ಬೆಂಗಳೂರು: ಕೊನೆಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಚಿವ ಸಂಪುಟದ ಪಟ್ಟಿ ಬಿಡುಗಡೆಯಾಗಿದ್ದು, ಸಚಿವರಾಗುವ 17 ಮಂದಿ ಶಾಸಕರ ಹೆಸರು ಫೈನಲ್ ಆಗಿದೆ.
ಅಮಿತ್ ಶಾ ಅವರು ಸೋಮವಾರ ಸಂಜೆ ಫೈನಲ್ ಮಾಡಿ ಸಚಿವರ ಪಟ್ಟಿಯನ್ನು ತಯಾರು ಮಾಡಿಕೊಟ್ಟಿದ್ದರು. ಆದರೆ ಸಚಿವ ಸಂಪುಟ ಪಟ್ಟಿಯಲ್ಲಿ ಮೆಗಾ ಟ್ವಿಸ್ಟ್ ಆಗಿದ್ದು, ಕೊನೆ ಕ್ಷಣದಲ್ಲಿ ಪಟ್ಟು ಹಿಡಿದು ಸಿಎಂ ಯಡಿಯೂರಪ್ಪ ಅವರು ಬದಲಾವಣೆ ಮಾಡಿದ್ದಾರೆ. ಬೆಳಗಿನ ಜಾವದ ಹೊತ್ತಿಗೆ ಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದ್ದು, ರಾತ್ರಿಯಿಡಿ ಸಿಎಂ ಬಿಎಸ್ವೈ ಕಸರತ್ತು ವರ್ಕೌಟ್ ಆಗಿದೆ ಎಂದು ಹೇಳಲಾಗುತ್ತಿದೆ.
ಅಂತಿಮ ಪಟ್ಟಿ
1. ಗೋವಿಂದ ಕಾರಜೋಳ – ಮಾಜಿ ಸಚಿವ, ಮುಧೋಳ(ಬಾಗಲಕೋಟೆ) ಎಸ್ಸಿ (ಎಡಗೈ)
2. ಡಾ.ಅಶ್ವಥ್ನಾರಾಯಣ್ – ಮಲ್ಲೇಶ್ವರಂ(ಬೆಂಗಳೂರು), ಒಕ್ಕಲಿಗ
3. ಲಕ್ಷ್ಮಣ ಸವದಿ – ಮಾಜಿ ಶಾಸಕ, ಬಣಜಿಗ ಲಿಂಗಾಯತ, ಎಂಎಲ್ಸಿ ಮಾಡಲು ತೀರ್ಮಾನ
4. ಈಶ್ವರಪ್ಪ, ಮಾಜಿ ಡಿಸಿಎಂ – ಶಿವಮೊಗ್ಗ, ಕುರುಬ
5. ಆರ್.ಅಶೋಕ್ – ಮಾಜಿ ಡಿಸಿಎಂ ಪದ್ಮನಾಭನಗರ(ಬೆಂಗಳೂರು) ಒಕ್ಕಲಿಗ
6. ಜಗದೀಶ್ ಶೆಟ್ಟರ್ – ಮಾಜಿ ಸಿಎಂ, ಹುಬ್ಬಳ್ಳಿ ಧಾರವಾಡ, ಲಿಂಗಾಯತ
7. ಶ್ರೀರಾಮುಲು – ಮಾಜಿ ಸಚಿವ, ಮೊಳಕಾಲ್ಮೂರು(ಚಿತ್ರದುರ್ಗ) ಎಸ್ಟಿ, ವಾಲ್ಮೀಕಿ
8. ಸುರೇಶ್ ಕುಮಾರ್ – ಮಾಜಿ ಸಚಿವ, ರಾಜಾಜಿನಗರ(ಬೆಂಗಳೂರು) ಬ್ರಾಹ್ಮಣ, ಪಕ್ಷ ನಿಷ್ಠೆ
9. ವಿ.ಸೋಮಣ್ಣ – ಮಾಜಿ ಸಚಿವ, ಗೋವಿಂದರಾಜನಗರ(ಬೆಂಗಳೂರು) ಲಿಂಗಾಯತ
10. ಸಿಟಿ ರವಿ – ಚಿಕ್ಕಮಗಳೂರು, ಒಕ್ಕಲಿಗ
11. ಬಸವರಾಜ ಬೊಮ್ಮಾಯಿ – ಶಿಗ್ಗಾಂವಿ (ಹಾವೇರಿ) ಲಿಂಗಾಯತ, ಬಿಎಸ್ವೈ ಆಪ್ತ
12. ಕೋಟಾ ಶ್ರೀನಿವಾಸ್ ಪೂಜಾರಿ – ಎಂಎಲ್ಸಿ, ಬಿಲ್ಲವ, ಹಿರಿತನ, ಕರಾವಳಿ ಕೋಟಾ
13. ಜೆಸಿ ಮಾಧುಸ್ವಾಮಿ – ಚಿಕ್ಕನಾಯಕನಹಳ್ಳಿ(ತುಮಕೂರು) ಲಿಂಗಾಯತ, ಬಿಎಸ್ವೈ ಆಪ್ತ
14. ಸಿಸಿ ಪಾಟೀಲ್ – ಮಾಜಿ ಸಚಿವ, ನರಗುಂದ(ಗದಗ) ಲಿಂಗಾಯತ
15. ನಾಗೇಶ್, ಮಾಜಿ ಸಚಿವ, ಮುಳಬಾಗಲು(ಕೋಲಾರ) ಪಕ್ಷೇತರ ಶಾಸಕ, ಎಸ್ಸಿ (ಬಲಗೈ)
16. ಪ್ರಭು ಚೌಹಾಣ್ – ಔರಾದ್(ಬೀದರ್) ಎಸ್ಸಿ (ಲಂಬಾಣಿ)
17. ಶಶಿಕಲಾ ಜೊಲ್ಲೆ – ನಿಪ್ಪಾಣಿ(ಬೆಳಗಾವಿ) ಲಿಂಗಾಯತ
ನಿರಾಣಿ ಮತ್ತು ಬಸವರಾಜ ಬೊಮ್ಮಾಯಿ ಅವರಿಗೆ ಮಂತ್ರಿ ಸ್ಥಾನ ಸಿಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇವರಿಗೆ ಮಂತ್ರಿ ಸ್ಥಾನ ಕೈ ತಪ್ಪಿದೆ.