ಅಧಿಕಾರ ಶಾಶ್ವತವಲ್ಲ, ಗೂಟಾ ಹೊಡ್ಕೊಂಡು ಕೂತಿರುವ ಭ್ರಮೆಯೂ ನನಗಿಲ್ಲ: ಸಿಎಂ

Public TV
2 Min Read
CM HD KUMARASWAMY

– ನನ್ನ ಮೇಲೆ ಬಿಎಸ್‍ವೈಗೆ ವಿಶೇಷ ಕಾಳಜಿ ಬಂದಿದೆ
– ಮೈತ್ರಿ ಪಕ್ಷ ನನ್ನ ನಾಯಕತ್ವದಲ್ಲಿ ಇರುತ್ತೋ ಇಲ್ವೋ?

ಬೆಂಗಳೂರು: ಅಧಿಕಾರ ಶಾಶ್ವತವಲ್ಲ. ನಾವು ಗೂಟಾ ಹೊಡೆದುಕೊಂಡು ಕೂತಿದ್ದೇವೆ ಎನ್ನುವ ಭ್ರಮೆಯೂ ನನಗಿಲ್ಲ ಸಿಎಂ ಹೇಳಿದ್ದಾರೆ.

ವಿಶ್ವಾಸಮತಯಾಚನೆ ವೇಳೆ ಮಾತನಾಡಿದ ಸಿಎಂ, ಸರ್ಕಾರ ರಚನೆ ಮಾಡಲು ವಿರೋಧ ಪಕ್ಷದ ನಾಯಕರು ಬಹಳ ಅತುರದಲ್ಲಿದ್ದಾರೆ ಎಂದರು. ಆಗ ಸ್ಪೀಕರ್ ರಮೇಶ್ ಕುಮಾರ್ ಅವರು, ಯಾಕೆ ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ವಿಶ್ವಾಸ ಮತಯಾಚನೆ ಚರ್ಚೆಯೇ ಆಗದೇ ಮನವಿ ಮಾಡುತ್ತಿದ್ದಾರೆ. ಈ ಹಿಂದಿನ ವಿಶ್ವಾಸಮತದ ಯಾಚನೆಯ ಬಗ್ಗೆ ಬಿ.ಎಸ್.ಯಡಿಯೂರಪ್ಪ ಅವರು ಉಲ್ಲೇಖಿಸಿದ್ದಾರೆ. ಹಿಂದಿನ ವಿಶ್ವಾಸಮತ, ಅವಿಶ್ವಾಸಮತ ಮಂಡನೆಯಾಗಿರುವ ಸಂದರ್ಭ ಬೇರೆ ಇತ್ತು. ಆದರೆ ಇಂದಿನ ಪರಿಸ್ಥಿತಿಯೇ ಬೇರೆ ಎಂದು ಕುಟುಕಿದರು.

speaker Ramesh Kumar A

ವಿಶ್ವಾಸಮತ ಮಂಡನೆ ಮಾಡುವ ಪರಿಸ್ಥಿತಿ ಯಾವ ಹಿನ್ನಲೆಯಲ್ಲಿ ಬಂದಿದೆ? ಯಾವ ಕಾರಣಕ್ಕೆ ಬಂದಿದೆ ಎನ್ನುವುದು ಗೊತ್ತಿದೆ. ಸ್ಪೀಕರ್ ಅಧಿಕಾರದ ಸ್ಥಾನದ ಬಗ್ಗೆಯೂ ಅಪನಂಬಿಕೆ ಮೂಡವಂತೆ ಮಾಡಿ ಸುಪ್ರೀಂ ಮೊರೆ ಹೋಗಿದ್ದಾರೆ. ನಿಮ್ಮ ಬಗ್ಗೆ ವಿಪಕ್ಷಗಳಿಗೆ ನಂಬಿಕೆ ಇಲ್ಲ ಎಂದು ಸಿಎಂ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಮಾರ್ಮಿಕವಾಗಿ ಪ್ರಶ್ನಿಸಿದರು.

ವಿಪಕ್ಷಕ್ಕೆ ಮಾನ ಮರ್ಯಾದೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನಮಗೆ ಅಲ್ಪ ಸ್ವಲ್ಪ ಮರ್ಯಾದೆ ಇದೆ. ಇಲ್ಲಿ ಇರುವರರಿಗೆ ಸ್ವಲ್ಪ ಮರ್ಯಾದೆ ಇದೆ ಅಂದುಕೊಳ್ಳುತ್ತೇನೆ ಎಂದು ಕಿಡಿಕಾರಿದರು.

CM HDK

ರೆಬಲ್ ಶಾಸಕರು ಸ್ಪೀಕರ್ ಅವರಿಗೆ ಸಲ್ಲಿಸಿದ ರಾಜೀನಾಮೆಯಲ್ಲಿರುವ ಕಾರಣ ಹಾಗೂ ಸುಪ್ರೀಂಕೋರ್ಟ್ ನಲ್ಲಿ ಮಂಡಿಸಿದ ಕಾರಣ ಇವೆರಡನ್ನೂ ಇಟ್ಟಕೊಂಡು ಚರ್ಚೆ ನಡೆಸಲೇ ಬೇಕು. ಇದಕ್ಕೆ ಸ್ಪಷ್ಟನೆ ಬೇಕು ಎಂದು ಸಿಎಂ ಪಟ್ಟು ಹಿಡಿದರು.

ಆರಂಭದಲ್ಲಿ ನಗುತ್ತಾ ಭಾಷಣ ಆರಂಭಿಸಿದ ಸಿಎಂ ಕೆಲ ನಿಮಿಷಗಳಲ್ಲೇ ಆವೇಶದಿಂದ ಮಾತು ಮುಂದುವರಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಸಮ್ಮಿಶ್ರ ಸರ್ಕಾರದದ ಬಗ್ಗೆ ಟೀಕಿಸಿದ್ದಾರೆ. ಬರಗಾಲದ ಬಗ್ಗೆ ಚರ್ಚೆ ಮಾಡಬೇಕಾಗಿದೆ. ನಮಗಿಂತ ಹೆಚ್ಚಾಗಿ ಬರ ಪೀಡಿತ ಪ್ರದೇಶಗಳಿಗೆ ಭೇಟಿ ಮಾಡಿದ್ದಾರೆ. ಜನರ ಕಷ್ಟಗಳಿಗೆ ಹೇಗೆ ಸ್ಪಂದಿಸಿದ್ದೇವೆ ಎನ್ನುವ ಬಗ್ಗೆ ಚರ್ಚೆ ಮಾಡಬೇಕಿದೆ ಎಂದರು.

Session

ಜಿಂದಾಲ್ ಪ್ರಕರಣ ಎತ್ತಿಕೊಂಡ ಸಿಎಂ, ಜಿಂದಾಲ್ ವಿಚಾರದಲ್ಲಿ ಸಾಕಷ್ಟು ಅನುಮಾನ ಜನರಲ್ಲಿ ಹುಟ್ಟುಹಾಕಿದ್ದಾರೆ. ಜನರಿಗೆ ಈಗ ಇದರ ಬಗ್ಗೆ ಮಾಹಿತಿಯ ಕೊರತೆ ಇದೆ. ನಾನು ಇತ್ತೀಚೆಗೆ ಮಾಧ್ಯಮದ ಜೊತೆಯೂ ಮಾತನಾಡಿಲ್ಲ. ಈಗ ಸ್ಪಷ್ಟನೆ ಕೊಡಬೇಕು. ನನ್ನ ಆಡಳಿತದ ಮಾಹಿತಿಯನ್ನು ಬಗ್ಗೆ ಜನರ ಮುಂದೆ ಇಡಬೇಕು ಎಂದು ಹೇಳಿದರು.

ಐಎಂಎ ಪ್ರಕರಣದಲ್ಲಿ ನಮ್ಮ ನಿಲುವಿನ ಬಗ್ಗೆ ಚರ್ಚೆಯಾಗಬೇಕು. ಬರಗಾಲ, ಜಿಂದಾಲ್, ಐಎಂಎ ವಿಚಾರ ಹಾಗೂ ಆಡಳಿತ ಯೋಜನೆ, ಈ ಮೂರು ವಿಚಾರದಲ್ಲಿ ಚರ್ಚೆ ಹಾಗೂ ಸ್ಪಷ್ಟನೆಗೆ ಅವಕಾಶ ನೀಡುವಂತೆ ಸಿಎಂ, ಸ್ಪೀಕರ್ ರಮೇಶ್ ಕುಮಾರ್ ಅವರ ಬಳಿ ಮನವಿ ಮಾಡಿಕೊಂಡರು.

ಮೈತ್ರಿ ಪಕ್ಷ ನನ್ನ ನಾಯಕತ್ವದಲ್ಲಿ ಇರುತ್ತೋ ಇಲ್ವೋ? ಬೇರೆ ಯಾರಾದರೂ ಮುಂದುವರಿಸುತ್ತಾರೋ ಇಲ್ವೋ ಗೊತ್ತಿಲ್ಲ ಎಂದು ಹೇಳಿ ಕುತೂಹಲ ಮೂಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *