ಬೆಂಗಳೂರು: ಸರ್ಕಾರಿ ಕಾರು ಬಳಸದೆ ಸ್ವಂತ ವಾಹನದಲ್ಲಿ ಓಡಾಡುತ್ತಿರುವ ಸಿಎಂ ಕುಮಾರಸ್ವಾಮಿ, ಈಗ ಹೊಸ ಸಂಸ್ಕೃತಿಗೆ ನಾಂದಿ ಹಾಡಿದ್ದಾರೆ.
ತನಗೆ ಮೀಸಲಾಗಿದ್ದ ಕಾರನ್ನು ಉಪಸಭಾಪತಿ ಕೃಷ್ಣಾರೆಡ್ಡಿ ಅವರಿಗೆ ಸಿಎಂ ನೀಡಿದ್ದಾರೆ. ವಿಧಾನಸಭಾ ಉಪಸಭಾಪತಿಯ ಆಪೇಕ್ಷೆಯಂತೆ ಎಚ್ಡಿಕೆ ತನ್ನ ಕಾರು ನೀಡಲು ಸೂಚನೆ ನೀಡಿ ಶಿಷ್ಟಾಚಾರವನ್ನ ಬದಿಗೊತ್ತಿದ್ದಾರೆ.
ನನಗೆ ಕೊಟ್ಟಿರುವ ಕಾರು ಸುಸಜ್ಜಿತವಾಗಿಲ್ಲ. ಕ್ಷೇತ್ರ ಸಂಚಾರಕ್ಕೆ ಕೆಎ 05 ಜಿ.ಎ 6363 ನಂಬರಿನ ಟಯೋಟಾ ಫಾರ್ಚುನರ್ ಕಾರ್ ಸುಸಜ್ಜಿವಾಗಿದೆ. ಹೀಗಾಗಿ, ಇದೇ ಕಾರನ್ನು ಕೊಟ್ಟರೆ ಒಳ್ಳೆಯದು. ಸಂಬಂಧಪಟ್ಟವರಿಗೆ ಸೂಚನೆ ನೀಡಿ ಅಂತ ಸಿಎಂಗೇ ಪತ್ರ ಬರೆದು ಕೃಷ್ಣಾರೆಡ್ಡಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಉಪಸಭಾಪತಿಯವರ ಅಪೇಕ್ಷೆಯಂತೆ ಈಗ ಅದೇ ಕಾರನ್ನು ಅವರಿಗೆ ಸಿಎಂ ನೀಡಿದ್ದಾರೆ.