ಬೆಂಗ್ಳೂರು ಮೂಲದ ಉತ್ತಿಷ್ಠ ಭಾರತ ಸಂಘಟನೆ ಕಾರ್ಯಕರ್ತರಿಂದ ಅಂಜನಾದ್ರಿ ಪರ್ವತದಲ್ಲಿ ಸ್ವಚ್ಛತಾ ಕಾರ್ಯ!

Public TV
1 Min Read
KPL SWACHTE COLLAGE

ಕೊಪ್ಪಳ: ಬೆಂಗಳೂರು ಮೂಲದ ಉತ್ತಿಷ್ಠ ಭಾರತ ಸಂಘಟನೆ ಕಾರ್ಯಕರ್ತರು ಭಾನುವಾರ ಅಂಜನಾದ್ರಿ ಪರ್ವತದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ದರು.

ಐಟಿ ಬಿಟಿಯಲ್ಲಿ ಕೆಲಸ ಮಾಡುವ 50 ಜನರ ತಂಡ ಆಂಜನೇಯನ ಜನ್ಮ ಸ್ಥಳ ಅಂಜನಾದ್ರಿ ಪರ್ವತಕ್ಕೆ ಶನಿವಾರ ಆಗಮಿಸಿತ್ತು. ಆಂಜನೇಯನ ದರ್ಶನ ಪಡೆದು ನಂತರ ನೂರಾರು ಭಕ್ತರ ಜೊತೆ ಸಾಮೂಹಿಕ ಹನುಮಾನ್ ಚಾಲಿಸ್ ಪಾರಾಯಣ ಮಾಡಿದ್ದರು.

ದರ್ಶನದ ಬಳಿಕ ಉತಿಷ್ಠ ಭಾರತ ತಂಡ ಮತ್ತು ಗಂಗಾವತಿಯ ಭಾರತ್ ಸೇವಾ ಟ್ರಸ್ಟ್ ಸದಸ್ಯರು ಅಂಜನಾದ್ರಿ ಪರ್ವತದಲ್ಲಿ ಸ್ವಚ್ಛತಾ ಕಾರ್ಯ ಆರಂಭಿಸಿದ್ದರು. ಮಧ್ಯಾಹ್ನದವರೆಗೂ ಶ್ರಮದಾನ ಮಾಡಿದ ಕಾರ್ಯಕರ್ತರು ನಂತರ ಪಂಪಾ ಸರೋವರವನ್ನು ಸ್ವಚ್ಛಗೊಳಿಸಿದರು. ಕಳೆದ 2014ರ ಜುಲೈ 27ರಂದು ಲೋಕಾರ್ಪಣೆಗೊಂಡಿರೋ ಸಂಘಟನೆ, ಯುವಕರಲ್ಲಿ ದೇಶಭಕ್ತಿ ಜಾಗೃತಗೊಳಿಸುವ ಕೆಲಸ ಮಾಡುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *