ನೀರಿನ ಪೈಪ್‍ ಲೈನ್ ಅಳವಡಿಸುವ ವಿಷಯದಲ್ಲಿ ಗುಂಪು ಘರ್ಷಣೆ – 5 ಮಹಿಳೆಯರು ಸೇರಿ 8 ಮಂದಿಗೆ ಗಾಯ

Public TV
1 Min Read
klr galate

ಕೋಲಾರ: ನೀರಿನ ಪೈಪ್ ಲೈನ್ ಅಳವಡಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿರುವ ಘಟನೆ ಕೋಲಾರದಲ್ಲಿ ಸೋಮವಾರ ನಡೆದಿದೆ.

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಖಾದ್ರಿಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮನೆಯ ಬಳಿ ನೀರಿನ ಪೈಪ್ ಲೈನ್ ಹಾಕುವ ವಿಚಾರದಲ್ಲಿ ಪರಸ್ಪರ ಪೈಪ್ ಗಳಿಂದ ಹಲ್ಲೆ ಮಾಡಿಕೊಂಡಿರುವ ಎರಡು ಗುಂಪಿನವರು ಸದ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

klr 7

ಶಂಕರಪ್ಪ ಮತ್ತು ಗಂಗಾಧರ ಎಂಬ 2 ಗುಂಪುಗಳ ನಡುವೆ ಈ ಘರ್ಷಣೆ ನಡೆದಿದೆ. ಗಂಗಾಧರ ಗುಂಪಿನ ಐವರು ಮಹಿಳೆಯರು ಸೇರಿದಂತೆ 8 ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಮುಳಬಾಗಿಲು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

klr 5

ಸದ್ಯ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪರ ವಿರೋಧ ಪ್ರಕರಣ ದಾಖಲಾಗಿದೆ.

klr 2

klr 4

klr 6

klr 8

klr 9

klr 1

klr 3

Share This Article
Leave a Comment

Leave a Reply

Your email address will not be published. Required fields are marked *