Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Cinema

‘ಕಾಸಿನಸರ’ ಸಿನಿಮಾದ ಆಡಿಯೋ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ

Public TV
Last updated: February 9, 2023 3:47 pm
Public TV
Share
3 Min Read
FotoJet 30
SHARE

ಸದಭಿರುಚಿಯ ಚಿತ್ರಗಳ ನಿರ್ದೇಶಕ ಎನ್.ಆರ್. ನಂಜುಂಡೇಗೌಡ ಅವರ ನಿರ್ದೇಶನ ಸಾರಥ್ಯದಲ್ಲಿ  ನಟ  ವಿಜಯ ರಾಘವೇಂದ್ರ ಒಬ್ಬ ಪ್ರಗತಿಪರ ರೈತನಾಗಿ ಕಾಣಿಸಿಕೊಂಡಿರುವ ಚಿತ್ರ ಕಾಸಿನಸರ. ಈ  ಚಿತ್ರದ ಆಡಿಯೋ, ಟ್ದೈಲರ್ ಬಿಡುಗಡೆ ಸಮಾರಂಭ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಿತು, ಸಿಎಂ. ಬಸವರಾಜ ಬೊಮ್ಮಾಯಿ ಅವರು ಚಿತ್ರದ ಹಾಡುಗಳ ಸಿಡಿ ಬಿಡುಗಡೆ ಮಾಡಿ ಶುಭ ಹಾರೈಸಿದರು. ನಂತರ ಸುರೇಶ್ ಹೆಬ್ಳೀಕರ ಅನಸೂಯಮ್ಮ, ಬಸವರಾಜ್ ಸೇರಿ ಐವರು  ಕೃಷಿ ಸಾಧಕರಿಗೆ ಸನ್ಮಾನಿಸಲಾಯಿತು.

FotoJet 2 19

ವೇದಿಕೆಯಲ್ಲಿ ಸಿಎಂ ಮಾತನಾಡುತ್ತ ಹಳ್ಳಿಯ ಬದುಕು ಬಹಳ ಸೊಗಸಾದ್ದು, ಪ್ರತಿಯೊಬ್ಬರೂ ಸುಖ ದುಃಖಗಳಲ್ಲಿ ಭಾಗಿಯಾಗುತ್ತಾರೆ. ಈ ಥರದ ಜೀವನ ನಮ್ಮ ದೇಶದಲ್ಲಿ ಬಿಟ್ಟು ಬೇರೆಲ್ಲೂ ಇಲ್ಲ. ಮೌಲ್ಯಗಳಿಗೆ ಒಂದು ಬೆಲೆಯಿದೆ. ಕೃಷಿಕಾಯಕ ಬಹಳ ಪವಿತ್ರವಾದುದು. ಗುಡ್ಡಗಾಡಿನ ಜನ ಪರಿಶ್ರಮವಂತರು. ಕರಾವಳಿಯ ಜನರ ಬದುಕು ಅನಿಶ್ಚಿತ. ಆದರೆ ಬಯಲುಸೀಮೆಯ ಜನ ಭರವಸೆಯಲ್ಲಿ ಬದುಕುತ್ತಾರೆ. ಅನಿಶ್ಚಿತತೆಯ ಮಧ್ಯೆ ಭರವಸೆ, ಇದು ಭೂಮಿತಾಯ ಬಳುವಳಿ. ಒಂದು ಕಾಳು ಹಾಕಿದರೆ ನೂರಾರು ಕಾಳು ವಾಪಸ್  ಬರುತ್ತದೆ. ನಮಗೆ ಸ್ವತಂತ್ರ ಬಂದಾಗ ಜನಸಂಖ್ಯೆ 33 ಕೋಟಿ ಇತ್ತು. ಈಗ 133 ಕೋಟಿ ಆಗಿದೆ. ಅದು ಸಾವಯುವ ಕೃಷಿ ಇರಬಹುದು, ನೈಸರ್ಗಿಕ ಕೃಷಿ ಇರಬಹುದು, ಹೆಚ್ಚು ಆಹಾರ ಉತ್ಪಾದನೆ ಮಾಡಬೇಕಿದೆ. ಕಾಸಿನಸರ ಚಿತ್ರದಲ್ಲಿ ಈ ಪ್ರಯತ್ನ ನಡೆದಿದೆ ಎಂದುಕೊಂಡಿದ್ದೇನೆ. ಎಲ್ಲರೂ ಈ ಚಿತ್ರವನ್ನು  ನೋಡಬೇಕು, ಅದರ ಮೌಲ್ಯ ಅರಿತುಕೊಳ್ಳಬೇಕು. ನಾನು ನಿರ್ಮಾಪಕ, ನಟನಲ್ಲ, ನಟನೆ ನನಗೆ ಬರಲ್ಲ, ಸಹಜ ಬದುಕು ನನ್ನದು, ಗೌಡರು ಸೂಕ್ಷ್ಮ ವಿಚಾರಗಳನ್ನಿಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಅಕ್ಷಯ್ ಕುಮಾರ್ ಜೊತೆಗಿನ ನಿಶ್ಚಿತಾರ್ಥ ಮುರಿದ ಬಗ್ಗೆ ಅಸಲಿ ಕಾರಣ ತಿಳಿಸಿದ `ಕೆಜಿಎಫ್ 2′ ನಟಿ

