ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಾರಿ ಯುಗಾದಿ ಆಚರಣೆ ಮಾಡದೇ ಇರಲು ನಿರ್ಧರಿಸಿದ್ದಾರೆ.
ಸಿಎಂ ಪುತ್ರ ರಾಕೇಶ್ ಸಿದ್ಧರಾಮಯ್ಯ ಅಕಾಲಿಕ ನಿಧನರಾಗಿ ಇನ್ನೂ ಒಂದು ವರ್ಷ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಇಂದು ಯುಗಾದಿ ಹಬ್ಬ ಆಚರಣೆಯಿಂದ ಸಿಎಂ ಕುಟುಂಬ ದೂರ ಉಳಿದಿದೆ. ಮಾತ್ರವಲ್ಲದೇ ಈ ವರ್ಷ ಪೂರ್ತಿ ಯಾವುದೇ ಹಬ್ಬಗಳನ್ನು ಆಚರಿಸದಿರಲು ನಿರ್ಧರಿಸಿದ್ದಾರೆ.
- Advertisement 2
- Advertisement 3
ಹೀಗಾಗಿ ನಾಡಿನೆಲ್ಲೆಡೆ ಬರದ ನಡುವೆಯೂ ಜನ ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದರೆ ಸಿಎಂ ಮನೇಲಿ ಯಾವುದೇ ಸಂಭ್ರಮ ಸಡಗರ ಇಲ್ಲ. ಮನೆಗೆ ಬರುವ ಅಧಿಕಾರಿಗಳಿಗೆ, ಸಚಿವರಿಗೆ, ಶಾಸಕರಿಗೆ ಕೇವಲ ಹೋಳಿಗೆ ಕೊಟ್ಟು ಸಿಎಂ ಶುಭಾಶಯ ತಿಳಿಸುತ್ತಿದ್ದಾರೆ.
- Advertisement 4
ಪ್ರತಿ ಹಬ್ಬದಲ್ಲಿ ಯಾರೇ ಸಿಎಂ ನಿವಾಸಕ್ಕೆ ಬಂದ್ರು ಹೋಳಿಗೆ ಕೊಡುವುದು ಪದ್ಧತಿ. ಹೀಗಾಗಿ ಈ ಯುಗಾದಿ ಹಬ್ಬವನ್ನು ಯಾವುದೇ ಸಂಭ್ರವಿಲ್ಲದೇ ಸಿಎಂ ಅದೇ ಸಂಪ್ರದಾಯವನ್ನು ಮುಂದುವರಿಸಿದ್ದಾರೆ.