ಸಿಎಂ ಸಿದ್ದರಾಮಯ್ಯ ಬಾದಾಮಿಯಲ್ಲಿ ಗೆಲ್ಲಲಿ ಎಂದು ಅಭಿಮಾನಿಯಿಂದ ಉರುಳು ಸೇವೆ

Public TV
1 Min Read
cm siddaramaiah 2

ಬಾಗಲಕೋಟೆ: ಬಾದಾಮಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯನವರು ಗೆಲುವು ಸಾಧಿಸಬೇಕೆಂದು ಅವರ ಕಟ್ಟಾ ಅಭಿಮಾನಿಯೊಬ್ಬರು ಸುಡು ಬಿಸಿಲಿನಲ್ಲಿ ಉರುಳು ಸೇವೆ ಮಾಡಿದ್ದಾರೆ.

ಬಾದಾಮಿಯ ಬನಶಂಕರಿ ದೇವಿಗೆ ಹರಕೆ ಹೊತ್ತ ಕೊಪ್ಪಳ ಜಿಲ್ಲೆಯ ಹಲಗೇರಿ ಗ್ರಾಮದ ಗುಡದಪ್ಪ ಉರುಳು ಸೇವೆ ಸಲ್ಲಿಸಿದ್ದಾರೆ. ಬನಶಂಕರಿ ದೇಗುಲದ ಕೂಗಳತೆಯಲ್ಲಿರುವ ಪಾದಗಟ್ಟಿಯಿಂದ ದೇಗುಲದವರೆಗೆ ಉರುಳು ಸೇವೆ ಮಾಡಿದರು.

ಕೊಪ್ಪಳ ದ ಸಿದ್ದರಾಮಯ್ಯ ಅಭಿಮಾನಿಗಳು ಡೊಳ್ಳು ಬಾರಿಸುವ ಮೂಲಕ ಗುಡದಪ್ಪ ಅವರ ಸೇವೆಯಲ್ಲಿ ಭಾಗಿಯಾಗಿದ್ದರು. ಕಳೆದ ಬಾರಿ ಗುಡದಪ್ಪ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಎಂದು ದೀರ್ಘ ದಂಡ ನಮಸ್ಕಾರ ಹಾಕಿದ್ದರು. ಈಗ ಬಾದಾಮಿಯಲ್ಲಿ ಸಿದ್ದರಾಮಯ್ಯ ಗೆಲ್ಲಲಿ ಎಂದು ಉರುಳು ಸೇವೆ ಮಾಡಿದ್ದಾರೆ. ಬನಶಂಕರಿ ಸಿದ್ದರಾಮಯ್ಯನವರನ್ನು ಗೆಲ್ಲಿಸುತ್ತಾಳೆ ಅನ್ನುವ ನಂಬಿಕೆ ಇದೆ ಅಂತ ಗುಡದಪ್ಪ ಹೇಳುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *