Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪಕ್ಷದ ಶಾಸಕರ ಮೇಲೆ ಸಿಎಂಗೆ ಗುಮಾನಿ? ಶಾಸಕರ ಚಲನವಲನ ಬಗ್ಗೆ ಗುಪ್ತಚರ ಕಣ್ಣು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಪಕ್ಷದ ಶಾಸಕರ ಮೇಲೆ ಸಿಎಂಗೆ ಗುಮಾನಿ? ಶಾಸಕರ ಚಲನವಲನ ಬಗ್ಗೆ ಗುಪ್ತಚರ ಕಣ್ಣು

Bengaluru City

ಪಕ್ಷದ ಶಾಸಕರ ಮೇಲೆ ಸಿಎಂಗೆ ಗುಮಾನಿ? ಶಾಸಕರ ಚಲನವಲನ ಬಗ್ಗೆ ಗುಪ್ತಚರ ಕಣ್ಣು

Public TV
Last updated: February 22, 2020 12:39 pm
Public TV
Share
3 Min Read
BSY 3
SHARE

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಬಂದು ಬರೋಬ್ಬರಿ ಆರು ತಿಂಗಳು ತುಂಬಿವೆ. ಆದರೆ ಆರು ತಿಂಗಳ ನಂತರ ಸರ್ಕಾರ, ಪಕ್ಷ, ಸಚಿವರು, ಶಾಸಕರು, ವಲಸಿಗರು ಹೀಗೆ ಎಲ್ಲರ ಎಲ್ಲದರ ವರಸೆಗಳು ನಿಧಾನಕ್ಕೆ ಬದಲಾಗತೊಡಗಿವೆ. ಆರು ತಿಂಗಳ ಹಿಂದಿನ ಬಿಜೆಪಿಗೂ ಈಗಿನ ಬಿಜೆಪಿಗೂ ನಡುವೆ ಬಹಳಷ್ಟು ಬದಲಾವಣೆಗಳು ಆಗಿವೆ, ಆಗತೊಡಗಿವೆ. ಯಡಿಯೂರಪ್ಪ ನಾಯಕತ್ವದಲ್ಲಿ ನಾವೆಲ್ಲ ಮುಂದೆ ಹೋಗ್ತೀವಿ, ಉತ್ತಮ ಆಡಳಿತ ಕೊಡ್ತೀವಿ, ಪ್ರಸಕ್ತ ಸರ್ಕಾರದ ಈ ಅವಧಿ ಪೂರೈಸಿ ಮುಂದಿನ ಬಾರಿಗೂ ಬಿಜೆಪಿಯೇ ಬರೋ ಹಾಗೆ ಮಾಡ್ತೀವಿ ಅಂದವರ ಮನಸ್ಥಿತಿ- ಹೇಳಿಕೆಗಳು, ನಿಲುವು- ನಡೆಗಳು ಬಣ್ಣ ಬದಲಾಯಿಸತೊಡಗಿವೆ. ಈಗ ಸರ್ಕಾರ ಮತ್ತು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಇತ್ತೀಚಿನ ವಿದ್ಯಮಾನಗಳಿಂದ ಸಾಬೀತಾಗಿದೆ. ಖುದ್ದು ಈಗಲೂ ಪಕ್ಷದ ಮೇರು ನಾಯಕ, ಸರ್ಕಾರದಲ್ಲೂ ಹಿಡಿತ ಇಟ್ಟುಕೊಂಡಿರುವ ಸಿಎಂ ಯಡಿಯೂರಪ್ಪ ಅವರಿಗೆ ಖುದ್ದು ಪಕ್ಷದ ಶಾಸಕರ ಮೇಲೆಯೇ ನಂಬಿಕೆ ಹೋಗತೊಡಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಯಡಿಯೂರಪ್ಪ ಅವರಿಗೆ ಶಾಸಕರ ನಡವಳಿಕೆಗಳ ಮೇಲೆ ಅದಾಗಲೇ ಗುಮಾನಿ ಶುರುವಾಗಿದೆ.

BSY Shettar Bommai

ಇತ್ತೀಚೆಗೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ನಿವಾಸದಲ್ಲಿ ಬಿಜೆಪಿ ಶಾಸಕರು ಸಭೆ ನಡೆಸಿದ್ದರು. ಆ ಸಭೆಯ ಉದ್ದೇಶ ಬಳಿಕ ಅದು ಮಾಧ್ಯಮಗಳಲ್ಲಿ ವರದಿಯಾದ ರೀತಿ ಏನೇ ಇರಬಹುದು. ಆದರೆ ಹೀಗೆ ತಮ್ಮ ಗಮನಕ್ಕೆ ಬರದೇ ಶಾಸಕರು ಗುಪ್ತ ಸಭೆ ಮಾಡಿದ್ದಕ್ಕೆ ಯಡಿಯೂರಪ್ಪ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ ಶೆಟ್ಟರ್ ನಿವಾಸದ ಸಭೆಯ ಬೆನ್ನಲ್ಲೇ ಪಂಚಮಸಾಲಿ ಶಾಸಕರು ಸಹ ಸ್ವಾಮೀಜಿಗಳ ಜೊತೆ ಸಭೆ ನಡೆಸಿರುವುದು ಯಡಿಯೂರಪ್ಪ ಅವರಲ್ಲಿ ಅಸಮಾಧಾನ ಹಟ್ಟಿಸಿದೆ ಎಂದು ಅವರ ಆಪ್ತ ವರ್ಗ ಹೇಳಿಕೊಂಡಿದೆ. ಇದರ ಜೊತೆ ಬೇರೆ ಬೇರೆ ಭಿನ್ನಮತಗಳು, ರಹಸ್ಯ ಚಲನವಲನಗಳು ನಡೆಯುತ್ತಿರುವುದು ಯಡಿಯೂರಪ್ಪ ಅವರ ಗಮನಕ್ಕೆ ಬಂದಿದೆ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಕ್ಷದ ಹಲವು ಶಾಸಕರ ಚಲನವಲನಗಳ ಮಾಹಿತಿ ಪಡೆಯಲು ಗುಪ್ತಚರ ದಳವನ್ನು ಛೂ ಬಿಟ್ಟಿದ್ದಾರೆ ಎನ್ನಲಾಗಿದೆ.

BJP FLAG

ಶೆಟ್ಟರ್ ನಿವಾಸದ ಸಭೆ ಬಳಿಕ ಎಚ್ಚೆತ್ತುಕೊಂಡ ಸಿಎಂ ಬಿಎಸ್ ಯಡಿಯೂರಪ್ಪ ರಾಜ್ಯ ಗುಪ್ತಚರ ಇಲಾಖೆಗೆ ಸಿಎಂ ಹೊಸ ಟಾಸ್ಕ್ ನೀಡಿದ್ದಾರೆ. ಸಿಎಂ ಗುಪ್ತಚರ ಇಲಾಖೆಗೆ ನೀಡಿದ ಟಾಸ್ಕ್ ನಿಂದಾಗಿ ಯಾರೇ ಪ್ರತ್ಯೇಕ ಸಭೆ ನಡೆಸಿದ್ರು ತಕ್ಷಣ ಮಾಹಿತಿ ಸಿಎಂಗೆ ರವಾನೆ ಆಗಲಿದೆ ಎನ್ನಲಾಗಿದೆ.

