ಸಂಕ್ರಾಂತಿ ಹಬ್ಬಕ್ಕೆ ಬಂದು ಮಕ್ಕಳ ಪ್ರಾಣ ತೆಗೆದ ತಂದೆ

Public TV
1 Min Read
sankranti a

ಹೈದರಾಬಾದ್: ಪತ್ನಿಯೊಂದಿಗೆ ಜಗಳವಾಡಿ ಇಬ್ಬರು ಮಕ್ಕಳನ್ನು ಬಾವಿಗೆ ಎಸೆದು, ಸಿಐಎಸ್‍ಎಫ್ ಪೇದೆ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಬೂಬಾಬಾದ್ ಜಿಲ್ಲೆಯ ಗಾಡಿಗುಡೆಮ್ ತಾಂಡಾದಲ್ಲಿ ನಡೆದಿದೆ.

ಭುಕ್ಯ ರಾಮ್ ಕುಮಾರ್ ಮೃತ ಸಿಐಎಸ್‍ಎಫ್ ಕಾನ್‍ಸ್ಟೆಬಲ್. ಈತ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದನು. ಸಂಕ್ರಾಂತಿ ಹಬ್ಬವನ್ನು ಕುಟುಂಬ ಸಮೇತ ಆಚರಿಸಲು ಗಡಿಗುಡೆಂ ತಾಂಡಾದ ಮನೆಗೆ ಬಂದಿದ್ದನು.

KWR Well 5

ಈ ವೇಳೆ ಫೈನಾನ್ಸ್ ಕಂಪನಿಯೊಂದರಲ್ಲಿ ಅಡಮಾನವಿಟ್ಟಿದ್ದ ಚಿನ್ನಾಭರಣಕ್ಕೆ ಸಂಬಂಧಿಸಿದಂತೆ ಪತ್ನಿಯೊಂದಿಗೆ ಜಗಳ ಮಾಡಿದ್ದಾನೆ. ಹೀಗೆ ಕೆಲವು ವಿಚಾರಗಳ ಕುರಿತಾಗಿ ದಂಪತಿ  ನಡುವೆ ಮನಸ್ಥಾಪ ಇತ್ತು. ಮನನೊಂದ ರಾಮ್ ಕುಮಾರ್ ತನ್ನ ಮಕ್ಕಳನ್ನು ಮನೆಯಿಂದ ಹೊರಗೆ ಕರೆದೊಯ್ದಿದ್ದಾನೆ. ಇಬ್ಬರ ಪ್ರಾಣವನ್ನು ತೆಗೆದು ಮೃತ ದೇಹಗಳನ್ನು ಬಾವಿಗೆ ಎಸೆದು ಗ್ರಾಮಸ್ಥರಿಗೆ ಈ ವಿಚಾರವನ್ನು ತಿಳಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.

WELL
ಸಾಂದರ್ಭಿಕ ಚಿತ್ರ

ಘಟನೆಯ ಕುರಿತು ಪ್ರತಿಕ್ರಿಯಿಸಿದ ಮಹಬೂಬಾಬಾದ್ ಗ್ರಾಮಾಂತರ ಸಬ್ ಇನ್ಸ್‍ಪೆಕ್ಟರ್, ರಾಮ್ ಕುಮಾರ್ ಮಕ್ಕಳನ್ನು ಹತ್ತಿರದ ಕೃಷಿ ಜಮೀನಿನಲ್ಲಿ ತೆರೆದ ಬಾವಿಗೆ ಕರೆದೊಯ್ದು ನೀರಿಗೆ ಎಸೆದು ಪರಾರಿಯಾಗಿದ್ದನು. ಈ ಘಟನೆಗೆ ಸಂಬಂಧಿಸಿದಂತೆ ಕೊಲೆ ಪ್ರಕರಣ ದಾಖಲಾಗಿತ್ತು. ಆದರೆ ಸಂಜೆ ನಂತರ ಅನಂತರಾಮ್ ಗ್ರಾಮದ ರೈಲ್ವೆ ಹಳಿಯಲ್ಲಿ ರಾಮ್ ಕುಮಾರ್ ಶವ ಪತ್ತೆಯಾಗಿದೆ. ಈ ಕುರಿತಾಗಿ ಹೆಚ್ಚಿನ ತನಿಖೆ ಮಾಡಲಾಗುತ್ತದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *