Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಶ್ರೀಗಳು ಬಂದಾಗ ಬುದ್ಧಿ ಅಂತೀವಿ, ತಳಸಮುದಾಯವರು ಬುದ್ಧಿವಂತರಾದ್ರೂ ಏಕವಚನದಲ್ಲಿ ಮಾತಾಡ್ತಿವಿ: ಸಿಎಂ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Chitradurga | ಶ್ರೀಗಳು ಬಂದಾಗ ಬುದ್ಧಿ ಅಂತೀವಿ, ತಳಸಮುದಾಯವರು ಬುದ್ಧಿವಂತರಾದ್ರೂ ಏಕವಚನದಲ್ಲಿ ಮಾತಾಡ್ತಿವಿ: ಸಿಎಂ

Chitradurga

ಶ್ರೀಗಳು ಬಂದಾಗ ಬುದ್ಧಿ ಅಂತೀವಿ, ತಳಸಮುದಾಯವರು ಬುದ್ಧಿವಂತರಾದ್ರೂ ಏಕವಚನದಲ್ಲಿ ಮಾತಾಡ್ತಿವಿ: ಸಿಎಂ

Public TV
Last updated: July 20, 2024 8:50 pm
Public TV
Share
3 Min Read
CM Siddaramaiah Bhovi Gurpeeth Bhovi Development Corporation
SHARE

– ಶಿಕ್ಷಣದ ಮಹತ್ವ ಸಾರಿದ ಸಿಎಂ

ಚಿತ್ರದುರ್ಗ: ಮೇಲ್ವರ್ಗದ ಶ್ರೀಗಳು ಬಂದಾಗ ಬುದ್ಧಿ ಅಂತೀವಿ. ತಳಸಮುದಾಯವರು ಬುದ್ಧಿವಂತರಾದರು ಏಕವಚನದಲ್ಲಿ ಮಾತಾಡ್ತಿವಿ. ಹೀಗಾಗಿ ಶಿಕ್ಷಣ ಪಡೆಯಬೇಕು, ಸ್ವಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಕರೆ ನೀಡಿದ್ದಾರೆ.

ಭೋವಿ ಗುರುಪೀಠದ (Bhovi Gurpeeth) ಆವರಣದಲ್ಲಿ ನಡೆದ ಇಮ್ಮಡಿ ಸಿದ್ದರಾಮೇಶ್ವರ ಶ್ರೀ ಧೀಕ್ಷಾ ರಜತ ಮಹೋತ್ಸವದಲ್ಲಿ ಅವರು ಮಾತನಾಡಿದರು. ಈ ವೇಳೆ, 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಶ್ರೀಗಳು ಮುಂದಿನ ನೂರು ವರ್ಷಗಳ ಕಾಲ ಭೋವಿ ಗುರುಪೀಠದ ಪೀಠಾಧಿಪತಿ ಆಗಿರಲಿ. ವೈಯಕ್ತಿಕವಾಗಿ ಹಾಗೂ ಸರ್ಕಾರದ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸಿತ್ತೇನೆ. ಭೋವಿ ಗುರುಪೀಠದ ಸಿದ್ದರಾಮೇಶ್ವರ ಶ್ರೀಗಳು ಸದಾ ಭೋವಿ ಸಮಾಜಕ್ಕೆ ಮಾರ್ಗದರ್ಶಕರಾಗಿರಲಿ ಎಂದಿದ್ದಾರೆ.

CM Siddaramaiah Bhovi Gurpeeth

ಶೋಷಿತ, ಹಿಂದುಳಿದ ಸಮಾಜಕ್ಕೆ ಮಾರ್ಗದರ್ಶನ ಮಾಡುವವರು ಇರಬೇಕು. ಬಸವಾದಿ ಶರಣರು, ಅಂಬೇಡ್ಕರ್ ಹೇಳಿದಂತೆ ಸಮಸಮಾಜ ನಿರ್ಮಾಣ ಆಗಬೇಕು. ಅವಕಾಶದಿಂದ ವಂಚಿತ ಜನರು ಮುಖ್ಯವಾಹಿನಿಗೆ ಬರಬೇಕು. ಆಗ ಸಾಮಾಜಿಕ ನ್ಯಾಯ, ಸಮಸಮಾಜ ನಿರ್ಮಾಣ ಸಾಧ್ಯವಾಗಲಿದೆ. ದೇಶಕ್ಕೆ ಸಿಕ್ಕ ಸ್ವಾತಂತ್ರ್ಯ ಸಾರ್ಥಕವಾಗಲು ದುರ್ಬಲ ವರ್ಗದ ಜನರಿಗೆ ಸಾಮಾಜಿಕ, ಆರ್ಥಿಕಶಕ್ತಿ ಬರಬೇಕು ಆಗ ರಾಜಕೀಯ ಸ್ವಾತಂತ್ರ್ಯ ಸಾರ್ಥಕವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನಮ್ಮಲ್ಲಿ ಮೇಲು, ಕೀಳು, ಬಡವ, ಬಲ್ಲಿದ, ಅಕ್ಷರಸ್ಥ, ಅನಕ್ಷರಸ್ಥ ತಾರತಮ್ಯ ಇರಬಾರದು. ಅಸಮಾನತೆ ನಿರ್ಮೂಲನೆ ಆದರೆ ಮಾತ್ರ ಸಮಸಮಾಜ ನಿರ್ಮಾಣ ಆಗಲಿದೆ. ಯಾರೋ ಸ್ವಾರ್ಥಿಗಳು, ಪಟ್ಟಬದ್ರ ಹಿತಾಸಕ್ತಿಗಳು ಜಾತಿ ಅಸಮಾನತೆ ನಿರ್ಮಾಣ ಮಾಡಿದ್ದಾರೆ. ಜಾತಿ ವ್ಯವಸ್ಥೆ ಪರಿಣಾಮವಾಗಿ ನಾವೆಲ್ಲ ಅವಕಾಶದಿಂದ ವಂಚಿತರಾಗಿದ್ದೇವೆ. ಶಿಕ್ಷಣದ ಅವಕಾಶ ಸಿಕ್ಕವರು ಆರ್ಥಿಕವಾಗಿ ಸಬಲರಾಗಿದ್ದಾರೆ. ಅವಕಾಶ ಸಿಗದವರು ಮೇಲೆ ಬರಲು ಸಾಧ್ಯವಾಗಿಲ್ಲ. ವಿದ್ಯೆ ಕಲಿಯಲು ಕೆಲವರಿಗೆ ಅವಕಾಶ ಇಲ್ಲ. ಆದರೆ ವಿದ್ಯೆ ಕಲಿಯಲು ಎಲ್ಲರಿಗೂ ಅರ್ಹತೆ ಇದೆ ಎಂದು ಅವರು ಹೇಳಿದ್ದಾರೆ.

ಭೋವಿ ಗುರುಪೀಠದ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ದೀಕ್ಷಾ ರಜತ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದೆ.

ಜಾತಿ ವ್ಯವಸ್ಥೆ ದೇವರ ಸೃಷ್ಟಿಯಲ್ಲ. ಸ್ವಾರ್ಥಿ ಮನುಷ್ಯರ ಸೃಷ್ಟಿ. ವಿದ್ಯೆ ಕಲಿಯಲು ಅವಕಾಶ ಸಿಕ್ಕ ಕೆಲವರು ಮಾತ್ರ ಆರ್ಥಿಕವಾಗಿ ಮೇಲೆ ಬಂದರು. ವಿದ್ಯೆಯ ಅವಕಾಶ ಇಲ್ಲದವರು… pic.twitter.com/WrfWJJfNdV

