ಮುರಿಯುತ್ತಿಲ್ಲ ಅತೃಪ್ತರ ಒಗ್ಗಟ್ಟು – ದೋಸ್ತಿಗಳು ಕಂಗಾಲು

Public TV
1 Min Read
rebel congress jds resigns B 1 1000x329 1 768x422 1

ಬೆಂಗಳೂರು: ಅತೃಪ್ತರ ಹಠ ಕಂಡು ದೋಸ್ತಿ ನಾಯಕರು ದಿಕ್ಕು ಕಾಣದಂತಾಗಿದ್ದಾರೆ. ಪಕ್ಷದ ಹಿರಿಯ ನಾಯಕರ ಮನವೊಲಿಕೆಗೂ ಜಗ್ಗದ ಅತೃಪ್ತರ ಮೇಲೆ ವಿಪ್ ಅಸ್ತ್ರ ಪ್ರಯೋಗಿಸಲು ದೋಸ್ತಿಗಳು ಮುಂದಾಗಿದ್ದರೂ ಅತೃಪ್ತರು ಮಾತ್ರ ಡೋಂಟ್ ಕೇರ್ ಅಂತಿದ್ದಾರೆ.

ಹೌದು, ಸದನದಲ್ಲಿ ಕಾಲ ವಿಳಂಬ, ಕಾನೂನು ಕಗ್ಗಂಟ್ಟಿನ ಆಟಕ್ಕೆ ಅತೃಪ್ತರು ಬಗ್ಗುತ್ತಾರೆ ಎಂಬ ದೋಸ್ತಿಗಳ ಪ್ಲಾನ್ ಮಕಾಡೆ ಮಲಗಿದೆ. ಎಷ್ಟೇ ಕಾನೂನು ಕಗ್ಗಂಟ್ಟಿಗೆ ದೋಸ್ತಿಗಳು ಯತ್ನಿಸಿದರೂ ನಮ್ಮ ನಿರ್ಧಾರ ಅಚಲ, ನಮ್ಮ ಒಗಟ್ಟು ಹೀಗೆ ಇರುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ರೆಬೆಲ್ ಶಾಸಕರು ರವಾನಿಸಿದ್ದಾರೆ. ಅಲ್ಲದೆ ಇತ್ತ ರಾಜೀನಾಮೆ ವಾಪಾಸ್ ಪಡೆದ ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ವಿರುದ್ಧ ಅತೃಪ್ತರು ಸಿಡಿದೆದ್ದಿದ್ದಾರೆ.

REBEL MLA 1

ನಾವು ಎಲ್ಲದಕ್ಕೂ ಸಿದ್ಧವಾಗಿದ್ದೇವೆ. ನಮ್ಮ ಗುರಿ, ನಿರ್ಧಾರ ಸ್ಪಷ್ಟವಿದೆ ಎಂಬ ಅತೃಪ್ತರ ಸಂದೇಶದಿಂದ ದೋಸ್ತಿಗಳು ಕಂಗಾಲಾಗಿದ್ದಾರೆ. ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಾಸ್ ಪಡೆದಿರುವುದಕ್ಕೂ ನಮಗೂ ಸಂಬಂಧ ಇಲ್ಲ. ಅವರ ದಾರಿಗೆ ನಾವು ಬರಲ್ಲ, ಅವರನ್ನ ನಾವು ಫಾಲೋ ಮಾಡಲ್ಲ ಎಂದು ಅತೃಪ್ತ ಶಾಸಕರು ಧೃಢ ನಿರ್ಧಾರ ಮಾಡಿದ್ದಾರೆ. ಇದರಿಂದ ರಾಮಲಿಂಗಾ ರೆಡ್ಡಿ ಪುನರ್ ಆಗಮನ ಅತೃಪ್ತರ ಒಗ್ಗಟ್ಟು ಮುರಿಯೋಕೆ ಅಸ್ತ್ರ ಎಂಬ ದೋಸ್ತಿಗಳ ಲೆಕ್ಕಚಾರ ಸಂಪೂರ್ಣ ಉಲ್ಟಾ ಆಗಿದೆ.

rebel tirugetu

ಸಂಧಾನಕ್ಕೂ ಮಣಿಯುತ್ತಿಲ್ಲ, ರಾಮಲಿಂಗಾ ರೆಡ್ಡಿ ಯೂಟರ್ನ್ ಗೂ ಅತೃಪ್ತರು ಬದಲಾಗುತ್ತಿಲ್ಲ. ಇತ್ತ ಅತೃಪ್ತರು ವಿಪ್ ಅಸ್ತ್ರಕ್ಕೂ ಹೆದರುತ್ತಿಲ್ಲ. ಈ ರೆಬೆಲ್ ಶಾಸಕರ ಒಗ್ಗಟ್ಟು ಸಮಿಶ್ರ ಸರ್ಕಾರದ ಹಡಗನ್ನು ಮುಳುಗಿಸುತ್ತೆ ಎಂಬ ಮಾತುಗಳು ಕೇಳಿಬರುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *