ಬೆಂಗಳೂರು: 18 ವರ್ಷಗಳ ಬಳಿಕ ಕಪ್ ಗೆದ್ದ ಆರ್ಸಿಬಿ (RCB) ತಂಡದ ಆಟಗಾರರಿಗೆ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಬಳಿ ಮೈಸೂರು ಪೇಟಾ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಲಾಯಿತು.
ವಿಧಾನಸೌಧಕ್ಕೆ (Vidhana Soudha) ಕಪ್ ಸಮೇತ ಆರ್ಸಿಬಿ ಆಟಗಾರರನ್ನು, ಅಭಿಮಾನಿಗಳ ಜಯಘೋಷ ಹಾಗೂ ಪೊಲೀಸ್ ಬ್ಯಾಂಡ್ ಮೂಲಕ ಬರಮಾಡಿಕೊಂಡರು. ಬಳಿಕ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ (D K Shivakumar) ಅವರು ಅಭಿಮಾನಿಗಳನ್ನು ವೇದಿಕೆ ಸ್ವಾಗತಿಸಿದರು. ಇದನ್ನೂ ಓದಿ: ಆರ್ಸಿಬಿ ವಿಜಯೋತ್ಸವದ ವೇಳೆ ಯಡವಟ್ಟು – ಕಾಲ್ತುಳಿತಕ್ಕೆ 10 ಆರ್ಸಿಬಿ ಫ್ಯಾನ್ಸ್ ದುರ್ಮರಣ
ಇದಾದ ಬಳಿಕ ಆರ್ಸಿಬಿ ಆಟಗಾರರಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಅವರು ಮೈಸೂರು ಪೇಟಾ ತೊಡಿಸಿ ಹಾಗೂ ಶಾಲು ಹೊದಿಸಿ ಸನ್ಮಾನಿಸಿದರು. ಈ ವೇಳೆ ವರುಣಾಗಮನವಾಗಿದ್ದರಿಂದ ಮಳೆಯಲ್ಲೇ ಆರ್ಸಿಬಿ ಆಟಗಾರರನ್ನು ಸನ್ಮಾನಿಸಲಾಯಿತು. ಮಳೆ ಜೋರಾಗುತ್ತಿದ್ದಂತೆ ಆಟಗಾರರು ವೇದಿಕೆಯಿಂದ ತೆರಳಿದರು. ಇದನ್ನೂ ಓದಿ: Namma Bengaluru Scenes – ಆರ್ಸಿಬಿ ಅಭಿಮಾನಿಗಳ ಸಂತಸದ ಕ್ಷಣ ಹಂಚಿಕೊಂಡ ಅನುಷ್ಕಾ ಶರ್ಮಾ
ವಿರಾಟ್ ಕೊಹ್ಲಿ (Virat Kohli), ರಜತ್ ಪಾಟೀದಾರ್, ಟಿಮ್ ಡೇವಿಡ್, ದಿನೇಶ್ ಕಾರ್ತಿಕ್ (Dinesh Karthik) ಸೇರಿ ಆರ್ಸಿಬಿ ಆಟಗಾರರು ಫ್ಯಾನ್ಸ್ ನೋಡಿ, ಸಂತಸ ವ್ಯಕ್ತಪಡಿಸಿದರು. ಅಭಿಮಾನಿಗಳ ಸಾಗರವನ್ನು ಕಂಡು ತಮ್ಮ ಮೊಬೈಲ್ಗಳಲ್ಲಿ ವೀಡಿಯೋ ಮಾಡಿಕೊಂಡರು. ಈ ವೇಳೆ ವೇದಿಕೆಯಲ್ಲಿ ಸಚಿವ ಜಮೀರ್ ಅಹ್ಮದ್ ಸೇರಿ ಹಾಲಿ ಸಚಿವರು, ಶಾಸಕರು ಹಾಗೂ ಅವರ ಮಕ್ಕಳು ಉಪಸ್ಥಿತರಿದ್ದರು.