FotoJet 3 13

ಚಿತ್ರದಲ್ಲಿ ಒಂದು ಪಾತ್ರವನ್ನೂ ನಿರ್ವಹಿಸಿರುವ ಸಚಿವ ಸೋಮಶೇಖರ್ ಮಾತನಾಡುತ್ತ, ಗ್ರಾಮೀಣ  ಸೊಗಡಿನಲ್ಲಿ  ನಡೆಯುವ ಕೌಟುಂಬಿಕ ಕಥಾಹಂದರ  ಈ ಚಿತ್ರದಲ್ಲಿದೆ.  ನನ್ನ ಸ್ನೇಹಿತ ದೊಡ್ಡನಾಗಯ್ಯ ಅವರಿಗೆ ಕೃಷಿ ಎಂದರೆ ತುಂಬಾ ಅಚ್ಚುಮೆಚ್ಚು. ಗ್ರಾಮೀಣ ಭಾಗದಿಂದಲೇ ಬಂದ ಅವರು ಅನೇಕ  ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.  ಈಗ ಚಿತ್ರನಿರ್ಮಾಣವನ್ನೂ ಮಾಡಿದ್ದಾರೆ ಎಂದು ಹೇಳಿದರು.

FotoJet 1 19

ನಾಯಕ ವಿಜಯ ವಿಜಯ್ ರಾಘವೇಂದ್ರ ಮಾತನಾಡಿ, ಒಬ್ಬ ನಟನಿಗೆ ಎಲ್ಲಾ ಥರದ ಪಾತ್ರಗಳನ್ನು ಮಾಡುವ ಅವಕಾಶ ಸಿಗುತ್ತದೆ. ಆದರೆ ಒಬ್ಬ ರೈತನ ಪಾತ್ರ ಸಿಗುವುದು ಅಪರೂಪ, ಗೌಡರು ಈ ಸಿನಿಮಾದ ಕಥೆ, ಟೈಟಲ್  ಹೇಳಿದಾಗ ತುಂಬಾ  ಖುಷಿಯಾಯ್ತು. ಕಾಸಿನಸರ ತುಂಬಾ ತೂಕವಾದ ಹೆಸರು, ಅದರ ಹಿಂದೆ ದೊಡ್ಡ ಶ್ರಮವಿದೆ. ಇಲ್ಲಿ ಕಾಸಿನಸರ ಎನ್ನುವುದು ಬರೀ ಒಡವೆಯಲ್ಲ. ಅದಕ್ಕೊಂದು ಒಳಾರ್ಥವಿದೆ.  ಶ್ರೀಧರ್ ಸಂಭ್ರಮ್  ಅವರು ಭರಣಿಯ ಮಳೆ ಎಂಬ ಅದ್ಭುತವಾಗಿ ಮಾಡಿದ್ದಾರೆ. ವೇಣು ಚಿತ್ರವನ್ನು ಅಷ್ಟೇ ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಚಿತ್ರದಲ್ಲಿ ಸುಂದರೇಶ ಎಂಬ  ವ್ಯವಸಾಯದ ಮೇಲೆ ಭರವಸೆ ಇಟ್ಟಿರುವ ರೈತ ಹೋರಾಟಗಾರನಾಗಿ ನಟಿಸಿದ್ದೇನೆ ಎಂದರು.

FotoJet 4 11

ನಾಯಕಿ ಹರ್ಷಿಕಾ ಪೂಣಚ್ಛ ಮಾತನಾಡಿ, ಈ ಚಿತ್ರದಲ್ಲಿ ನಾನು ಕೃಷಿ ವಿದ್ಯಾರ್ಥಿನಿ  ಸಂಪಿಗೆಯ ಪಾತ್ರ ಮಾಡಿದ್ದೇನೆ. ಈಗಿನ ಹುಡುಗಿಯರು ಓದುಮುಗಿಸಿ ಐಟಿ ಕಂಪನಿಗಳಲ್ಲಿ, ವಿದೇಶಗಳಲ್ಲಿ ಕೆಲಸ ಹುಡುಕುತ್ತಾರೆ,  ಆದರೆ ನಾನು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಅಭಿನಯಕ್ಕೆ ಸಾಕಷ್ಟು ಪ್ರಾಮುಖ್ಯತೆ ಇರೋ ಪಾತ್ರ  ಎಂದರು. ಸಚಿವೆ, ನಟಿ ತಾರಾ ಮಾತನಾಡಿ ನಾನು ಹಿಂದೆ ಹೆಬ್ಬೆಟ್ ರಾಮಕ್ಕದಲ್ಲಿ ಉಳುಮೆಯನ್ನೂ ಮಾಡಿದ್ದೇನೆ. ರಾಜ್ಯವನ್ನೂ ಆಳಿದ್ದೇನೆ. ಈ ಸಿನಿಮಾದಲ್ಲಿ ನಾನೂ ಅಭಿನಯಿಸಬೇಕಿತ್ತು, ಒತ್ತಡದಿಂದ ಆಗಲಿಲ್ಲ, ದೊಡ್ಡನಾಗಯ್ಯ ನಮ್ಮ ಮಣ್ಣಿನ ಕಥೆಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಿದ್ದಾರೆ ಎಂದರು.

FotoJet 5 7

ನಿರ್ದೇಶಕ ನಂಜುಂಡೇಗೌಡ ಮಾತನಾಡಿ, ‘ಇಲ್ಲಿ ಕಾಸಿನ ಸರಕ್ಕೆ  ಅದರದೇ ಮೌಲ್ಯ,  ಪರಂಪರೆ, ಸಂಪ್ರದಾಯವಿದೆ. ಅದೇ ರೀತಿ ಕೃಷಿಗೂ ತನ್ನದೇ ಆದ ಪರಂಪರೆ ಸಂಪ್ರದಾಯವಿದೆ. ಅದನ್ನು  ಇಲ್ಲಿ ಕೃಷಿಭೂಮಿಗೆ ಹೋಲಿಸಿದ್ದೇನೆ ಎಂದರು. ನಿರ್ಮಾಪಕರಾದ ದೊಡ್ಡನಾಗಯ್ಯ ಮಾತನಾಡಿ, ನಾನೂ ಒಬ್ಬ ರೈತ, ಇಂದಿನ ದಿನಗಳಲ್ಲಿ ಕೌಟುಂಬಿಕ ಸಂಬಂಧಗಳು ದೂರವಾಗುತ್ತಿವೆ. ನಮ್ಮ ಸಂಸ್ಕೃತಿ ಮರೆಯಾಗುತ್ತಿದೆ. ಜನ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಹೀಗಾಗಿ ಇವುಗಳ ಮಹತ್ವವನ್ನು ಸಾರುವ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರವನ್ನು  ಮಾಡಿದ್ದೇವೆ ಎಂದರು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

TAGGED:Basavaraja BommaiHarshika PoonachaKasinasaraNanjundegowdaVijayaraghavendraಕಾಸಿನಸರನಂಜುಂಡೇಗೌಡಬಸವರಾಜ ಬೊಮ್ಮಾಯಿವಿಜಯರಾಘವೇಂದ್ರಹರ್ಷಿಕಾ ಪೂಣಚ್ಚ
Share This Article
Facebook Whatsapp Whatsapp Telegram

Cinema Updates

madenur manu
ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್
19 hours ago
Akhil Akkineni Zainab Ravdjee
ಗರ್ಲ್ ಫ್ರೆಂಡ್ ಝೈನಬ್ ಮದ್ವೆಯಾದ ನಾಗಾರ್ಜುನ ಪುತ್ರ ಅಖಿಲ್
2 days ago
shivani swamy
‘ಸರಿಗಮಪ ಸೀಸನ್‌ 21’ರ ವಿನ್ನರ್‌ ಆದ ಬೀದರ್‌ ಪ್ರತಿಭೆ ಶಿವಾನಿ ಸ್ವಾಮಿ
2 days ago
Kamal Haasan
ಕರ್ನಾಟಕದಲ್ಲಿ ಥಗ್‌ ಲೈಫ್‌ ರಿಲೀಸ್‌ಗಾಗಿ ಸುಪ್ರೀಂಗೆ PIL
2 days ago

You Might Also Like

Ramanagara
Districts

Video Viral | ಬೈಕ್‌ನಲ್ಲಿ ಹೋಗ್ತಿದ್ದ ಹಿಂದೂ ಯುವಕ, ಅನ್ಯಕೋಮಿನ ಯುವತಿ ಅಡ್ಡಗಟ್ಟಿ ನೈತಿಕ ಪೊಲೀಸ್ ಗಿರಿ

Public TV
By Public TV
9 minutes ago
as per daivas word thief caught in 3 days koragajjas miracle in mudradi udupi 2
Districts

ದೈವ ನುಡಿದಂತೆ 3 ದಿನದಲ್ಲಿ ಸಿಕ್ಕಿಬಿದ್ದ ಕಳ್ಳ – ಉಡುಪಿಯಲ್ಲಿ ಕೊರಗಜ್ಜನ ಪವಾಡ

Public TV
By Public TV
22 minutes ago
Chinnaswamy Stampede
Bengaluru City

Exclusive | ಮತ್ತೊಂದು ಭಂಡಾಟ ಬಯಲು – ಸಿಬ್ಬಂದಿ, ಸಮಯಾವಕಾಶದ ಕೊರತೆ ಅಂದ್ರೂ ಡೋಂಟ್ ಕೇರ್ ಅಂದಿದ್ದ ಸರ್ಕಾರ

Public TV
By Public TV
31 minutes ago
SOMANNA 1
Districts

ಇಡೀ ಬಜೆಟ್ ಪರಿಹಾರವಾಗಿ ಕೊಟ್ರೂ ಹೋದ ಜೀವ ವಾಪಸ್ ಬರುತ್ತಾ? – ಸೋಮಣ್ಣ

Public TV
By Public TV
45 minutes ago
Weather
Bengaluru City

ನಾಳೆಯಿಂದ ರಾಜ್ಯದಲ್ಲಿ ಮುಂಗಾರು ಚುರುಕು – ಜೂ.13ರವರೆಗೆ ವ್ಯಾಪಕ ಮಳೆ ಸಾಧ್ಯತೆ

Public TV
By Public TV
1 hour ago
LOVERS 1
Chikkamagaluru

55ರ ಆಂಟಿ ಜೊತೆಗೆ ಯುವಕ ಲವ್ವಿಡವ್ವಿ; ಲವರ್‌ಗಾಗಿ ಆಕೆಯ ಗಂಡನನ್ನೇ ಕೊಂದು ಸುಟ್ಟುಹಾಕಿದ್ದ ಮೂವರು ಅರೆಸ್ಟ್‌

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?