ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ವಿಧಾನಸೌಧದ ಆವರಣದಲ್ಲಿ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿಯ ವಿವಿಧ ಮಾದರಿಯ ನೂತನ ಬಸ್ಸುಗಳಿಗೆ ಚಾಲನೆ ನೀಡಿದರು.
ಸಿಎಂ ಬಿ.ಎಸ್.ಯಡಿಯೂರಪ್ಪ ಬಾವುಟ ತೋರಿಸುವುದರ ಮೂಲಕ ಹೊಸ ಬಸ್ಸುಗಳಿಗೆ ಹಸಿರು ನಿಶಾನೆ ತೋರಿಸಿದರು. ಕೆಎಸ್ಆರ್ಟಿಸಿಯ ವಿವಿಧ ಮಾದರಿಯ ಬಸ್ಗಳಾದ ಅಂಬಾರಿ ಡ್ರೀಮ್ ಕ್ಲಾಸ್- 5, ಐರಾವತ ಕ್ಲಾಸ್- 3, ಐರಾವತ- 4, ನಾನ್ ಎಸಿ ಸ್ಲೀಪರ್- 01, ರಾಜಹಂಸ- 2, ಕರ್ನಾಟಕ ಸಾರಿಗೆ – 5, ಸೇರಿದಂತೆ ಒಟ್ಟು 20 ಬಸ್ಗಳು ಇಂದು ಲೋಕಾರ್ಪಣೆಗೊಂಡವು.
ಈ ವೇಳೆ ಬೆಂಗಳೂರು ಮತ್ತು ಶಿಕಾರಿಪುರ ಮಾರ್ಗದ ಹೊಸ ಬಸ್ಸಿನಲ್ಲಿ ಸಿಎಂ ಯಡಿಯೂರಪ್ಪ ಪ್ರಯಾಣಿಸಿದರು. ವಿಧಾನಸೌಧದ ಆವರಣದಿಂದ ಹೊಸ ಬಸ್ನಲ್ಲಿ ಕೂತು ಸ್ವಲ್ಪ ದೂರ ಪ್ರಯಾಣಿಸಿ ಸಿಎಂ ಸಂತಸಗೊಂಡರು. ಈ ಸಂದರ್ಭದಲ್ಲಿ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಹಾಜರಿದ್ದರು.
ಮುಖ್ಯಮಂತ್ರಿ ಶ್ರೀ @BSYBJP ಅವರು ಇಂದು ವಿಧಾನಸೌಧದ ಆವರಣದಲ್ಲಿ ಕೆಎಸ್ಆರ್ ಟಿಸಿಯ ವಿವಿಧ ಮಾದರಿಯ ನೂತನ ಬಸ್ಸುಗಳಿಗೆ ಚಾಲನೆ ನೀಡಿದರು.
ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ ಶಿಖಾ ಉಪಸ್ಥಿತರಿದ್ದರು. pic.twitter.com/nSamVEDded
— CM of Karnataka (@CMofKarnataka) January 7, 2020