ಬಾಗಲಕೋಟೆ: ಈ ಪುಣ್ಯ ಭೂಮಿ ಮೇಲೆ ಪಾಪಿಗಳು ನಿಲ್ಲೋದಿಲ್ಲ. ರಾವಣನೂ ನಿಂತಿಲ್ಲ, ದುರ್ಯೋಧನನೂ ನಿಂತಿಲ್ಲ ಎನ್ನುವ ಮೂಲಕ ಮೋದಿಯನ್ನು ರಾವಣ ಹಾಗೂ ದುರ್ಯೋಧನನಿಗೆ ಮಾಜಿ ಸಚಿವ ಸಿ.ಎಂ ಇಬ್ರಾಹಿಂ ಹೋಲಿಸಿ ಟೀಕಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸೇನೆಯನ್ನು ಮೋದಿ ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ. ಈಗ ಏನೇ ಇದ್ದರೂ ಕಾಲಾಯ ತಸ್ಮೈ ನಮಃ. ಈ ಪುಣ್ಯ ಭೂಮಿ ಮೇಲೆ ಪಾಪಿಗಳು ನಿಲ್ಲೋದಿಲ್ಲ. ರಾವಣನೂ ನಿಂತಿಲ್ಲ ದುರ್ಯೋಧನನೂ ನಿಂತಿಲ್ಲ ಎನ್ನುವ ಮೂಲಕ ಮೋದಿಯನ್ನು ರಾವಣ ಹಾಗೂ ದುರ್ಯೋಧನನಿಗೆ ಹೋಲಿಸಿ ಟೀಕಿಸಿದರು.
ಮತ್ತೊಮ್ಮೆ ಮೋದಿ ಪ್ರಧಾನಿಯಾದರೆ ಪಾಕ್ ಸಮಸ್ಯೆ ಬಗೆಹರಿಯುತ್ತದೆ ಎಂಬ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಗೆ, ಪಾಕಿಸ್ತಾನಕ್ಕೂ ಮೋದಿಗೂ ಬಹಳ ಗಾಢವಾದ ಸಂಬಂಧವಿದೆ. ಅದಕ್ಕೆ ಕರೆಯದಿದ್ದರೂ ಮೋದಿ ನವಾಜ್ ಷರೀಫ್ ಮನೆಗೆ ಹೋಗಿದ್ದರು. ಕರೆಯದಿದ್ದರೂ ಯಾಕೆ ಹೋಗಿದ್ದರು ಎಂದು ಅವರು ಪ್ರಶ್ನಿಸಿ ಪ್ರತಿಕ್ರಿಯಿಸಿದರು.
ಇಮ್ರಾನ್ ಖಾನ್ ಇದೇ ಮಾತನ್ನು ರಾಹುಲ್ ಗಾಂಧಿ ಪ್ರಧಾನಿಯಾಗಲಿ ಅಂದಿದ್ದರೆ ಬೇರೆಯಾಗಿರುತ್ತಿತ್ತು. ಅಮಿತ್ ಶಾ ಥಕ ಥೈ, ಥಕ ಥೈ ಎಂದು ಕುಣಿಯೋಕೆ ಶುರು ಮಾಡುತ್ತಿದ್ದರು ಎಂದು ವ್ಯಂಗ್ಯವಾಡಿದರು. ಹಾಗೆಯೇ ಒಳ್ಳೆಯವರು ಹುಟ್ಕೊತಾರೆ, ಸಮಯವೇ ಇದಕ್ಕೆ ಉತ್ತರ ಕೊಡುತ್ತೆ. ಈಶ್ವರಪ್ಪ ಮುಸಲ್ಮಾನರಿಗೆ ಟಿಕೆಟ್ ಕೊಡಲ್ಲ ಅಂದಿದ್ದಾರೆ. ಆದ್ರೆ ಅವರಿಗೆ ಕುರುಬರಿಗೆ ಟಿಕೆಟ್ ಕೊಡಿಸಲು ಆಗಿಲ್ಲ ಎಂದು ಹೇಳಿ ಟಾಂಗ್ ಕೊಟ್ಟರು.