ಮೈಸೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮೈಸೂರಿನಲ್ಲಿ ಯಾರೂ ಪ್ರತಿಭಟನೆ ನಡೆಸುವಂತಿಲ್ಲ. ಇಂತಹದೊಂದು ಆದೇಶವನ್ನು ಮೈಸೂರು ಪೊಲೀಸ್ ಕಮಿಷನರ್ ಜಾರಿ ಮಾಡಿದ್ದಾರೆ.
ಇವತ್ತು ಮೈಸೂರಿನಲ್ಲಿ ಪೌರತ್ವ ಮಸೂದೆ ವಿರೋಧಿಸಿ ಕೆಲ ಸಂಘಟನೆ ಗಳು ಪ್ರತಿಭಟನೆ ಆಯೋಜಿಸಿತ್ತು. ಈ ಪ್ರತಿಭಟನೆಗಳಿಗೆ ನಗರ ಪೊಲೀಸ್ ಆಯುಕ್ತರು ಅನುಮತಿ ನಿರಾಕರಿಸಿದ್ದರು. ಆದರೂ, ಕೆಲ ಸಂಘಟನೆಗಳು ಅನುಮತಿ ಇಲ್ಲದೆ ಪ್ರತಿಭಟನೆ ಮಾಡಲು ಮುಂದಾಗಿದ್ದವು. ಈ ಕಾರಣ ಈ ನಿಷೇಧ ಆದೇಶವನ್ನು ನಗರ ಪೊಲೀಸ್ ಆಯುಕ್ತರು ಜಾರಿ ಮಾಡಿದ್ದಾರೆ.
Hyderabad:Maulana Azad National Urdu University (MANUU) students protest against #CitizenshipAmendmentAct and in support of Jamia students. pic.twitter.com/O0G18tn1nP
— ANI (@ANI) December 16, 2019
ಕಾನೂನು ಸುವ್ಯವಸ್ಥೆ ಹದಗೆಡುತ್ತದೆ ಎಂಬ ಕಾರಣದಿಂದ ಪ್ರತಿಭಟನೆ ನಡೆಸದಂತೆ ಮೈಸೂರು ಪೊಲೀಸ್ ಕಮಿಷನರ್ ಕೆ.ಟಿ.ಬಾಲಕೃಷ್ಣ ಆದೇಶಿಸಿದ್ದಾರೆ. ಮೈಸೂರಿನ ಗಾಂಧಿ ಚೌಕ, ಮಹಾವೀರ್ ವೃತ್ತ, ಎ.ವಿ.ರಸ್ತೆ ,ಅಶೋಕ ರಸ್ತೆ ಮತ್ತು ಪುರಭವನದ ಸುತ್ತಮುತ್ತ 500 ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಾಗಿದ್ದು ಬೈಕ್ ರ್ಯಾಲಿ, ಪ್ರತಿಭಟನೆ ನಡೆಸದಂತೆ ಆದೇಶಿಸಲಾಗಿದೆ. ಇಂದು ಮಧ್ಯರಾತ್ರಿ 12 ಗಂಟೆ ವರೆಗೆ ಈ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.