ಅಬ್ದುಲ್ ಕಲಾಂರನ್ನು ಸ್ಮರಿಸಿ ಬಿಎಸ್‍ವೈಯಿಂದ ದಿನಚರಿ ಬಗ್ಗೆ ಟ್ವೀಟ್

Public TV
1 Min Read
BSY ABDUL

ಬೆಂಗಳೂರು: ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಮುಖ್ಯಮಂತ್ರಿಯಾಗಿ ಪದಗ್ರಹಣ ಸ್ವೀಕರಿಸಿದ ನಂತರ ಬಿಎಸ್‍ವೈ ಅವರು ಸರಣಿ ಟ್ವೀಟ್ ಮಾಡಿದ್ದಾರೆ.

ಮೊದಲಿಗೆ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರನ್ನು ಸಿಎಂ ಯಡಿಯೂರಪ್ಪ ಅವರು ಸ್ಮರಿಸಿದ್ದಾರೆ. “ದೇಶ ಕಂಡ ಜನಸಾಮಾನ್ಯರ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಪುಣ್ಯತಿಥಿಯಂದು ಸ್ಮರಿಸೋಣ” ಎಂದು ಟ್ವೀಟ್ ಮಾಡಿದ್ದು, ಅವರ ಫೋಟೋ ಹಾಕಿ ಜೊತೆಗೆ #missileman ಎಂಬ ಹ್ಯಾಶ್ ಟ್ಯಾಗ್ ಹಾಕಿದ್ದಾರೆ.

ನಂತರ ತಮ್ಮ ದಿನಚರಿಯನ್ನೂ ಟ್ವಿಟ್ಟರ್ ಮೂಲಕವೇ ಹಂಚಿಕೊಂಡಿದ್ದಾರೆ. “ಇಂದು ಗವಿಮಠ ಶ್ರೀ ಸಿದ್ದಲಿಂಗೇಶ್ವರ ಸವಾಮಿ ದೇವಸ್ಥಾನಕ್ಕೆ ಭೇಟಿ ನೀಡುತ್ತೇನೆ. ಬೂಕನಕೆರೆ ಗ್ರಾಮದೇವತೆ ದರ್ಶನ ಹಾಗೂ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತೇನೆ. ಅಲ್ಲಿಂದ ಮೇಲುಕೋಟೆಯ ಶ್ರೀ ಚೆಲುವನಾರಾಯಣ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದೇನೆ” ಎಂದು ಮಾಹಿತಿ ನೀಡಿದ್ದಾರೆ.

ಶುಕ್ರವಾರ ಸಂಜೆ “ನನ್ನ ಮೇಲೆ ಇಟ್ಟಿರುವ ನಂಬಿಕೆ ಅಪಾರ. ಪ್ರಗತಿ, ಸಮೃದ್ಧಿ, ಸರ್ವರ ಭಾಗಿತ್ವ, ಅಭಿವೃದ್ಧಿಯ 4 ಅಂಶಗಳನ್ನು ಆಡಳಿತದ ಆಧಾರವಾಗಿಸಿ ಕರ್ನಾಟಕದ ಜನತೆಯನ್ನು ಪ್ರತಿನಿಧಿಸಿ, ಅವರ ಅಶೋತ್ತರಗಳನ್ನು ಪೂರೈಸುತ್ತೇನೆ. ಬಿಜೆಪಿ ಶಾಸಕರ, ಪ್ರತಿಯೊಬ್ಬ ಕಾರ್ಯತರ್ಕರನ್ನು ಅವರ ಅವಿರತ ಶ್ರಮ, ದೃಢ ಪ್ರಯತ್ನ ಮತ್ತು ಸಮರ್ಪಣಾ ಭಾವಕ್ಕಾಗಿ ವಂದಿಸುತ್ತೇನೆ” ಎಂದು ಯಡಿಯೂರಪ್ಪ ಅವರು ಟ್ವೀಟ್ ಮಾಡಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *