ಬೆಂಗಳೂರು: ಹದಿನೈದು ದಿನಗಳಲ್ಲಿ ರೈತರ ಸಾಲಮನ್ನಾ ಆದೇಶ ಹೊರಡಿಸುತ್ತೇನೆ ಎಂದಿದ್ದ ಸರ್ಕಾರ ಈಗ ಉಲ್ಟಾ ಹೊಡೆದಿದೆ. ಸಾಲಮನ್ನಾ ಮಾಡೋದಕ್ಕೆ 15 ದಿನಗಳ ಗಡುವು ನೀಡೋದಕ್ಕೆ ಸಾಧ್ಯವಿಲ್ಲ ಅಂತ ಡಿಸಿಎಂ ಪರಮೇಶ್ವರ್ ಕಡ್ಡಿ ತುಂಡು ಮಾಡಿದ ಹಾಗೇ ಹೇಳಿದ್ದಾರೆ. ಹೀಗಾಗಿ ರೈತರ ಸಾಲಮನ್ನಾ ಸದ್ಯಕ್ಕೆ ಆಗೋದು ಡೌಟ್ ಆಗಿದೆ.
ಅಧಿಕಾರ ಪಡೆದ 24 ಗಂಟೆಯಲ್ಲಿ ರೈತರ ಸಾಲಮನ್ನಾ ಮಾಡ್ತೀನಿ ಅಂತ ಭರವಸೆ ನೀಡಿದ್ದ ಸಿಎಂ ಕುಮಾರಸ್ವಾಮಿ, ಕಳೆದ ಮೇ 30ರಂದು ರೈತರ ಸಭೆ ನಡೆಸಿ ಷರತ್ತುಗಳನ್ನು ಹಾಕಿ ಬೆಳೆ ಸಾಲಮನ್ನಾ ಮಾಡೋದಾಗಿ ಮಾತು ಕೊಟ್ಟಿದ್ರು. ಅಲ್ಲದೇ 15 ದಿನಗಳ ಒಳಗೆ ಈ ಸಂಬಂಧ ಆದೇಶ ಹೊರಡಿಸೋದಾಗಿ ಕೂಡ ಸಿಎಂ ಹೇಳಿದ್ದರು.
ಗುರುವಾರ ನಡೆದ ಸಮನ್ವಯ ಸಮಿತಿ ಸಭೆಯ ಬಳಿಕ ಡಿಸಿಎಂ ಪರಮೇಶ್ವರ್ ಮಾತನಾಡಿ, 15 ದಿನಗಳಲ್ಲಿ ಸಾಲಮನ್ನಾ ಸಾಧ್ಯವಿಲ್ಲ ಅಂತ ಹೇಳಿದ್ದಾರೆ. ಹೀಗಾಗಿ ಸಾಲಮನ್ನಾ ಸಂಬಂಧ ಹೇಳಿಕೆ ಕೊಟ್ಟಿದ್ದ ಸಿಎಂ ಮಾತೇ ಈಗ ಉಲ್ಟಾ ಆಗಿದೆ. ಡಿಸಿಎಂ ಹೇಳಿಕೆಯಿಂದ ಅದ್ಯಾವಾಗ ಸಾಲಮನ್ನಾ ಆಗುತ್ತೋ ಅನ್ನೋ ಆತಂಕ ಶುರುವಾಗಿದೆ. ಒಂದು ಕಡೆ ಸಾಲಮನ್ನಾ ಗಡುವು ನಿಡೋಕೆ ಆಗೊಲ್ಲ ಅಂದಿರೋ ಡಿಸಿಎಂ ಏಕಾಏಕಿ ನಿರ್ಧಾರ ಸಾಧ್ಯವಿಲ್ಲ ಅಂತ ಹೇಳಿದ್ದಾರೆ.
ಸಮನ್ವಯ ಸಮಿತಿ ಸಭೆ ಬಳಿಕ ಮಾತನಾಡಿದ ಸಮಿತಿಯ ಅಧ್ಯಕ್ಷ ಮಾಜಿ ಸಿಎಂ ಸಿದ್ದರಾಮಯ್ಯ, ಕಠಿಣವಾದ ಯೋಜನೆಗಳನ್ನ ರೂಪಿಸಲು ಸಾಧ್ಯವಿಲ್ಲ. ಎರಡು ಪಕ್ಷದ ಪ್ರಣಾಳಿಕೆಯ ಮಿನಿಮಮ್ ಕಾರ್ಯಕ್ರಮ ಜಾರಿಗೆ ಮಾತ್ರ ಒತ್ತು ಕೊಡ್ತೀವಿ ಅಂತ ಹೇಳಿದ್ದಾರೆ. ಹೀಗಾಗಿ ಸಾಲಮನ್ನಾ ಮಾತುಕೊಟ್ಟ ಸಿಎಂ ಕುಮಾರಸ್ವಾಮಿ ಅವ್ರ ಈ ಕಾರ್ಯಕ್ರಮ ಜಾರಿಯಾಗುತ್ತಾ ಅನ್ನೋ ಅನುಮಾನ ಪ್ರಾರಂಭವಾಗಿದೆ.