ಬೆಂಗಳೂರು: ಜಮ್ಮು-ಕಾಶ್ಮೀರದಲ್ಲಿ ಉಗ್ರನ ಆತ್ಮಾಹುತಿ ದಾಳಿಯಲ್ಲಿ 40 ಯೋಧರನ್ನು ಕಳೆದುಕೊಂಡ ದುಃಖ ಇನ್ನೂ ಮಾಸಿಲ್ಲ. ದೇಶದ ಜನತೆ ಇನನೂ ಆ ನೋವಿನಿಂದ ಹೊರಬಂದಿಲ್ಲ. ಆದ್ರೆ ಈ ಮಧ್ಯೆ 10 ಕೋಟಿ ವೆಚ್ಚದಲ್ಲಿ ಚಾರ್ಟರ್ಡ್ ಫ್ಲೈಟ್ ಹತ್ತಲು 150 ರಾಜಕಾರಣಿಗಳು ರೆಡಿಯಾಗಿದ್ದಾರೆ.
ಹೌದು. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರ ನೇತೃತ್ವದಲ್ಲಿ ರಾಜಕಾರಣಿಗಳು ಟ್ರಿಪ್ ಹೋಗಲಿದ್ದಾರೆ. ಕೆಂಪೇಗೌಡ ಜಯಂತಿ ಪ್ರಯುಕ್ತ ದೋಸ್ತಿ ಪಡೆ ವಿದೇಶಕ್ಕೆ ಹೊರಟಿದ್ದು, ಕಾರ್ಯಕ್ರಮದ ಹೆಸರಲ್ಲಿ 3 ದಿನ 10 ಕೋಟಿ ವಚ್ಚದಲ್ಲಿ ಮಜಾ ಮಾಡಲಿದ್ದಾರೆ. ಸಿಂಗಾಪುರದಲ್ಲಿ ಫೆಬ್ರವರಿ 23ರಂದು ಕೆಂಪೇಗೌಡ ಜಯಂತಿ ನಡೆಯಲಿದೆ.
ಆದ್ರೆ ಇದೀಗ ಯೋಧರನ್ನು ಕಳೆದುಕೊಂಡ ನೋವು ಒಂದೆಡೆಯಾದ್ರೆ, ರೈತರ ಸಾಲ ಮನ್ನಾ ಕೂಡ ಸಂಪೂರ್ಣವಾಗಿ ಆಗಿಲ್ಲ. ಈ ಮಧ್ಯೆ ಇದ್ಯಾವುದರ ಟೆನ್ಶನ್ ಇಲ್ಲವೆಂಬಂತೆ ಇಷ್ಟೊಂದು ಮಂದಿ ಹೋಗೋದು ಸರೀನಾ ಎಂದು ಸಾರ್ವಜನಿಕರು ಮುಖ್ಯಮಂತ್ರಿಗಳನ್ನು ಪ್ರಶ್ನಿಸುತ್ತಿದ್ದಾರೆ.
ಎರಡೂ ಪಕ್ಷದ ಶಾಸಕರು ಹಾಗೂ ಸಂಸದರು ಹೋಗುತ್ತಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ ಹಾಗೂ ಬಿಬಿಎಂಪಿ ಕೂಡ ಇದಕ್ಕೆ ಸಹಯೋಗ ನೀಡುತ್ತಿದೆ. ಜನಪ್ರತಿನಿಧಿಗಳಿಗೆ ಉಳಿದುಕೊಳ್ಳಲು ಐಷಾರಾಮಿ ಹೊಟೇಲ್ ಗಳನ್ನು ಕೂಡ ಬುಕ್ ಮಾಡಿಕೊಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv