ಬೆಂಗಳೂರು: ಆರ್ಸಿಬಿ (RCB) ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಘೋಷಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಕಾಲ್ತುಳಿತ ದುರಂತಕ್ಕೆ ವಿಷಾದ ವ್ಯಕ್ತಪಡಿಸಿದರು. ನಿನ್ನೆ ಆರ್ಸಿಬಿ ತಂಡ ಫೈನಲ್ ಪಂದ್ಯ ಜಯಗೊಳಿಸಿತ್ತು. ಇಂದು ವಿಜಯೋತ್ಸವ ಆಯೋಜಿಸಲಾಗಿತ್ತು. ಕ್ರಿಕೆಟ್ ಅಸೋಸಿಯೇಷನ್, ಸರ್ಕಾರದ ವತಿಯಿಂದಲೂ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಇಂತಹ ಘಟನೆ ನಡೆಯಬಾರದಾಗಿತ್ತು. ಬಹಳ ದೊಡ್ಡ ದುರಂತ ನಡೆದಿದೆ. ಕಾಲ್ತುಳಿತಕ್ಕೆ ಒಳಗಾಗಿ 11 ಜನ ಮೃತರಾಗಿದ್ದಾರೆ. 47 ಜನರು ಗಾಯಗೊಂಡಿದ್ದಾರೆ ಎಂದು ಸಿಎಂ ವಿಷಾದಿಸಿದರು. ಇದನ್ನೂ ಓದಿ: ಆರ್ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ | ಇದು ಹೃದಯ ವಿದ್ರಾವಕ ಘಟನೆ – ಮೃತರಿಗೆ ಮೋದಿ ಸಂತಾಪ
ನಾನು ಬೌರಿಂಗ್ ಆಸ್ಪತ್ರೆ, ವೈದೇಹಿ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದೆ. ಸಂಭ್ರಮ ಆಚರಣೆ ಮಾಡುವಾಗ ಇಂತಹ ದುರಂತ ನಡೆಯಬಾರದಿತ್ತು. ನಮ್ಮ ನಿರೀಕ್ಷೆಗೂ ಮೀರಿ ಅಭಿಮಾನಿಗಳು ಸೇರಿದ್ದರು. ಘಟನೆಗೆ ಸರ್ಕಾರ ಬಹಳ ದುಃಖ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದರು.
ವಿಧಾನಸೌಧ ಎದರು 1 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ಅಲ್ಲಿ ಯಾವುದೇ ಅನಿರೀಕ್ಷಿತ ಘಟನೆ ದುರಂತ ನಡೆದಿಲ್ಲ. ಒಂದು ಲಕ್ಷಕ್ಕೂ ಹೆಚ್ಚು ಜನ ವಿಧಾನಸೌಧದ ಮುಂದೆ ಸೇರಿದ್ರು. ವಿಧಾನಸೌಧದ ಮುಂದೆ ನಡೆದ ಸಮಾರಂಭದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಆದರೆ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ದುರಂತ ಆಗಿದೆ. ಯಾರು ಸಹ ಇದನ್ನ ನಿರೀಕ್ಷೆ ಮಾಡಿರಲಿಲ್ಲ. ಕೆಎಸ್ಸಿಎ, ಸರ್ಕಾರ ಇದನ್ನ ನಿರೀಕ್ಷಿಸಿರಲಿಲ್ಲ. ಕ್ರೀಡಾಂಗಣದಲ್ಲಿ 35 ಸಾವಿರ ಜನರಿಗೆ ಮಾತ್ರ ಆಸನದ ವ್ಯವಸ್ಥೆ ಇತ್ತು. ಆದರೆ 2-3 ಲಕ್ಷ ಜನ ಬಂದಿದ್ದರಂತೆ. ಇಂದು ಸಂಭ್ರಮದ ಬಗ್ಗೆ ಕೆಎಸ್ಸಿಎ ಮಾಹಿತಿ ಕೊಟ್ಟಿತ್ತು. ಹೀಗಾಗಿ ಇಷ್ಟು ಜನ ಬರುತ್ತಾರೆಂಬ ನಿರೀಕ್ಷೆ ಇರಲಿಲ್ಲ. ಆಸನದ ವ್ಯವಸ್ಥೆ ಇರುವಷ್ಟು ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಬರುವ ನಿರೀಕ್ಷೆ ಇತ್ತು ಎಂದರು. ಇದನ್ನೂ ಓದಿ: ಆರ್ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ – ಇದು ಹೃದಯ ವಿದ್ರಾವಕ ಘಟನೆ; ರಮ್ಯಾ ಬೇಸರ
ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ನೀಡಲಾಗುವುದು. ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ಕೊಡುತ್ತೇವೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರಿಗೂ ಸರ್ಕಾರ ಹಣ ಕೊಡುತ್ತದೆ. ಎಲ್ಲಾ ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಒಟ್ಟು 47 ಜನ ಗಾಯಗೊಂಡಿದ್ದಾರೆ. ಕೆಲವರು ಚಿಕಿತ್ಸೆ ಪಡೆದು ಹೋಗಿದ್ದಾರೆ. ಒಟ್ಟಾರೆ 47 ಜನಕ್ಕೆ ಗಾಯ ಆಗಿದೆ. ಎಲ್ಲಾ ಗಾಯಾಳುಗಳು ಅಪಾಯದಿಂದ ಪಾರಾಗಿದ್ದಾರೆ ಎಂದು ಡಾಕ್ಟರ್ ಹೇಳಿದ್ದಾರೆ. ಗಾಯಾಳುಗಳ ಸಾರಿಗೆ, ಊಟ ಎಲ್ಲಾ ವ್ಯವಸ್ಥೆ ಸರ್ಕಾರ ಮಾಡಲಿದೆ. ಅನಿರೀಕ್ಷಿತ ದುರಂತ ಇದು ಎಂದು ಸಿಎಂ ನೊಂದು ನುಡಿದರು.
ಯಾರು ಕಾಲ್ತುಳಿತದಲ್ಲಿ ಸತ್ತಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಸರ್ಕಾರ ಪ್ರಾರ್ಥನೆ ಮಾಡುತ್ತದೆ. ವಿದ್ಯಾರ್ಥಿಗಳು, ಯುವಕ-ಯುವತಿಯರು ಮೃತರಾಗಿದ್ದಾರೆ. ಅವರ ಪೋಷಕರಿಗೆ ಸಾವಿನ ದುಃಖ ಭರಿಸೋ ಶಕ್ತಿ ದೇವರು ಕೊಡಲಿ ಎಂದರಲ್ಲದೇ, ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಲಾಗಿದೆ ಎಂದರು. ಇದನ್ನೂ ಓದಿ: ಅನ್ ಕಂಟ್ರೋಲ್ಡ್ ಕ್ರೌಡ್ ಆಯ್ತು: ಕಾಲ್ತುಳಿತದ ಬಗ್ಗೆ ಡಿಕೆಶಿ ರಿಯಾಕ್ಷನ್
ಯಾರು ತಪ್ಪಿತಸ್ಥರು ಇದ್ದಾರೆ ಅವರ ಮೇಲೆ ತನಿಖೆ ಮಾಡಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಇದೊಂದು ಅನಿರೀಕ್ಷಿತ ಘಟನೆ. ಯಾರು ನಿರೀಕ್ಷೆ ಮಾಡಿರಲಿಲ್ಲ. ಭದ್ರತಾ ವೈಫಲ್ಯ ಇಲ್ಲ. ವಿರೋಧ ಪಕ್ಷದ ತರಹ ಯಾಕೆ ಮಾತಾಡ್ತೀರಾ? ಅನಿರೀಕ್ಷಿತವಾಗಿ ಜನ ಬಂದಿದ್ದರು. ಅದಕ್ಕೆ ಆಗಿದೆ. ಇದರಲ್ಲಿ ರಾಜಕೀಯ ಮಾತಾಡೊಲ್ಲ. ಬಿಜೆಪಿ ಅವರು ರಾಜಕೀಯ ಮಾಡ್ತಾರೆ. ನಾನು ಅದಕ್ಕೆ ಮಾತಾಡೊಲ್ಲ. ಅನಿರೀಕ್ಷಿತ ಘಟನೆ ಆಗಿರೋದ್ರಿಂದ ಡಿಸಿ ತನಿಖೆ ಮಾಡಿಸ್ತೀವಿ ಎಂದು ತಿಳಿಸಿದರು.
ಘಟನೆಯನ್ನ ಸಮರ್ಥನೆ ಮಾಡಿಕೊಳ್ಳೊಲ್ಲ. ಇದರಲ್ಲಿ ರಾಜಕೀಯ ಮಾಡೊಲ್ಲ. ಡಿಸಿ ತನಿಖೆಗೆ 15 ದಿನ ಸಮಯ ಕೊಡ್ತೀವಿ. ತನಿಖೆಯಿಂದ ಏನ್ ಬರುತ್ತೋ ನೋಡೋಣ. ಗೇಟ್ ಚಿಕ್ಕದು ಇತ್ತು. ಅದನ್ನ ಮುರಿದು ಒಳಗೆ ಹೋಗೋ ಪ್ರಯತ್ನ ಮಾಡಿದ್ದಾರೆ. ಯಾರು ಇದನ್ನ ನಿರೀಕ್ಷೆ ಮಾಡಿರಲಿಲ್ಲ. ನಿರೀಕ್ಷೆಗೂ ಮೀರಿ ಜನರು ಬಂದಿದ್ದರು. ಹೀಗಾಗಿ, ಈ ಘಟನೆ ಸಂಭವಿಸಿದೆ. ಖಚಿತವಾಗಿ ಏನು ನಡೆದೇ ಇಲ್ಲ ಅಂತ ನಾನು ಹೇಳಿಲ್ಲ. ಹೀಗಾಗಿ, ಡಿಸಿ ನೇತೃತ್ವದಲ್ಲಿ ತನಿಖೆಗೆ ಆದೇಶ ಮಾಡಲಾಗಿದೆ ಎಂದರು.
ಗ್ರ್ಯಾಂಡ್ ಸ್ಟೆಪ್ ಮೇಲೆ ಪೊಲೀಸರು ಕಾರ್ಯಕ್ರಮ ಮಾಡಬೇಡಿ ಅಂತ ಹೇಳಿಲ್ಲ. ಯಾವ ಅಧಿಕಾರಿಗಳು ಮಾಡಬೇಡಿ ಅಂತ ಹೇಳಿಲ್ಲ. KSCA ಕಾರ್ಯಕ್ರಮ ಆಯೋಜನೆ ಮಾಡಿತ್ತು. ನಾವು ವಿಧಾನಸೌಧದ ಮುಂದೆ ಮಾಡಿದ್ವಿ. ಅಲ್ಲೇನು ನಡೆದಿಲ್ಲ, ಸುಖಾಂತ್ಯವಾಗಿದೆ. ಕ್ರೀಡಾಂಗಣದಲ್ಲಿ ಇದು ಆಗಿರೋದು. ವಿಧಾನಸೌಧದ ಮುಂದೆ ಏನು ನಡೆದಿಲ್ಲ. ಕ್ರೀಡಾಂಗಣದ ಬಳಿ ಮಾತ್ರ ನಡೆದಿರೋದು. ಇಂತಹ ಘಟನೆ ಬೇಕಾದಷ್ಟು ಕಡೆ ನಡೆದಿದೆ. ಕುಂಭಮೇಳದಲ್ಲಿ ನಡೆದಿತ್ತು ಅಂತ ನಾನು ಹೇಳಿಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಮೈಸೂರು ಪೇಟಾ ತೊಡಿಸಿ, ಶಾಲು ಹೊದಿಸಿ ಆರ್ಸಿಬಿ ಆಟಗಾರರನ್ನು ಸನ್ಮಾನಿಸಿದ ಸಿಎಂ, ಡಿಸಿಎಂ
ನಾವು ಸಮಾರಂಭ ಕರೆದಿರಲಿಲ್ಲ. ಕೆಎಸ್ಸಿಎ ಅವರು ಕೇಳಿದ್ರು ಪರ್ಮಿಷನ್ ಕೊಟ್ಟಿದ್ವಿ. ದುರಂತ ನಡೆಯಬಾರದಿತ್ತು ನಡೆದಿದೆ. ಸರ್ಕಾರ ಇದಕ್ಕೆ ದುಃಖ ಪಡ್ತೀವಿ. ಕ್ರೀಡಾಂಗಣದಲ್ಲಿ ಪೊಲೀಸ್ ಭದ್ರತೆ ಮಾತ್ರ ಕೊಡ್ತೀವಿ. ಅಲ್ಲಿ ಆಗಬಾರದಿತ್ತು ಆಗಿದೆ. ಅದಕ್ಕೆ ಡಿಸಿ ತನಿಖೆ ಆದೇಶ ಮಾಡಿದ್ದೇವೆ. ಯಾರೇ ತಪ್ಪು ಮಾಡಿದ್ರು ಕ್ರಮ ಆಗುತ್ತದೆ ಎಂದರು.