— Siddaramaiah (@siddaramaiah) July 20, 2024

ಭೋವಿ ಮಠದಿಂದ ನಿರಂತರ ಸಂಘಟನೆ, ಶಿಕ್ಷಣ, ಹೋರಾಟ
ಭೋವಿ ಸಮುದಾಯದಲ್ಲಿ ಹುಟ್ಟಿದವರು ಸಹ ಐಎಎಸ್ ಅಧಿಕಾರಿಗಳಾಗಲು ಅವಕಾಶವಿದೆ. ನಾವೆಲ್ಲ ಮನುಷ್ಯರಾಗಿ ಸ್ವಾಭಿಮಾನದಿಂದ ಬದುಕಬೇಕು. ನಮ್ಮಲ್ಲಿ ಗುಲಾಮಗಿರಿ ಇದ್ದ ಹಿನ್ನೆಲೆಯಲ್ಲಿ ಈಗಲೂ ಕೆಲವರು ಗುಲಾಮಗಿರಿಯಿಂದ ಹೊರಗೆ ಬರಲು ಸಾಧ್ಯವಾಗಿಲ್ಲ. ಮೇಲ್ವರ್ಗದ ಶ್ರೀಗಳು ಬಂದಾಗ ಬುದ್ಧಿ ಅಂತೀವಿ. ತಳಸಮುದಾಯವರು ಬುದ್ಧಿವಂತರಾದರು ಏಕವಚನದಲ್ಲಿ ಮಾತಾಡ್ತಿವಿ. ಹೀಗಾಗಿ ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ಈ ಮಠದ ಶ್ರೀಗಳು ನಿರಂತರವಾಗಿ ಸಂಘಟನೆ, ಶಿಕ್ಷಣ, ಹೋರಾಟ ಮಾಡಿದ ಪರಿಣಾಮ ಮಠ ಬೆಳೆದಿದೆ ಎಂದು ಅವರು ತಿಳಿಸಿದ್ದಾರೆ.

ಭೋವಿ ಸಮಾಜದಿಂದ ಶಿಕ್ಷಣ ಸಂಸ್ಥೆ ನಿರ್ಮಾಣ ಮಾಡಲು ಸರ್ಕಾರದಿಂದ ನಾವು ಸಹಾಯ ಮಾಡುತ್ತೇವೆ. ಎಲ್ಲರಿಗೂ ಶಿಕ್ಷಣ ಸಿಕ್ಕರೆ ಮಾತ್ರ ಅಭಿವೃದ್ಧಿ ಸಾಧ್ಯ. ಉಚಿತ ಶಿಕ್ಷಣ, ಹಾಸ್ಟೆಲ್ ವ್ಯವಸ್ಥೆಯನ್ನು ಉಪಯೋಗಿಸಿಕೊಳ್ಳಬೇಕು. 2013ರಲ್ಲಿ ಎಸ್‍ಸಿಎಸ್‍ಪಿ, ಟಿಎಸ್‍ಪಿ ಕಾಯ್ದೆ ನಾವು ತಂದಿದ್ದೆವು. ಈ ವರ್ಷ 39.121 ಕೋಟಿ ರೂ. ಎಸ್‍ಸಿ, ಎಸ್‍ಟಿಗೆ ಮೀಸಲಿಟ್ಟಿದ್ದೇವೆ ಎಂದು ಅವರು ಹೇಳಿದ್ದಾರೆ.

ಭೋವಿ ಅಭಿವೃದ್ಧಿ ನಿಗಮ ಮರುನಾಮಕರಣ:
ಭೋವಿ ಅಭಿವೃದ್ಧಿ ನಿಗಮವನ್ನು (Bhovi Development Corporation) ಭೋವಿ-ವಡ್ಡರ ಅಭಿವೃದ್ಧಿ ನಿಗಮವಾಗಿ ಮರುನಾಮಕರಣ ಮಾಡಬೇಕು ಎನ್ನುವ ಬೇಡಿಕೆ ಇದೆ. ಈ ಬೇಡಿಕೆಯನ್ನು ಈಡೇರಿಸಲಾಗುವುದು. ಸಿದ್ಧರಾಮೇಶ್ವರ ಅಧ್ಯಯನಪೀಠಕ್ಕಾಗಿ ಬೇಡಿಕೆ ಇದೆ. ಈ ಬೇಡಿಕೆಯನ್ನೂ ಈಡೇರಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ಮಂತ್ರಾಲಯಕ್ಕೆ ಭೇಟಿ:
ಮಂತ್ರಾಲಯಕ್ಕೆ ಶ್ರೀಗಳ ಆಹ್ವಾನದ ವಿಚಾರವಾಗಿ, ನಾನು ಈವರೆಗೂ ಮಂತ್ರಾಲಯಕ್ಕೆ ಹೋಗಿಲ್ಲ. ಪೂಜ್ಯರು ಆಹ್ವಾನ ನೀಡಿದ್ದು, ಮುಂದಿನ ದಿನಗಳಲ್ಲಿ ಹೋಗುತ್ತೇನೆ. ಸ್ವಾಮೀಜಿಯವರು ನನ್ನ ಬಗ್ಗೆ ಕೆಲವು ಒಳ್ಳೆಯಮಾತುಗಳನ್ನಾಡಿ ಆಶೀರ್ವಾದ ಮಾಡಿದರು. ನಾನು ಅವರಿಗೆ ಯಾವಾಗಲೂ ಚಿರಋಣಿಯಾಗಿರುತ್ತೇನೆ ಎಂದಿದ್ದಾರೆ.

TAGGED:Bhovi Development CorporationBhovi Gurpeethcm siddaramaiah
Share This Article
Facebook Whatsapp Whatsapp Telegram

Cinema news

Rachita Ram
ಪ್ರೇಮಿಗಳ ದಿನದಂದೆ I Love You ಅಂತ ರಚ್ಚು ಪ್ರಪೋಸ್‌ – ಹೇಳಿದ್ದು ಯಾರಿಗೆ?
Bengaluru City Cinema Latest Main Post Sandalwood
ranveer singh 2
ಬಿಷ್ಣೋಯ್ ಗ್ಯಾಂಗ್‌ನಿಂದ ಮತ್ತೆ ರಣವೀರ್ ಸಿಂಗ್‌ಗೆ ಬೆದರಿಕೆ
Cinema Latest Top Stories
Joe Simon
ಫಿಲ್ಮ್‌ ಚೇಂಬರ್‌ನಲ್ಲೇ ಹೃದಯಾಘಾತ – ಸಾಹಸಸಿಂಹ ಚಿತ್ರದ ನಿರ್ದೇಶಕ ಜೊ ಸೈಮನ್ ನಿಧನ
Cinema Latest Main Post
rishab shetty public tv anniversary
ಪಬ್ಲಿಕ್‌ ಟಿವಿಗೆ ಇನ್ನೂ ಟೀನೇಜ್‌, ರಂಗಣ್ಣ ಸರ್‌ ಈ ಸಮಾಜಕ್ಕೆ ದೊಡ್ಡ ಕೊಡುಗೆ: ರಿಷಬ್‌ ಶೆಟ್ಟಿ
Bengaluru City Cinema Latest Main Post Sandalwood

You Might Also Like

Siddaramaiah 6
Districts

ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ 1000 ದಿನಗಳ ಸಂಭ್ರಮ – ಹಾವೇರಿ ಸಮಾವೇಶದಲ್ಲಿ ಸಿಎಂ ಪುತ್ಥಳಿ ಅನಾವರಣ

Public TV
By Public TV
30 seconds ago
Online Game
Explainer

Explainer | ಪಬ್‌ಜಿ, ಬ್ಲೂ ವೇಲ್‌, ಕೊರಿಯನ್‌ ಲವ್‌ ಗೇಮ್‌ – ಮಕ್ಕಳ ಜೀವ ಕಸಿಯುತ್ತಿದೆ ಆನ್‌ಲೈನ್‌ ಗೇಮಿಂಗ್‌ ಗೀಳು

Public TV
By Public TV
44 seconds ago
Mumbai Vande Bharat Express Train Man Arrested For Releasing Snake in Washroom
Latest

ಮುಂಬೈ-ಸೋಲಾಪುರ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಹಾವು ಬಿಟ್ಟ ವ್ಯಕ್ತಿ ಅರೆಸ್ಟ್

Public TV
By Public TV
11 minutes ago
HDK 2 1
Bengaluru City

ರಾಜ್ಯದಲ್ಲಿರೋ ಭ್ರಷ್ಟ, ಕೆಟ್ಟ ಸರ್ಕಾರ ತೆಗೆಯೋದು ನನ್ನ ಅಜೆಂಡಾ – ಹೆಚ್‌ಡಿಕೆ

Public TV
By Public TV
16 minutes ago
Mumbai metro 2
Latest

ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಪಿಲ್ಲರ್‌ ಕುಸಿದು ದುರಂತ – ಆಟೋ, ಕಾರು ಅಪ್ಪಚ್ಚಿ!

Public TV
By Public TV
1 hour ago
BY Vijayendra 1
Bengaluru City

ಪಂಚ ಗ್ಯಾರಂಟಿಗಳು ಪಂಚರ್ ಆಗಿ ವರ್ಷಗಳೇ ಕಳೆದಿವೆ – ಕಾಂಗ್ರೆಸ್‌ ಸಮಾವೇಶಕ್ಕೆ ವಿಜಯೇಂದ್ರ ವ್ಯಂಗ್ಯ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?