ರಾವಣನಿಗಿಂತ ಸಿದ್ದರಾಮಯ್ಯ ದುಷ್ಟ- ಸಂಸದ ನಳೀನ್ ಕುಮಾರ್ ಕಟೀಲ್

Public TV
1 Min Read
UDP NALIN COLLAGE

ಉಡುಪಿ: ಲಂಕಾಧಿಪತಿ ರಾವಣನಿಗಿಂತ ಸಿಎಂ ಸಿದ್ದರಾಮಯ್ಯ ದುಷ್ಟ. ರಾವಣ ಸೀತೆಯ ಅಪಹರಣ ಮಾತ್ರ ಮಾಡಿದ್ದ, ಸಿದ್ದರಾಮಯ್ಯ ಹಿಂದೂ ಸಮಾಜ ಒಡೆದು ರೈತರ ಆತ್ಮಹತ್ಯೆಗೆ ಕಾರಣವಾಗುತ್ತಿದ್ದಾನೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಂಸದ ನಳೀನ್ ಕುಮಾರ್ ಕಟೀಲ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಉಡುಪಿಯ ಕಾಪು ತಾಲೂಕಿನಲ್ಲಿ ನಡೆದ ಪರಿವರ್ತನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು. ಸಿಎಂ ಗೋವು ಹತ್ಯೆಗೆ ಬೆಂಬಲವಾಗಿ ನಿಲ್ಲುತ್ತಿದ್ದಾನೆ. ಹಿಂದೂ ಸಂಸ್ಕೃತಿ ನಾಶ ಮಾಡಲು ಸಿದ್ದರಾಮಯ್ಯ ಹೊರಟಿದ್ದಾನೆ ಎಂದು ತನ್ನ ಬೈಗುಳವನ್ನು ಮುಂದುವರೆಸಿದರು.

ಸಿದ್ದರಾಮಯ್ಯ ಅವರ ಅಧಿಕಾರಾವಧಿ ಮೂರು ತಿಂಗಳಿಗೆ ಮುಗಿಯುತ್ತದೆ. ಯಡಿಯೂರಪ್ಪ ರಾಮಭಕ್ತನಾಗಿ ಬರುತ್ತಾನೆ. ಬಿಎಸ್ ವೈ ರಾಜ್ಯದಲ್ಲಿ ಸವಾರಿ ಮಾಡುತ್ತಾನೆ ಎಂದು ನಳೀನ್ ಕುಮಾರ್ ಕಟೀಲ್ ಪುರಾಣದ ಕಥೆಯನ್ನು ಹೋಲಿಕೆ ಮಾಡಿದರು.

UDP NALIN 1

ಅಧಿಕಾರದಲ್ಲಿರುವ ಸಿದ್ದರಾಮಯ್ಯನನ್ನು ಯಡಿಯೂರಪ್ಪ ನಾಶ ಮಾಡಿಬಿಡುತ್ತಾನೆ. ಸಿದ್ದರಾಮಯ್ಯನಿಗೆ ಯಡಿಯೂರಪ್ಪನಿಂದ ಮುಕ್ತಿ ಸಿಗುತ್ತದೆ ಎಂದು ಹೇಳಿದರು. ಇದೀಗ ಏಕವಚನದಲ್ಲಿ ಸಿಎಂ ಮೇಲೆ ವಾಗ್ದಾಳಿ ನಡೆಸಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸಂಸದ ನಳೀನ್ ಕುಮಾರ್ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಉಡುಪಿಯ ಕಾಪುವಿನಲ್ಲಿ ಸಂಸದ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ ಮುಂದುವರೆಸಿ, ನಿದ್ರಾದೇವಿ ಕುಂಭಕರ್ಣನ ಮಡದಿ. ಕುಂಭಕರ್ಣ ಸತ್ತ ನಂತರ ನಿದ್ರಾದೇವಿ ಸಿಎಂ ಸಿದ್ದರಾಮಯ್ಯರನ್ನು ಅಪ್ಪಿಕೊಂಡಿದ್ದಾಳೆ ಎಂದು ವ್ಯಂಗ್ಯವಾಡಿದರು. ಕುಂಭಕರ್ಣನ ಹತ್ಯೆಯ ನಂತರ ಸಿದ್ದರಾಮಯ್ಯನನ್ನು ನಿದ್ರಾದೇವಿ ಆಶ್ರಯಿಸಿದ್ದಾಳೆ ಎಂದು ನಳೀನ್ ಕುಮಾರ್ ವ್ಯಂಗ್ಯವಾಡಿದ್ದಾರೆ.

UDP NALIN 7

UDP NALIN 6

UDP NALIN 8

UDP NALIN 2

UDP NALIN 3

UDP NALIN 4

UDP NALIN 5

UDP NALIN 11

Share This Article
Leave a Comment

Leave a Reply

Your email address will not be published. Required fields are marked *