ಲಕ್ನೋ: ರಾಮಾಯಣ ಕಾಲದಲ್ಲೇ ಟೆಸ್ಟ್ ಟ್ಯೂಬ್ ಬೇಬಿ ಪರಿಕಲ್ಪನೆ ಇತ್ತು ಅದಕ್ಕೆ ಸಾಕ್ಷಿ ಸೀತಾಜಿ ಎಂದು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಹೇಳಿದ್ದಾರೆ.
ನಿನ್ನೆಯೆಷ್ಟೇ ಪತ್ರಿಕೋದ್ಯಮ ಮಹಾಭಾರತದ ಕಾಲದಲ್ಲೇ ಇತ್ತು ಎಂದು ಹೇಳಿದ್ದ ಅವರು ಇವತ್ತು ಸೀತಾಜಿ ಮಡಿಕೆಯಲ್ಲಿ ಜನಿಸಿದ್ದಳು ಎಂದು ಹೇಳಿದ್ದಾರೆ. ಸೀತಾ ಮಾತೆ ಮಡಿಕೆಯಲ್ಲಿ ಜನಿಸಿದ ಕಾರಣ ರಾಮಾಯಣದಲ್ಲೇ ಟೆಸ್ಟ್ ಟ್ಯೂಬ್ ಬೇಬಿ ಪರಿಕಲ್ಪನೆ ಇತ್ತು ಎಂದು ನಾವು ಊಹಿಸಿಕೊಳ್ಳಬಹುದು ಎಂದು ಹೇಳುವ ಮೂಲಕ ಸಮರ್ಥಿಸಿಕೊಂಡಿದ್ದಾರೆ.
ಮಥುರಾ ದಲ್ಲಿ ನಡೆಯುತ್ತಿರುವ ಹಿಂದಿ ಪತ್ರಿಕೋದ್ಯಮ ದಿನದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಹಾಭಾರತ ಯುದ್ಧದ ಚಿತ್ರಣವನ್ನು ಹಸ್ತಿನಾವತಿಯಲ್ಲಿದ್ದ ಧೃತರಾಷ್ಟ್ರನಿಗೆ ಸಂಜಯನು ವಿವರಿಸುತ್ತಿದ್ದನು. ಇದನ್ನು ಗಮನಿಸಿದಾಗ ಲೈವ್ ಟೆಲಿಕಾಸ್ಟ್ ಮಹಾಭಾರತದ ಸಮಯದಲ್ಲೇ ಇತ್ತು ಎಂದು ಹೇಳಿಕೆ ನೀಡಿದ್ದರು.
ಇನ್ನು ನಾರದನನ್ನು ಇವತ್ತಿನ ಗೂಗಲ್ ಗೆ ಹೋಲಿಸಿ ಮಾತನಾಡಿದ ಅವರು ಮಾಹಿತಿಯನ್ನು ಯಾರಿಂದ ಯಾರಿಗೆ ಬೇಕಾದರೂ ಯಾವ ಜಾಗಕ್ಕೂ ಮೂರು ಬಾರಿ ನಾರಾಯಣ ಎಂದು ಹೇಳಿ ತಲುಪಿಸುತ್ತಿದ್ದರು ಎಂದು ತಿಳಿಸಿದ್ದರು.
People say Sita ji was born from an earthen pot, which means at the time of Ramayana, a concept similar to test tube baby must have existed: Dinesh Sharma, UP Deputy CM pic.twitter.com/kcCH7t75Ex
— ANI UP/Uttarakhand (@ANINewsUP) June 1, 2018