ಬೆಂಗಳೂರು: ಜೆಡಿಎಸ್ನವರಿಗೆ (JDS) ಆತ್ಮನೇ ಇಲ್ಲ, ಆತ್ಮಸಾಕ್ಷಿ ಮತ ಎಲ್ಲಿ ಬರುತ್ತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಅವರಿಗೆ ಇರೋದೇ 19 ಮತ. ಅವರು ಅಭ್ಯರ್ಥಿ ಹಾಕಬೇಕಿರಲಿಲ್ಲ. ನಾವು ಒಗ್ಗಟ್ಟಾಗಿದ್ದೇವೆ, ಅವರಿಗೆ ನಮ್ಮ ಶಾಸಕರಿಗೆ ಆಸೆ ಆಮಿಷ ತೋರಿಸಿದರು. ಜೆಡಿಎಸ್ ಅವರಿಗೆ ಆತ್ಮನೇ ಇಲ್ಲ, ಇನ್ನು ಆತ್ಮಸಾಕ್ಷಿ ಮತ ಎಲ್ಲಿ ಬರುತ್ತೆ. ಅವರದ್ದು ಜೆಡಿಎಸ್ ಸೆಕ್ಯುಲರ್ ಹೋಗಿದೆ ಎಂದು ಕೈ ಅಲ್ಲಾಡಿಸಿ ವ್ಯಂಗ್ಯವಾಡಿದರು.
ಆಸೆ, ಆಮಿಷಗಳನ್ನ ತೋರಿಸೋರು ಜೆಡಿಎಸ್ ನವರು, ನಾವಲ್ಲ. ನಮ್ಮ ಸಂಪರ್ಕದಲ್ಲಿ ಎಲ್ಲರೂ ಇದ್ದಾರೆ. ಬೇರೆ ಪಕ್ಷದವರು ನಮಗೆ ಹಾಕಬಹುದು. ಬೇರೆ ಪಕ್ಷಗಳಿಂದಲೂ ನಮ್ಮ ಅಭಿವೃದ್ಧಿ ಮೆಚ್ಚಿ ನಮಗೆ ಮತಗಳು ಬರಬಹುದು ಎಂದರು. ಇದನ್ನೂ ಓದಿ: ಬಿಜೆಪಿ-ಜೆಡಿಎಸ್ನವ್ರೂ ನಮಗೆ ವೋಟ್ ಹಾಕ್ತಾರೆ; ನಾವು ಸರ್ಜರಿ ಮಾಡ್ತೀವಿ: ಪ್ರದೀಪ್ ಈಶ್ವರ್
ಎಲ್ಲರೂ ಗೆಲ್ಲಬೇಕು ಅಂತಾಲೇ ಹಾಕುತ್ತಾರೆ. ಆತ್ಮಸಾಕ್ಷಿ ಅಂತ ಮತಗಳಿದ್ಯಾ?, ಮತಗಳೇ ಇಲ್ಲದೇ ಹೇಗೆ ಗೆಲ್ಲುತ್ತಾರೆ. ನಮ್ಮ ಸದಸ್ಯರು ಮೂವರೂ ಗೆಲ್ಲುತ್ತಾರೆ. ಆತ್ಮಸಾಕ್ಷಿ ಮತ ಅಂದ್ರೇ ಏನ್ ಅರ್ಥ. ಆತ್ಮಸಾಕ್ಷಿ ಅಂತ ಮತಗಳು ಇರ್ತಾವಾ..?, ನಮ್ಮವರನ್ಮ ಹೆದರಿಸಿ, ಆಸೆ ಆಮೀಷ ತೋರಿಸಿ ಬೆದರಿಸಿದ್ರು. ಅದಕ್ಕೆ ಎಫ್ ಐ ಆರ್ ಆಗಿದೆ. ನಮ್ಮವರು ಗೆಲ್ಲುತ್ತಾರೆ ಎಮದು ಹೇಳಿದರು.