ಸಿಎಂ ಸರ್.. ಸಿಎಂ ಸರ್ – ಮಕ್ಕಳ ಕೂಗನ್ನು ಕೇಳಿ ಕಾರಿನಿಂದ ಇಳಿದು ಮನವಿ ಸ್ವೀಕರಿಸಿದ ಎಚ್‍ಡಿಕೆ

Public TV
1 Min Read
SCHOOL 01

ಬೆಂಗಳೂರು: ಮಕ್ಕಳ ಕೂಗನ್ನು ಮನ್ನಿಸಿ ಸ್ವತಃ ಸಿಎಂ ಕುಮಾರಸ್ವಾಮಿಯವರು ಕಾರಿನಿಂದ ಇಳಿದು ಬಂದು ಅವರ ಮನವಿಯನ್ನು ಸ್ವೀಕರಿಸಿದ್ದಾರೆ.

ಚಿತ್ರದುರ್ಗ ತಾಲೂಕಿನ ಆಲಘಟ್ಟದಿಂದ ಭರಮಸಾಗರಕ್ಕೆ ಸ್ಥಳಾಂತರಿಸಿದ್ದನ್ನು ವಿರೋಧಿಸಿ ಪ್ರೌಢಶಾಲೆಯ ಮಕ್ಕಳು ಹಾಗೂ ಕೆಲ ಪೋಷಕರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಬೆಂಗಳೂಗೆ ಆಗಮಿಸಿದ್ದರು. ಮಕ್ಕಳು ಹಾಗೂ ಪೋಷಕರು ಬೆಳಗ್ಗೆ 6 ಗಂಟೆಯಿಂದ ಸಿಎಂ ಜೆಪಿ ನಗರದ ನಿವಾಸದ ಬಳಿ ಮನವಿಯನ್ನು ನೀಡಲು ಕಾಯುತ್ತಿದ್ದರು. ಆದರೆ ಸಿಎಂ ಮಾತ್ರ ಇವರಿಗೆ ಲಭ್ಯವಾಗಿರಲಿಲ್ಲ.

ಬೆಳಗ್ಗೆ ಸಿಎಂ ಕುಮಾರಸ್ವಾಮಿ ಮಕ್ಕಳನ್ನು ಲಕ್ಷಿಸದೇ ಕಾರಿನಲ್ಲಿ ಕುಳಿತು ವಿಧಾನಸೌಧಕ್ಕೆ ಹೊರಟುಬಿಟ್ಟರು. ಆಗ ಮಕ್ಕಳು ಸಿಎಂ ಸರ್… ಸಿಎಂ ಸರ್… ಎಂದು ಕೂಗಿದರು. ಮಕ್ಕಳ ಕೂಗನ್ನು ಕೇಳಿದ ಸಿಎಂ ಕುಮಾರಸ್ವಾಮಿ ಕಾರಿನಿಂದ ಇಳಿದು ಮಕ್ಕಳ ಮನವಿಯನ್ನು ಸ್ವೀಕರಿಸಿದರು. ಮನವಿಗೆ ಪ್ರತಿಕ್ರಯಿಸಿದ ಸಿಎಂ ನನಗೆ ಒಂದು ವಾರ ಸಮಯ ಕೊಡಿ ಎಂದು ಕೇಳಿಕೊಂಡರು.

ಕೂಡಲೇ ಅಧಿಕಾರಿಗಳ ಕಡೆ ತಿರುಗಿ ಇನ್ನೂ ಮಕ್ಕಳ ಸಮಸ್ಯೆ ಆಲಿಸಿಲ್ಲವೇ? ಸ್ವಲ್ಪ ಅರ್ಥಮಾಡಿಕೊಂಡು ಕೆಲಸ ಮಾಡಿ. ನಾನು ಜನರನ್ನೇ ನೋಡುತ್ತ ಕುಳಿತರೆ ಆಡಳಿತ ನಡೆಸುವುದು ಹೇಗೆ? ನಾನು ಇದನ್ನೇ ಮಾಡುತ್ತ ಕುಳಿತುಕೊಳ್ಳಬೇಕಾ ಎಂದು ಪ್ರಶ್ನಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

https://www.youtube.com/watch?v=THa3TgBIWPs

Share This Article
Leave a Comment

Leave a Reply

Your email address will not be published. Required fields are marked *