ಸಂಜೆ ಆಗ್ತಿದ್ದಂತೆ ಕಾರ್ಯಪ್ರವೃತ್ತರಾಗುವ ಆ ಇಂಟಲಿಜೆನ್ಸ್ ತಂಡ ಬೆಂಗಳೂರಿನ ಪಂಚತಾರಾ ಹೋಟೆಲ್ ಗಳ ಮೇಲೆ ಹದ್ದಿನ ಕಣ್ಣು ಇಟ್ಟಿದೆ ಎನ್ನಲಾಗಿದೆ. ಗುಪ್ತಚರ ಇಲಾಖೆಗೆ ಬೆಂಗಳೂರಿನ ಎಲ್ಲ ಪಂಚತಾರಾ ಹೋಟೆಲುಗಳಿಗೆ ರೌಂಡ್ಸ್ ಹೊಡೆಯಲು ಸಿಎಂ ಗುಪ್ತಚರ ಇಲಾಖೆಗೆ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ. ಸಿಎಂ ಸೂಚನೆ ಮೇರೆಗೆ ಪಂಚತಾರಾ ಹೋಟೆಲ್ ಗಳಿಗೆ ಗುಪ್ತಚರ ಇಲಾಖೆ ಅಧಿಕಾರಿಗಳು ರೌಂಡ್ಸ್ ಹೊಡೆಯುತ್ತಿದ್ದಾರೆ ಎನ್ನಲಾಗಿದೆ.

BJP FLAG 1 copy

ಶಾಸಕರು ಪ್ರತ್ಯೇಕ ಸಭೆ ನಡೆಸುತ್ತಿರುವ ಮಾಹಿತಿ ಸಿಕ್ಕರೆ ತಕ್ಷಣ ಸಿಎಂಗೆ ಮಾಹಿತಿ ನೀಡಲಿದೆಯಂತೆ ಗುಪ್ತಚರ ಇಲಾಖೆಯ ಈ ತಂಡ. ಪ್ರತ್ಯೇಕ ಸಭೆಯಲ್ಲಿ ಯಾರೆಲ್ಲ ಇದ್ದಾರೆ, ಸಭೆಯ ಅಜೆಂಡಾ ಏನು, ಎಷ್ಟು ಸಮಯ ಸಭೆ ನಡೆಸಿದ್ರು, ಎಲ್ಲಿ ಸಭೆ ನಡೆಸಿದರು ಎಂಬಿತ್ಯಾದಿ ಮಾಹಿತಿ ತಕ್ಷಣ ಸಿಎಂಗೆ ರವಾನೆ ಆಗಲಿದೆಯಂತೆ. ಸಂಜೆಯಾಗ್ತಿದ್ದಂತೆ ಬೆಂಗಳೂರಿನಲ್ಲಿ ಯಾರೆಲ್ಲ ಬಿಜೆಪಿ ಶಾಸಕರಿದ್ದಾರೆ, ಲೋಕೇಶನ್ ಎಲ್ಲಿ, ಮೀಟಿಂಗ್ ಏನಾದ್ರು ಮಾಡ್ತಿದ್ದಾರಾ ಅಂತಲೂ ಈ ತಂಡ ಪತ್ತೆ ಹಚ್ಚುತ್ತಿದೆ ಎನ್ನಲಾಗಿದೆ. ಗುಪ್ತಚರ ಇಲಾಖೆಯ ಈ ತಂಡ ತಡರಾತ್ರಿವರೆಗೂ ಪಂಚತಾರ ಹೋಟೆಲ್ ಗಳ ರೌಂಡ್ಸ್ ಹೊಡೆಯುತ್ತಿದೆ ಎನ್ನಲಾಗಿದೆ. ಆ ಮೂಲಕ ಸರ್ಕಾರ ಉಳಿಸಿ ಉಳಿದ ಅವಧಿವರೆಗೂ ಎದುರಾಗುವ ಸಮಸ್ಯೆಗಳನ್ನು ಬರದಂತೆ ತಡೆಯಲು ಸಿಎಂ ಯಡಿಯೂರಪ್ಪ ಈ ಮುನ್ನೆಚ್ಚರಿಕೆ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

TAGGED:bjpBJP MLAscm yeddyurappaDepartment of IntelligencePublic TVಗುಪ್ತಚರ ಇಲಾಖೆಪಬ್ಲಿಕ್ ಟಿವಿಬಿಜೆಪಿಬಿಜೆಪಿ ಶಾಸಕರುಸಿಎಂ ಯಡಿಯೂರಪ್ಪ
Share This Article
Facebook Whatsapp Whatsapp Telegram

