ಅಯೋಧ್ಯೆ ತೀರ್ಪಿಗಾಗಿ ವಿದೇಶ ಪ್ರವಾಸ ರದ್ದುಗೊಳಿಸಿದ್ದ ಗೊಗೋಯ್

Public TV
1 Min Read
ranjan gogoi

ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ಅವರು ಅಯೋಧ್ಯೆ ಪ್ರಕರಣದ ತೀರ್ಪು ಬರೆಯಲು ತಮ್ಮ ವಿದೇಶ ಪ್ರವಾಸವನ್ನೇ ರದ್ದುಗೊಳಿಸಿದ್ದರು.

ಗೊಗೋಯ್ ಅವರು ದಕ್ಷಿಣ ಅಮೆರಿಕ ಸೇರಿದಂತೆ ಹಲವು ದೇಶಗಳಿಗೆ ಪ್ರವಾಸ ಹೋಗಲು ವೇಳಾಪಟ್ಟಿ ಸಿದ್ಧಗೊಂಡಿತ್ತು. ಆದರೆ ನವೆಂಬರ್ 17ರಂದು ನಿವೃತ್ತಿ ಆಗುವುದರ ಒಳಗಡೆ ಮಹತ್ವದ ತೀರ್ಪು ಪ್ರಕಟಿಸಬೇಕಿದ್ದ ಕಾರಣ ಗೊಗೋಯ್ ಅವರು ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದರು.

ayodhya final

ನಿವೃತ್ತಿ ಆಗುವುದಕ್ಕೂ ಮೊದಲು ಅಯೋಧ್ಯೆ ತೀರ್ಪ ನೀಡಬೇಕಿತ್ತು. ಈ ಬಗ್ಗೆ ಅಧ್ಯಯನ ಮಾಡಿ ತೀರ್ಪು ಬರೆಯಬೇಕಿತ್ತು. ಹಾಗಾಗಿ ಅವರು ಅಯೋಧ್ಯೆ ತೀರ್ಪು ನೀಡುವವರೆಗೂ ಎಲ್ಲಿಯೂ ಹೋಗಲ್ಲ ಎಂದು ತಿಳಿಸಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಐವರು ನ್ಯಾಯಧೀಶರಾದ ಸಿಜೆಐ ರಂಜನ್ ಗೊಗೋಯ್, ಎಸ್.ಎ ಬೋಬ್ಡೆ, ಡಿ.ವೈ ಚಂದ್ರಚೂಡ್, ಅಶೋಕ್ ಭೂಷಣ್ ಹಾಗೂ ಎಸ್.ಎ ನಜೀರ್ ನೇತೃತ್ವದ ಸಂವಿಧಾನ ಪೀಠ ಇಂದು ಬೆಳಗ್ಗೆ 10:30ಕ್ಕೆ ಐತಿಹಾಸಿಕ ತೀರ್ಪು ಪ್ರಕಟಿಸಲಿದೆ.

Share This Article
Leave a Comment

Leave a Reply

Your email address will not be published. Required fields are marked *