ಕೊಪ್ಪಳ: ಗೋವಾದಲ್ಲಿ ನಡೆಯುತ್ತಿದ ಭಯಾನಕ ಕಲರ್ ಬೋರ್ಡ್ ಜೂಜಾಟ ದಂಧೆ ಕೊಪ್ಪಳಕ್ಕೂ ಕಾಲಿಟ್ಟಿದೆ. ಗಂಗಾವತಿಯಲ್ಲಿ ಕಳೆದ ಒಂದು ವಾರದಿಂದ ಕಲರ್ ಬೋರ್ಡ್ ಜೂಜಾಟ ಆರಂಭವಾಗಿದೆ.
ವರಲಕ್ಷ್ಮಿ ಕ್ರಿಯೇಷನ್ ಅಸೋಶಿಯೇಷನ್ ನಿಂದ ಈ ಜೂಜಾಟ ನಡೆಯುತ್ತಿದೆ. ಗಂಗಾವತಿ ನಗರದಲ್ಲಿ ನಿಷೇಧಿತ ಕಲರ್ ಬೋರ್ಡ್ ಜೂಜಾಟವನ್ನು ಲಾಟ್ರಿ ಬಸವ ಮತ್ತು ಯಮನೂರ ಕುಲಂ ಕುಲ್ಲಾಗಿ ಆಟ ನಡೆಸುತ್ತಿದ್ದು, ಇದಕ್ಕೆ ಯುವಕರು ಬಲಿಯಾಗ್ತಿದ್ದಾರೆ.
ಈ ಜೂಜಾಟ, ಇಸ್ಪೀಟ್ ಅಂದರ್- ಬಾಹರ್ ಗಿಂತಲೂ ಡೆಂಜರ್ ಎಂಬುದು ಹಣ ಕಳೆದುಕೊಂಡವರ ಮಾತಾಗಿದೆ. ಇಂಥ ಜೂಜಾಟ ಬಹಿರಂಗವಾಗಿಯೇ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ. ಜೂಜಾಟ ದಂಧೆಗೆ ಪೊಲೀಸ್ ಇಲಾಖೆಯೇ ಬೆಂಗಾವಲಾಗಿ ನಿಂತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಏನಿದು ದಂಧೆ?:
ಕೌಂಟರ್ ನಲ್ಲಿ ಹಣ ಕೊಟ್ಟು, 20, 50, 100 ರೂಪಾಯಿಯ ವೋಚರ್ ಪಡೆಯುವ ಯುವಕರು ಜೂಜಾಟದಲ್ಲಿ ಭಾಗಿಯಾಗುತ್ತಾರೆ. ಒಟ್ಟು 6 ಬಣ್ಣದ ದೊಡ್ಡ ಬೋರ್ಡ್ ಗೆ ಮೂರು ಬಾಣ ಎಸೆಯಲಾಗುತ್ತದೆ. ಬಾಣ ಬಿದ್ದ ಕಲರ್ ಗೆ ಹಣ ಕಟ್ಟಿದವರಿಗೆ ಹಣ, ಬಾಕಿ ಹಣ ಕಂಪನಿಗೆ ಎಂಬ ನಿಯಮವಿದೆ. ಈ ಡೆಂಜರ್ ಗೇಮ್ ನ ವಿಡಿಯೋ ಮಾಡಲು ಮುಂದಾದ ಮಾಧ್ಯಮದವರ ಮೇಲೆಯೂ ಹಲ್ಲೆಗೆ ಮುಂದಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv