುಕುಧಾರಿ ಮುಖ್ಯ ಅಲ್ಲ, ಇದರ ಹಿಂದೆ ಇರೋರು ಯಾರು ಅಂತ ತನಿಖೆ ಆಗ್ಬೇಕು: ಅಶೋಕ್
ಬಿಜೆಪಿ ಅವರು ಮೊದಲು ಮಾತಾಡಿಲ್ಲ ಅಂದರು. ನಾನೇ ಮಾತಾಡಿದ್ದೆ ಮೈಸೂರಿನಲ್ಲಿ. ತನಿಖೆ ಮಾಡಿ ಇದು ಷಡ್ಯಂತ್ರ ಅಂತ ಹೇಳಿದ್ದೆ. ಬಿಜೆಪಿ ಹೋರಾಟ ಮಾಡಿರಲಿಲ್ಲ ಅಂದರೆ ಬುರುಡೆ ತಂದು ಇದೇ ನಿಜ ಅಂತ ಮಾಡೋರು. ನಾವು ಹೋರಾಟ ಮಾಡಿದ್ದಕ್ಕೆ ಇದು ಇಲ್ಲಿಗೆ ಬಂದು ನಿಂತಿದೆ. ಧರ್ಮಸ್ಥಳಕ್ಕೆ ಕಾಂಗ್ರೆಸ್ ಪಕ್ಷ ಮೋಸ ಮಾಡಿದೆ. ಮಾಸ್ಕ್ ಮ್ಯಾನ್ ಬಗ್ಗೆ ಅಸೆಂಬ್ಲಿಯಲ್ಲಿ ನಾನು ಹೇಳಿದ್ದೆ. ಅವನಿಗೆ ಅಮಿಷ ಒಡ್ಡಿದ್ದಾರೆ ಅಂತ. ಈಗ ಬಂಧನ ಆಗಿದೆ. ಮಾಸ್ಕ್ ಮ್ಯಾನ್ ನೋಡಿದ್ರೆ ಪಾಪ ಅನ್ನಿಸುತ್ತೆ. ಮುಸುಕುಧಾರಿ ಮುಖ್ಯ ಅಲ್ಲ. ಇದರ ಹಿಂದೆ ಇರೋರು ಯಾರು ಅಂತ ತನಿಖೆ ಆಗಬೇಕು. ಇವರ ಹಿಂದೆ ಯಾರು ಇದ್ದಾರೆ ಅಂತ ತಿಳಿಯೋಕೆ SIT ಮಾಡಿ. ಕಾಂಗ್ರೆಸ್, ಸಿದ್ದರಾಮಯ್ಯ, ಡಿಕೆಶಿಗೆ ಸತ್ಯ ಹೊರ ಬರೋ ಮನಸು ಇದ್ದರೆ SIT ತನಿಖೆ ಮಾಡಿ. NIA ತನಿಖೆಗೆ ಕೊಡಿ ಎಂದು ಒತ್ತಾಯಿಸಿದರು.
ಇವರು NIA ಗೆ ಕೊಡಲಿಲ್ಲ ಅಂದರೆ ಕಾಂಗ್ರೆಸ್ ಪಾತ್ರ ಇದೆ ಅಂತ ಗೊತ್ತಾಗುತ್ತದೆ. ಅನನ್ಯ ಭಟ್ ಕಳೆದು ಹೋಗಿದ್ದಾಳೆ ಅಂತ ತನಿಖೆ ಮಾಡಿದ್ರೆ ಗೊತ್ತಾಗೋದು. ಪೊಲೀಸರು ತನಿಖೆ ಮಾಡಿಲ್ಲ. ಈ ಸರ್ಕಾರ ಪೊಲೀಸರ ಕೈ ಕಟ್ಟಿ ಹಾಕಿದ್ರು. ಕೇವಲ ಬುರುಡೆ ಹುಡುಕಿ ಅಂತ ಬಿಟ್ಟಿದ್ರು. ಬಂಧನ ಮಾಡಿದ್ರೆ ಸಾಲದು, ಇದರ ಹಿಂದೆ ಇರೋರ ಬಯಲಿಗೆ ಎಳೆಯಬೇಕು. ಈ ದೇಶದಲ್ಲಿ ಇರೋನು ಮಾಡಿರೋದಾ? ಬೇರೆ ದೇಶದಲ್ಲಿ ಇರೋನು ಮಾಡಿರೋದಾ? ತನಿಖೆ ಆಗಲಿ. ಇದು ಲವ್ ಜಿಹಾದ್ ತರಹ ಮತಾಂತರ ಜಿಹಾದ್. SIT ಆಗಲಿ ಇಲ್ಲ. NIA ತನಿಖೆಗೆ ಕೊಡಿ. ರಾಜ್ಯ ಸರ್ಕಾರವೇ NIA ಗೆ ಕೊಟ್ಟು ಬಿಡಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ತಮಿಳುನಾಡಿನಲ್ಲಿ ಹಣದ ಆಮಿಷವೊಡ್ಡಿ ಧರ್ಮಸ್ಥಳಕ್ಕೆ ಕರೆಸಿದ್ದರು: ಸತ್ಯ ಕಕ್ಕಿದ ಚಿನ್ನಯ್ಯ