ಶಿಕ್ಷಕರ ಮುಂದೆ ಸಂಧಿ ಪಾಠ – ವೇದಿಕೆಯಲ್ಲೇ ಶರವಣರ ಕಾಲೆಳೆದ ಸಿಎಂ

Public TV
1 Min Read
CM SIDDU 2

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇವತ್ತು ಮತ್ತೊಮ್ಮೆ ಕನ್ನಡ ವ್ಯಾಕರಣ ಟೀಚರ್ ಆಗಿ, ಶಿಕ್ಷಕರ ದಿನಾಚರಣೆಯಂದೇ ಶಿಕ್ಷಕರಿಗೆ ಸಂಧಿ ಬಗ್ಗೆ ಪಾಠ ಮಾಡಿದ್ದಾರೆ.

ಶಿಕ್ಷಕರ ದಿನಾಚರಣೆಯ ಅಂಗವಾಗಿ ವಸಂತನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕರ ಕುರಿತು ಮಾತನಾಡಿ, ನನ್ನ ಭಾಷಣದ ವೇಳೆ ಕೆಲವರು ಕನ್ನಡದ ಬಗ್ಗೆ ಭಾಷಣ ಮಾಡ್ತಾರೆ. ಮೊನ್ನೆ ಯಾರೋ ವಿಧಾನಸೌಧದಲ್ಲಿ ಕನ್ನಡ ಶಾಲೆ ಉಳಿಸಬೇಕು ಅಂತ ಮಾತಾಡುತ್ತಿದ್ದರು. ಅದಕ್ಕೆ ನಾನು ಸಂಧಿ ಅಂದ್ರೆ ಗೊತ್ತ ಅಂತ ಕೇಳಿದೆ ಅದಕ್ಕೆ ಆ ವ್ಯಕ್ತಿ ಇಲ್ಲ ಹೇಳಿದ್ದರು.

ಈ ವೇಳೆ ವೇದಿಕೆ ಮೇಲೆ ಸಚಿವ ತನ್ವೀರ್ ಸೇಠ್ ಹಾಗೂ ಎಂಎಲ್‍ಸಿ ಶರವಣಗೆ ಸಂಧಿ ಪಾಠದ ವಿಚಾರ ಹೇಳುತ್ತಾ ಕಿಚಾಯಿಸಿದ ಸಿಎಂ, ನಿನಗೆ ಗೊತ್ತೇನಯ್ಯ ಸಂಧಿ ಅಂದ್ರೆ ಏನು ಅಂತ. ಅದಕ್ಕೆ ನಗುತ್ತಲೆ ಶರವಣ ಸುಮ್ಮನಾದ್ರು. ಬಳಿಕ ಸಿಎಂ ಅವರೇ ನಿನಗೆ ಗೊತ್ತಿಲ್ಲ ಬಿಡು ಅಂತ ಕಾಲೆಳೆದರು. ಶರವಣರನ್ನ ಮತ್ತೆ ಬಿಡದ ಸಿಎಂ ಎಷ್ಟು ಓದುದ್ದೀಯಾ ಅಂತ ಮರು ಪ್ರಶ್ನೆ ಮಾಡಿದ್ರು. ಅದಕ್ಕೆ ಶರವಣ ನಗುತ್ತಲೇ 10 ಕ್ಲಾಸ್ ಅಂದ್ರು.

ಸಚಿವ ತನ್ವೀರ್ ಸೇಠ್ ಅವರಿಗೆ ಸಂಧಿ ಅಂದ್ರೆ ಗೊತ್ತಿಲ್ಲ. ಅವರು ಕಾನ್ವೆಂಟ್ ಓದಿದ್ದು ಅದಕ್ಕೆ ಅವರಿಗೂ ಗೊತ್ತಿಲ್ಲ ಅಂತ ಹೇಳಿದರು. ಸಿಎಂ ಮಾತು ಕೇಳಿ ಇಡೀ ಸಭೆ ನಗೆಗಡಲಲ್ಲಿ ತೇಲಿತು. ಬಳಿಕ ಸಿದ್ದರಾಮಯ್ಯ ಅವರೇ ಸಂಧಿ ಅಂದ್ರೆ ಏನು ಅನ್ನೋ ಪಾಠವನ್ನು ಶಿಕ್ಷಕರಿಗೆ ಹೇಳಿಕೊಟ್ರು.

CM SIDDU

Share This Article
Leave a Comment

Leave a Reply

Your email address will not be published. Required fields are marked *