ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲೊಂದು ಘರ್ ವಾಪಾಸಿ ನಡೆದಿದೆ.
ನಗರದ ಪದವಿನಂಗಡಿಯ ಕ್ರಿಶ್ಚಿಯನ್ ಕುಟುಂಬವೊಂದು ಹಿಂದೂ ಧರ್ಮಕ್ಕೆ ಮರು ಮತಾಂತರ ಆಗಿದೆ. 40 ವರ್ಷಗಳ ಹಿಂದೆ ಅರುಣ್ ಮೊಂತೆರೋ ಅವರ ತಾಯಿ ಐಡಿ ಥಾಮಸ್ ಕ್ರೈಸ್ತಧರ್ಮ ಎಲ್ಲಕ್ಕಿಂತ ಶ್ರೇಷ್ಠವೆಂದು ಹಿಂದೂ ಧರ್ಮ ತೊರೆದಿದ್ದರು. ನಂತರ ಈ ಕುಟುಂಬ ಹಿಂದೂ ಧರ್ಮದ ಎಲ್ಲಾ ಸಂಪ್ರದಾಯವನ್ನು ಕಳಚಿಕೊಂಡಿತ್ತು. ಆದ್ರೆ ಈಗ ಮತ್ತೆ ಹಿಂದೂ ಧರ್ಮಕ್ಕೆ ವಾಪಾಸ್ ಆಗಿದ್ದಾರೆ.
ಪದವಿನಂಗಡಿಯ ಹಿಂದೂ ಜಾಗರಣ ವೇದಿಕೆಯ ಸದಸ್ಯರನ್ನು ಈ ಕುಟುಂಬ ಸಂಪರ್ಕಿಸಿ ಘರ್ ವಾಪಸಿಯಾಗಿದ್ದಾರೆ. ಅರುಣ್ ಮೊಂತೆರೋ, ತಾಯಿ, ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 5 ಜನ ಘರ್ ವಾಪಾಸಿಯಾದರು.
ಘರ್ ವಾಪಸಿ ನಂತರ ಅರುಣ್ ಮೊಂತೆರೋ ಅರುಣ್ ಪೂಜಾರಿ ಎಂದು, ಪತ್ನಿ ಸುನೀತ ಸಂಗೀತ ಆಗಿ, ತಾಯಿ ಐಡಾ ಥೋಮಸ್ ಗೌರಿ ಪೂಜಾರ್ತಿಯಾಗಿ, ಇಬ್ಬರು ಗಂಡು ಮಕ್ಕಳು ಅಜಯ್ ಪೂಜಾರಿ- ಅನೀಶ್ ಪೂಜಾರಿಯಾಗಿ ಬದಲಾಗಿದ್ದಾರೆ.