ಬೆಂಗಳೂರು: ಹೋಟೆಲ್ನಲ್ಲಿ ಊಟ ಪಾರ್ಸಲ್ ಮಾಡಿಸುವ ವೇಳೆ ತನ್ನ ಗೆಳತಿಯನ್ನ, ಬೇರೊಬ್ಬ ಯುವಕ ನೋಡುತ್ತಿದ್ದ ಎಂಬ ಕ್ಷುಲ್ಲಕ ವಿಚಾರದಲ್ಲಿ ಗಲಾಟೆ ನಡೆದಿರುವ ಘಟನೆ ನೆಲಮಂಗಲ ಪಟ್ಟಣದಲ್ಲಿ ನಡೆದಿದೆ.
ನಗರದ ಹೊರವಲಯದ ನೆಲಮಂಗಲ ಪಟ್ಟಣ ನಂದಿಕೇಶ್ವರ ಹೋಟೆಲ್ ಮುಂಭಾಗ ಈ ಘಟನೆ ನಡೆದಿದ್ದು, ರಂಜಿತ್ ಎಂಬ ಯುವಕ ತನ್ನ ಗೆಳತಿ ಸುಚಿತ್ರಾ (ಹೆಸರು ಬದಲಾಯಿಸಲಾಗಿದೆ) ಎಂಬಾಕೆಯೊಂದಿಗೆ ಹೋಟೆಲ್ಗೆ ಊಟ ಪರ್ಸಲ್ ಮಾಡಿಸಿಕೊಳ್ಳಲು ಆಗಮಿಸಿದ್ದ. ಈ ವೇಳೆ ಹೋಟೆಲ್ ಬಳಿ ಇದ್ದ ಯುವಕ ಸುಚಿತ್ರಾರನ್ನು ನೋಡಿದ್ದಾನೆ. ಇದನ್ನೇ ಪ್ರಮುಖ ಕಾರಣವಾಗಿಸಿಕೊಂಡ ರಂಜಿತ್ ಯುವಕನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾನೆ. ಯುವಕ ತನ್ನ ತಪ್ಪು ಏನು ಇಲ್ಲ ಎಂದು ಹೇಳಿದರು ಕೇಳದ ರಂಜಿತ್ ಕಾಲಿನಿಂದ ಒದ್ದು ಮತ್ತೆ ಹಲ್ಲೆ ನಡೆಸಿದ್ದಾನೆ.
ರಂಜಿತ್ ಯುವಕನ ಮೇಲೆ ಹಲ್ಲೆ ನಡೆಸಿದ ದೃಶ್ಯಗಳು ಹೋಟೆಲ್ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ವೇಳೆ ಹೋಟೆಲ್ ಮಾಲೀಕ ಕೂಡ ಮಧ್ಯ ಪ್ರವೇಶ ಮಾಡಿ ಜಗಳ ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೆ ರಂಜಿತ್ ಹೋಟೆಲ್ ಮಾಲೀಕನ ಮೇಲು ಹಲ್ಲೆ ನಡೆಸಿರುವುದನ್ನು ಕಾಣಬಹುದು. ಘಟನೆ ಕುರಿತು ನೆಲಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ರಂಜಿತ್ ಸೇರಿದಂತೆ ಹಲ್ಲೆಗೊಳಗಾದ ಯುವಕನನ್ನು ಪೊಲೀಸರು ಕರೆಸಿ ವಿಚಾರಣೆ ನಡೆಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv