ಬೆಂಗಳೂರು: ಕಾಂಗ್ರೆಸ್ನಲ್ಲಿ (Congress) ಇದೀಗ ಹಣದ ಸಂಕಟ, ಅನುದಾನದ ಸಂಕಟ ಶುರುವಾಗಿದೆ. ಶಾಸಕರ ಒಳಗಿನ ಸಂಕಟ ಹೊರಗೆ ಬಂದಿದ್ದೇಗೆ? ಎಂಬ ಚರ್ಚೆ ಜೋರಾಗಿದೆ. ಸಚಿವರ ವಿರುದ್ಧ ಶಾಸಕರು ತಿರುಗಿಬಿದ್ದು ಮಾತನಾಡುತ್ತಿದ್ದರೆ, ಸಚಿವ ಪರಮೇಶ್ವರ್ ನಮ್ ಹತ್ರ ದುಡ್ಡಿಲ್ಲ ಎಂದು ಒಂದೇ ದಿನದಲ್ಲಿ ಉಲ್ಟಾ ಹೊಡೆದಿದ್ದಾರೆ. ಹಾಗಾದ್ರೆ ಶಾಸಕರ ಅಸಮಾಧಾನ ಡಬ್ಬಲ್ ಆಗುತ್ತಾ? ಸಿಎಂ ಮದ್ದು ಅರೆಯುತ್ತಾರಾ? ಎಂಬ ಕುತೂಹಲ ಉಂಟಾಗಿದೆ.
2 ವರ್ಷ ಗ್ಯಾರಂಟಿ ಪಿರಿಯೆಡ್, ವೇಯ್ಟಿಂಗ್ ಪಿರಿಯೆಡ್ ಮುಗಿತು, ಇನ್ನೇನಿದ್ರೂ ಫೈಟಿಂಗ್ ಪಿರಿಯೆಡ್ ಎಂಬ ಆಟ. ಸದ್ಯ ಕಾಂಗ್ರೆಸ್ ಶಾಸಕರೆಲ್ಲರೂ ಒಂದೇ ಭ್ರಷ್ಟಾಚಾರದಡಿಯಲ್ಲಿ ಅನುದಾನದ ಕೊರತೆ ಆರೋಪ ಮಾಡುತ್ತಿದ್ದಾರೆ.ಇದನ್ನೂ ಓದಿ: ಮುಂಗಾರು ಚುರುಕು – ಕರಾವಳಿಗೆ ಮೂರು ದಿನ ರೆಡ್ ಅಲರ್ಟ್
ನಮ್ಮದೇ ಸರ್ಕಾರ ಇದ್ದರೂ ಕ್ಷೇತ್ರದಲ್ಲಿ ಶಾಸಕರ ಅಸಹಾಯಕತೆಯ ವ್ಯಥೆ. ಈ ನಡುವೆ ಗೃಹ ಸಚಿವ ಪರಮೇಶ್ವರ್ ಕೂಡ ಸಿದ್ದರಾಮಯ್ಯ ಹತ್ರ, ನಮ್ ಹತ್ರ ದುಡ್ಡಿಲ್ಲ ಎಂದಿದ್ದಾರೆ. ಬಾದಾಮಿಯಲ್ಲಿ ಮಾತನಾಡುತ್ತಾ ಅಕ್ಕಿ, ಬೇಳೆ, ಎಣ್ಣೆ ಎಲ್ಲ ಕೊಟ್ಟಿದ್ದೇವೆ ಎಂದು ಹೇಳುವ ಮೂಲಕ ಶಾಸಕರ ಅಸಮಾಧಾನವನ್ನ ಪುಷ್ಟಿಕರಿಸಿದಂತಿದೆ. ಆದರೆ ಯಾವಾಗ ವಿವಾದ ಆಗುತ್ತೆ ಎಂಬ ಸುಳಿವು ಸಿಕ್ಕ ತಕ್ಷಣ ಎಚ್ಚೆತ್ತುಕೊಂಡು ಎಣ್ಣೆ ಎಣ್ಣೆ ಅಂತಾ ತಮಾಷೆ ಮಾಡಿದರು. ಸರ್ಕಾರದ ಬಳಿ ಹಣದ ಕೊರತೆ ಇಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.
ಇನ್ನೂ ಸೋಮವಾರ ಮಾತನಾಡಿದ್ದ ಶಾಸಕ ರಾಜು ಕಾಗೆ ಇಂದು ಬೆಂಗಳೂರಲ್ಲಿಯೂ ಸಮರ್ಥನೆ ಮಾಡಿಕೊಂಡಿದ್ದಾರೆ. ನಾನು ಸಿಎಂ ಮೇಲೆ ಮಂತ್ರಿಗಳ ಆರೋಪ ಮಾಡಿಲ್ಲ. ವ್ಯವಸ್ಥೆ ಬಗ್ಗೆ ಅಸಮಾಧಾನ ಇದೆ. ನಿನ್ನೆ ನಾನು ಮಾಡಿದ ಆರೋಪಕ್ಕೆ ನಾನು ಈಗಲೂ ಬದ್ಧ ಎಂದು ಸ್ಪಷ್ಟಪಡಿಸಿದರು. ಮಂತ್ರಿಗಳು ನಮಗೆ ಸಿಗ್ತಿಲ್ಲ, ವಾರದಲ್ಲಿ ಒಂದು ದಿನವಾದರೂ ಮಂತ್ರಿಗಳು ನಮಗೆ ಸಿಗಬೇಕು. ಶಾಸಕರಿಗೆ ಬೆಲೆ ಕೊಡದೇ ಮಂತ್ರಿಗಳು ಹೋಗ್ತಾರೆ. ಯಾವ ಪುರುಷಾರ್ಥಕ ನಾನು ಶಾಸಕನಾಗಿ ಇರಬೇಕು ಎಂದು ಆಕ್ರೋಶ ಹೊರಹಾಕಿದರು. ಇನ್ನೂ ರಾಜು ಕಾಗೆಯ ಆರೋಪವನ್ನ ಸಮರ್ಥಿಸಿಕೊಂಡ ಶಾಸಕ ಬಸವರಾಜ ರಾಯರೆಡ್ಡಿ, ಹಣಕಾಸಿನ ತೊಂದರೆ ಇದೆ, ಗ್ಯಾರಂಟಿ ಅಷ್ಟೇ ಅಲ್ಲ, ಬಿಜೆಪಿ ಅವಧಿಯದ್ದು ಬಾಕಿ ಇತ್ತು. 50 ಕೋಟಿ ರೂ. ಸ್ಪೆಷಲ್ ಗ್ರ್ಯಾಂಟ್ ಕೊಡ್ತಾರೆ ಅಂತ ಹೇಳಿದರು.
ಅಂದಹಾಗೆ 7 ಕಾಂಗ್ರೆಸ್ ಶಾಸಕರದ್ದು ಒಂದೊಂದು ಚಾರ್ಜ್ಶೀಟ್ ಇದೆ. ಶಾಸಕರ ಒಳಗಿನ ಸಂಕಟ ಹೊರಗೆ ಬಂದಿದ್ದೇಗೆ ಎಂಬ ಚರ್ಚೆ ಜೋರಾಗಿದೆ. ಒಟ್ಟಿನಲ್ಲಿ ಅಸಮಾಧಾನವನ್ನ ಹೀಗೆ ಬಿಟ್ಟರೆ ಶಾಸಕರ ನಂಬರ್ ಡಬಲ್ ಆಗುವ ಆತಂಕ ಇದೆ ಎನ್ನಲಾಗಿದೆ. ಹಾಗಾಗಿ ಮದ್ದು ಅರೆಯಲು ಸಿಎಂ ಪ್ಲ್ಯಾನ್ ಮಾಡಿದ್ದು, ಸಚಿವರು-ಶಾಸಕರ ನಡುವೆ ಸಮನ್ವಯತೆ ಸ್ಪೆಷಲ್ ಕ್ಲಾಸ್ ಸಾಧ್ಯತೆ ಇದೆ. ಇದರಿಂದಾದರೂ ಡ್ಯಾಮೇಜ್ ಕಂಟ್ರೋಲ್ ಆಗುತ್ತಾ ಕಾದುನೋಡಬೇಕಿದೆ.ಇದನ್ನೂ ಓದಿ: ತಿರುಪತಿಗೆ ತೆರಳುವ ಭಕ್ತರಿಗೆ ಗುಡ್ ನ್ಯೂಸ್ – ಸೇವೆಗೆ ಸಿದ್ಧವಾಯ್ತು ಕೃಷ್ಣ ರಾಜೇಂದ್ರ ಕಲ್ಯಾಣ ಮಂಟಪ