ಬೆಂಗಳೂರು: ವಿರೋಧ ಇದ್ದರೂ ಸಿಎಂ ಐಷಾರಾಮಿ ಹೊಟೇಲ್ ವ್ಯಾಮೋಹ ಬಿಟ್ಟಿಲ್ಲ. ತಾಜ್ ವೆಸ್ಟ್ ಎಂಡ್ನಲ್ಲಿ ಇನ್ನೂ ಸಿಎಂ ವಾಸ್ತವ್ಯವನ್ನು ಮುಂದುವರಿಸಿದ್ದಾರೆ.
ಇತ್ತಿಚೇಗೆ ಸಿಎಂ ತಾಜ್ ಹೊಟೇಲ್ ಬಿಟ್ಟು ಜೆ.ಪಿ ನಗರದ ಮನೆಗೆ ಶಿಫ್ಟ್ ಆಗಿದ್ದಾರೆ. ಜೆ.ಪಿ ನಗರದ ನಿವಾಸದಿಂದಲೇ ಓಡಾಡುವ ಮನಸ್ಸು ಮಾಡಿದ್ದಾರೆ ಅಂತ ಹೇಳಲಾಗಿತ್ತು. ಆದರೆ ಸಿಎಂ ತಾಜ್ ವಾಸ್ತವ್ಯವನ್ನು ಇನ್ನೂ ಬಿಟ್ಟಿಲ್ಲ. ಈಗಲೂ ತಾಜ್ನಲ್ಲೆ ಸಿಎಂ ವಾಸ್ತವ್ಯ ಹೂಡಿದ್ದಾರೆ.
ಹೀಗಾಗಿ ಕೇವಲ ತೋರ್ಪಡಿಕೆಗೆ ಸಿಎಂ ವಾಸ್ತವ್ಯ ಬದಲಾವಣೆ ಅಂತ ಹೇಳಿಕೊಂಡ್ರಾ, ತಾಜ್ ಬಿಟ್ಟಿದ್ದಾರೆ ಅಂದ್ರು ಮತ್ತೆ ತಾಜ್ನಲ್ಲಿ ವಾಸ್ತವ್ಯ ಹೂಡುತ್ತಿರೋದ್ಯಾಕೆ, ಕೇವಲ ವಿಪಕ್ಷಗಳ ಬಾಯಿ ಮುಚ್ಚಿಸೋಕೆ ಸಿಎಂ ಇಂತಹ ಪ್ಲಾನ್ ಮಾಡಿದ್ರಾ ಎಂಬ ಪ್ರಶ್ನೆಗಳನ್ನು ವಿಪಕ್ಷಗಳು ಕೇಳುತ್ತಿವೆ.
ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಸಿಎಂ ಐಷಾರಾಮಿ ಹೋಟೆಲ್ನಲ್ಲಿ ವಾಸ್ತವ್ಯ ಮಾಡುತ್ತಿದ್ದು, ಗ್ರಾಮವಾಸ್ತವ್ಯ ಮಾಡುತ್ತಿಲ್ಲ ಎಂಬ ಚರ್ಚೆ ಶುರುವಾಗಿತ್ತು. ಅದರ ಬೆನ್ನಲ್ಲೇ ಸಿಎಂ ಗ್ರಾಮ ವಾಸ್ತವ್ಯ ಶುರು ಮಾಡುವುದಾಗಿ ಹೇಳಿದ್ದರು. ಇಂದು ಸಿಎಂ ತಮ್ಮ ಸ್ವಕ್ಷೇತ್ರ ಬೊಂಬೆನಗರಿ ಚನ್ನಪಟ್ಟಣಕ್ಕೆ ಭೇಟಿ ನೀಡಿ ಎರಡು ದಿನಗಳ ಕಾಲ ಪ್ರವಾಸವನ್ನ ಹಮ್ಮಿಕೊಂಡಿದ್ದಾರೆ.