ಎಚ್‍ಡಿ ದೇವೇಗೌಡರ ನಡೆಗೆ ಕುಮಾರಸ್ವಾಮಿ ಅಸಮಾಧಾನ!

Public TV
1 Min Read
HDD HDK

ಬೆಂಗಳೂರು: ವಿಧಾನ ಪರಿಷತ್ ಅಭ್ಯರ್ಥಿ ಆಯ್ಕೆಯಿಂದ ದೊಡ್ಡ ಗೌಡರ ಮನೆಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಜೆಡಿಎಸ್ ವರಿಷ್ಠ ದೇವೇಗೌಡರ ಮೇಲೆ ಸಿಎಂ ಕುಮಾರಸ್ವಾಮಿ ಸಿಟ್ಟು ಮಾಡಿಕೊಂಡಿದ್ದಾರಂತೆ.

ತಮ್ಮ ಆಪ್ತ ಮಾಜಿ ಶಾಸಕ ಕೋನರೆಡ್ಡಿ ಅವರಿಗೆ ಪರಿಷತ್ ಟಿಕೆಟ್ ಕೊಡಲು ಕುಮಾರಸ್ವಾಮಿ ನಿರ್ಧರಿಸಿದ್ದರು. ಅಲ್ಲದೇ ಕೋನರೆಡ್ಡಿಗೆ ನಾಮಪತ್ರ ಸಲ್ಲಿಸಲು ಶಾಸಕರ ಸಹಿಯುಳ್ಳ ನಾಮಪತ್ರವನ್ನೂ ಕೂಡ ಕೊಟ್ಟಿದ್ದರು. ಆದ್ರೆ ಕೊನೆ ಘಳಿಗೆಯಲ್ಲಿ ದೇವೇ ಗೌಡರು ರಮೇಶ್ ಗೌಡಗೆ ಟಿಕೆಟ್ ನೀಡಿದ್ದಾರೆ. ದೇವೇಗೌಡರ ಈ ನಡೆಗೆ ಸಿಎಂ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

vlcsnap 2018 09 30 09h07m06s11

ಅಣ್ಣ ರೇವಣ್ಣ ಹಾಗೂ ಕುಟುಂಬದವರ ಹಸ್ತಕ್ಷೇಪದಿಂದ ಕೋನರೆಡ್ಡಿಗೆ ಕೊನೆ ಘಳಿಗೆಯಲ್ಲಿ ಟಿಕೆಟ್ ತಪ್ಪಿತ್ತು. ಕುಟುಂಬದ ಒತ್ತಡಕ್ಕೆ ಮಣಿದ ದೇವೇಗೌಡರು ರಮೇಶ್ ಗೌಡಗೆ ಟಿಕೆಟ್ ನೀಡಿದ್ದರು. ಇದ್ರೀಂದ ಕೋಪಗೊಂಡಿರೋ ಕುಮಾರಸ್ವಾಮಿ, ನಿವಾಸ ಪದ್ಮನಾಭನಗರಕ್ಕೆ ಹೋಗುತ್ತಿಲ್ಲ ಎಂಬುದಾಗಿ ಆಪ್ತ ಮೂಲಗಳಿಂದ ತಿಳಿದುಬಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

vlcsnap 2018 09 30 09h07m00s208

Share This Article
Leave a Comment

Leave a Reply

Your email address will not be published. Required fields are marked *