Cinema news

father movie team
ಭಾವುಕ ಪ್ರಪಂಚಕ್ಕೆ ಕರೆದೊಯ್ಯುವ ‘ಫಾದರ್’ ಥೀಮ್ ಸಾಂಗ್
Cinema Latest Sandalwood Top Stories
Toxic Nayanatara
ಟಾಕ್ಸಿಕ್ ಟೀಮ್‌ನಿಂದ ನಯನತಾರಾ ಪಾತ್ರದ ಫಸ್ಟ್ ಲುಕ್ ರಿಲೀಸ್
Cinema Latest Sandalwood Top Stories
New Year Album Music
ಹೊಸ ವರ್ಷಕ್ಕೆ ಹೊಸ ಸಂಗೀತ ಸ್ಪರ್ಶ: ನ್ಯೂ ಇಯರ್ ಆಲ್ಬಂ
Cinema Latest Sandalwood Top Stories
gilli ashwini gowda
ಕೈಗೊಂಬೆಗಳು ಅಂತ ಧ್ರುವಂತ್‌, ಅಶ್ವಿನಿ ಕೆಣಕಿದ ಗಿಲ್ಲಿ – ಬಾರೋ ಅಖಾಡಕ್ಕೆ ಅಂತ ತೊಡೆ ತಟ್ಟಿದ ಅಶ್ವಿನಿ
Cinema Latest Top Stories TV Shows

You Might Also Like

jaishankar wang yi
Latest

ಕದನ ವಿರಾಮ ನಿರ್ಧಾರದಲ್ಲಿ ಮೂರನೇ ವ್ಯಕ್ತಿ ಭಾಗಿಯಾಗಿಲ್ಲ: ಚೀನಾಗೆ ಭಾರತ ತಿರುಗೇಟು

Public TV
By Public TV
8 minutes ago
CRIME
Crime

ಚಲಿಸುತ್ತಿದ್ದ ವಾಹನದಲ್ಲೇ 2 ಗಂಟೆ ಗ್ಯಾಂಗ್ ರೇಪ್ –  ಮಹಿಳೆಯನ್ನ ರಸ್ತೆಗೆ ಎಸೆದು ದುರುಳರು ಪರಾರಿ

Public TV
By Public TV
11 minutes ago
G Parameshwar
Bengaluru City

ಕುಡಿದ ಎಲ್ಲರನ್ನೂ ಮನೆಗೆ ಕರೆದುಕೊಂಡು ಹೋಗಿ ಬಿಡಲ್ಲ, ಡ್ರಿಂಕ್ & ಡ್ರೈವ್ ಕೇಸ್ ಇರುತ್ತೆ: ಪರಮೇಶ್ವರ್ ಸ್ಪಷ್ಟನೆ

Public TV
By Public TV
1 hour ago
Siddaramaiah Pinarayi Vijayan
Latest

ಇತ್ತ ಕೋಗಿಲು ಲೇಔಟ್‌ ಜಟಾಪಟಿ, ಅತ್ತ ಕೇರಳ & ಕರ್ನಾಟಕ ಸಿಎಂ ಹ್ಯಾಂಡ್‌ಶೇಕ್‌

Public TV
By Public TV
1 hour ago
Vijayapura Bidar Tourist place
Bidar

ಹೊಸ ವರ್ಷಕ್ಕೆ ಕ್ಷಣಗಣನೆ – ವಿಜಯಪುರದ ಗೋಲಗುಂಬಜ್‌ನಲ್ಲಿ ತುಂಬಿ ತುಳುಕುತ್ತಿರುವ ಜನ

Public TV
By Public TV
2 hours ago
Mandya Cauvery River Bank Prohibited For New Year Celebration
Districts

ನ್ಯೂ ಇಯರ್ ಆಚರಣೆಗೆ ಮಂಡ್ಯ ಜಿಲ್ಲೆ ಸಜ್ಜು – ಕಾವೇರಿ ತೀರದಲ್ಲಿ ನಿಷೇಧಾಜ್ಞೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?