Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಗೆಳತಿಯನ್ನು ಕೈಬಿಡಲು 10 ಲಕ್ಷ ರೂ. ವರದಕ್ಷಿಣೆ ಕೇಳಿದ ಪಾಗಲ್ ಪ್ರೇಮಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Chitradurga | ಗೆಳತಿಯನ್ನು ಕೈಬಿಡಲು 10 ಲಕ್ಷ ರೂ. ವರದಕ್ಷಿಣೆ ಕೇಳಿದ ಪಾಗಲ್ ಪ್ರೇಮಿ

Chitradurga

ಗೆಳತಿಯನ್ನು ಕೈಬಿಡಲು 10 ಲಕ್ಷ ರೂ. ವರದಕ್ಷಿಣೆ ಕೇಳಿದ ಪಾಗಲ್ ಪ್ರೇಮಿ

Public TV
Last updated: December 19, 2019 8:10 pm
Public TV
Share
3 Min Read
CTD Love case Main
SHARE

– ಪ್ರಿಯಕರನ ಅಸಲಿ ಆಟ ತಿಳಿಸಿದ್ದು ಯುವತಿ ನೇಣಿಗೆ ಶರಣು
– ಪ್ರಕರಣಕ್ಕೆ ಟ್ವಿಸ್ಟ್ ನೀಡಿದ ಮೊಬೈಲ್ ಫೋನ್

ಚಿತ್ರದುರ್ಗ: ಪ್ರೀತಿಸಿದ ಪ್ರೇಮಿಗಳು ಮನೆಯವರ ವಿರೋಧದ ನಡುವೆಯೂ ಓಡಿಹೋಗಿ ದೇಗುಲ ಹಾಗೂ ನಿರ್ಜನ ಪ್ರದೇಶದಲ್ಲಿ ಮದುವೆಯಾಗುತ್ತಾರೆ. ಛಲದಿಂದ ಕುಟುಂಬಸ್ಥರೇ ನಾಚುವಂತೆ ಬದುಕುವುದನ್ನು ಕೇಳಿದ್ದೇವೆ. ಆದರೆ ಏಳು ವರ್ಷಗಳಿಂದ ಪ್ರೀತಿಸುತಿದ್ದ ಗೆಳತಿಯ ಬದುಕಿಗೆ ಪಾಗಲ್ ಪ್ರೇಮಿ ವಿಲನ್ ಆದ ಘಟನೆ ಕೋಟೆನಾಡು ಚಿತ್ರದುರ್ಗದಲ್ಲಿ ನಡೆದಿದೆ.

ಹೊಳಲ್ಕೆರೆ ತಾಲೂಕಿನ ಕೆರಯಾಗಲಹಳ್ಳಿಯ ರಾಜೇಶ್ವರಿ ಆತ್ಮಹತ್ಯೆಗೆ ಶರಣಾದ ಯುವತಿ. ಚಿತ್ರದುರ್ಗದ ರಾಜೇಂದ್ರನಗರದ ತಿಪ್ಪೇಸ್ವಾಮಿ ಪ್ರೀತಿಯ ನಾಟಕವಾಡಿದ ಪ್ರೇಮಿ. ಏಳು ವರ್ಷದ ಹಿಂದೆ ಚಿತ್ರದುರ್ಗದ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ರಾಜೇಶ್ವರಿ ಹಾಸ್ಟೆಲ್‍ನಲ್ಲಿ ಇದ್ದಳು. ರಜೆ ದಿನಗಳಲ್ಲಿ ಬೇಜಾರು ಅಂತ ಹಾಸ್ಟಲ್‍ನಲ್ಲಿ ಇರಲಾಗದೆ ರಾಜೇಂದ್ರನಗರದ ಸ್ಟೇಡಿಯಂ ರಸ್ತೆಯಲ್ಲಿದ್ದ ತನ್ನ ಅಜ್ಜಿ ಶಾಂತಮ್ಮನವರ ಮನೆಗೆ ಹೋಗುತ್ತಿದ್ದಳು.

CTD Love case B

ರಾಜೇಶ್ವರಿಗೆ ಶಾಂತಜ್ಜಿ ಮನೆಯ ಪಕ್ಕದ ಮನೆಯ ನಿವಾಸಿ ರಾಜಶೇಖರ್ ಹಾಗೂ ಲಕ್ಮಕ್ಕ ದಂಪತಿ ಪುತ್ರ ತಿಪ್ಪೇಸ್ವಾಮಿ ಪರಿಚಯವಾಗಿದ್ದ. ಬಳಿಕ ಇಬ್ಬರ ಮಧ್ಯೆ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಪರಸ್ಪರ ಇಬ್ಬರು ಅರ್ಥೈಸಿಕೊಂಡಿದ್ದರು. ಈ ವಿಚಾರವನ್ನು ರಾಜೇಶ್ವರಿ ತನ್ನ ತಂದೆ-ತಾಯಿಗೆ ತಿಳಿಸಿ ಮದುವೆಯಾಗುವ ಮುಂದಾಗಿದ್ದಳು.

ರಾಜೇಶ್ವರಿ ಹಾಗೂ ತಿಪ್ಪೇಸ್ವಾಮಿ ಪ್ರೀತಿಯನ್ನು ಎರಡೂ ಕುಟುಂಬಸ್ಥರು ಒಪ್ಪಿ ಮದುವೆಗೆ ಸಿದ್ಧತೆ ಕೂಡ ನಡೆಸಿದ್ದರು. ವರದಕ್ಷಿಣೆ, ವರೋಪಚಾರ ಕೂಡ ಚರ್ಚಿಸಿ ನಿರ್ಧಾರವಾಗಿತ್ತು. ಆದರೆ ಮದುವೆಯಾಗಲು ಇಷ್ಟವಿಲ್ಲದ ತಿಪ್ಪೇಸ್ವಾಮಿ ಮದುವೆ ನಿಲ್ಲಿಸಲು ಯತ್ನಿಸಿದ್ದ. ಮೊದಲು ಒಂದು ಲಕ್ಷ ರೂ. ಕೇಳಿದ್ದ ತಿಪ್ಪೇಸ್ವಾಮಿ, ಕೆಲ ದಿನಗಳ ಬಳಿಕ 5 ಲಕ್ಷ ರೂ. ವರದಕ್ಷಿಣೆ ಕೊಡುವಂತೆ ಕೇಳಿದ್ದ. ಅದಕ್ಕೆ ಒಪ್ಪಿದ್ದ ರಾಜೇಶ್ವರಿ ಕುಟುಂಬಸ್ಥರು ಹುಡುಗ ಚೆನ್ನಾಗಿದ್ದಾನೆ. ವಿದ್ಯಾವಂತ ಹಾಗೆಯೇ ಮುಂದೆ ಸರ್ಕಾರಿ ಕೆಲಸ ಸಿಗುವ ಭರವಸೆ ಇದೆ ಅಂತ ಎಲ್ಲಾ ಬೇಡಿಕೆಗಳಿಗೆ ಒಪ್ಪಿದ್ದರು. ಆದರೂ ಸಮಾಧಾನಗೊಳ್ಳದ ಪಾಗಲ್ ಪ್ರೇಮಿ ಹತ್ತು ಲಕ್ಷ ರೂ. ವರದಕ್ಷಿಣೆ ನೀಡಬೇಕು ಎಂದು ಕೇಳಿದ್ದನು. ಇದರಿಂದಾಗಿ ಏಳು ವರ್ಷದ ಪ್ರೀತಿಯ ಬದುಕಿನಲ್ಲಿ ತಿಪ್ಪೇಸ್ವಾಮಿ ನಾಟಕೀಯ ಮಾತುಗಳಿಗೆ ಸರ್ವಸ್ವವನ್ನು ಒಪ್ಪಿಸಿದ್ದ ರಾಜೇಶ್ವರಿ ಮನನೊಂದು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

CTD Love case C 1

ಪ್ರಕರಣಕ್ಕೆ ಟ್ವಿಸ್ಟ್:
ತಿಪ್ಪೇಸ್ವಾಮಿ ಅಮಾಯಕ ಅಂತ ಎಲ್ಲರೂ ಭಾವಿಸಿದ್ದೂ, ಮದುವೆ ನಿಶ್ಚಯವಾದ ಬಳಿಕ ಆತನಿಗೆ ಹೀಗೆ ಆಗಬಾರದಿತ್ತು. ಆ ಯುವಕನನ್ನು ನಂಬಿಸಿ ರಾಜೇಶ್ವರಿ ಕೈಕೊಟ್ಟಳು ಎಂದು ಎಲ್ಲರೂ ಭಾವಿಸಿದ್ದರು. ಆದರೆ ತಿಪ್ಪೇಸ್ವಾಮಿಯ ಅಸಲಿ ಸತ್ಯ ಈಗ ಬಯಲಾಗಿದೆ. ತಿಪ್ಪೇಸ್ವಾಮಿ ತಂದೆತಾಯಿ ಹೊತ್ತಿನ ಊಟಕ್ಕೂ ಪರದಾಡುತ್ತಾ, ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಪದವಿ ಓದಿದ್ದ ತಿಪ್ಪೇಸ್ವಾಮಿ ಆಧಾರ್ ಕಾರ್ಡ್ ಮಾಡಿಕೊಡುವ ಖಾಸಗಿ ಕಂಪನಿಯೊಂದರಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ಹೀಗಾಗಿ ಅವನು ಸರ್ಕಾರಿ ಉದ್ಯೋಗಿ ಆಗುತ್ತಾನೆ ಅಂತ ನಂಬಿ ತಮ್ಮ ಮಗಳನ್ನು ಧಾರೆ ಎರೆಯಲು ರಾಜೇಶ್ವರಿ ಕುಟುಂಬಸ್ಥರು ಸಿದ್ಧವಾಗಿದ್ದರು. ಮಗಳು ಆತ್ಮಹತ್ಯೆಗೆ ಶರಣಾಗಿದ್ದರಿಂದ ಮನೆಯಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ರಾಜೇಶ್ವರಿ ಮೊಬೈಲ್‍ನಲ್ಲಿ ಸಿಕ್ಕ ಮಾಹಿತಿಯಿಂದ ತಿಪ್ಪೇಸ್ವಾಮಿಯ ಮುಖವಾಡ ಬಯಲಾಗಿದೆ.

CTD Love case

ಆರೋಪಿ ತಿಪ್ಪೇಸ್ವಾಮಿ ಗೆಳತಿ, ಭಾವಿ ಪತ್ನಿ ರಾಜೇಶ್ವರಿಗೆ ಕರೆಮಾಡಿ ನಿತ್ಯವೂ ಕಿರುಕುಳ ನೀಡಿದ್ದ. 10 ಲಕ್ಷ ರೂ. ಹಾಗೂ ವಿಜೃಂಭಣೆಯಿಂದ ಮದುವೆ ಮಾಡಿಕೊಡಬೇಕು. ಇಲ್ಲವಾದರೆ ನಾ ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಬೆದರಿಸಿದ್ದ. ಹೀಗಾಗಿ ಮನನೊಂದ ರಾಜೇಶ್ವರಿ ನೇಣಿಗೆ ಶರಣಾಗಿದ್ದಾಳೆ. ಇದಕ್ಕೆ ಸಂಬಂಧಪಟ್ಟ ಆಡಿಯೋ ಸಂಭಾಷಣೆಗಳು ಹಾಗೂ ಡೆತ್ ನೋಟ್ ಪೊಲೀಸರ ಕೈ ಸೇರಿದ್ದು, ಆರೋಪಿಗಳು ಕುಟುಂಬ ಸಮೇತ ತಲೆಮರೆಸಿಕೊಂಡಿದ್ದಾರೆ.

ಮುದ್ದಾದ ಮಗಳನ್ನು ಕಳೆದುಕೊಂಡು ಕಣ್ಣೀರಲ್ಲಿ ಕೈತೊಳೆಯುತ್ತಿರುವ ರಾಜೇಶ್ವರಿ ಕುಟುಂಬ ಚಿತ್ರದುರ್ಗ ಎಸ್‍ಪಿ ಅವರನ್ನು ಭೇಟಿ ಮಾಡಿ ತಕ್ಷಣ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ. ಈ ಸಂಬಂಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬಿಸಿದ್ದಾರೆ. ಹಾಗೆಯೇ ಆರೋಪಿಗಳು ಸಿಕ್ಕ ಬಳಿಕ ತನಿಖೆ ನಡೆಸಿ ಕಾನೂನಾತ್ಮಕ ಕ್ರಮಕೈಗೊಳ್ಳುವ ಭರವಸೆಯನ್ನು ಎಸ್‍ಪಿ ಡಾ.ಅರುಣ್ ನೀಡಿದ್ದಾರೆ.

CTD Love case A

TAGGED:ChitradurgaLove caseloverspolicePublic TVyoung womanಚಿತ್ರದುರ್ಗಪಬ್ಲಿಕ್ ಟಿವಿಪೊಲೀಸ್ಪ್ರೀತಿಪ್ರೇಮಿಗಳುವಂಚನೆ
Share This Article
Facebook Whatsapp Whatsapp Telegram

Cinema news

Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema
vijay thalapathy
ನಟ ವಿಜಯ್‌ ವಿರುದ್ಧ ಪ್ರಕರಣ ದಾಖಲು
Cinema Latest South cinema Top Stories
Delhi Rain
ದೆಹಲಿ-ಎನ್‌ಸಿಆರ್‌ನ ಹಲವೆಡೆ ಭಾರೀ ಮಳೆ – ಯೆಲ್ಲೋ ಅಲರ್ಟ್ ಜಾರಿ
Cinema Latest National Top Stories
Rishabh Shetty
Chandanavana Film Critics Awards 2026 | ರಿಷಬ್ ಅತ್ಯುತ್ತಮ ನಟ, ಆಶಿಕಾ ರಂಗನಾಥ್ ಅತ್ಯುತ್ತಮ ನಟಿ
Bengaluru City Cinema Latest Sandalwood Top Stories

You Might Also Like

wild elephant attack on bike in chikkamagaluru
Chikkamagaluru

ಬೈಕ್ ಅಡ್ಡಗಟ್ಟಿ ತುಳಿದು ಹಾಕಿದ ಪುಂಡಾನೆ – ಸವಾರ ಜಸ್ಟ್ ಮಿಸ್

Public TV
By Public TV
36 minutes ago
Russia Military Plane
Latest

Russian Military Plane Crash – ವಿಮಾನದಲ್ಲಿದ್ದ 29 ಪ್ರಯಾಣಿಕರು ಸಾವು, ತಾಂತ್ರಿಕ ದೋಷ ಶಂಕೆ

Public TV
By Public TV
40 minutes ago
ABVP Gopi Rangaswamy
Bengaluru City

ರಾಜ್ಯದಲ್ಲಿ ದ್ವಿಭಾಷಾ ಸೂತ್ರ ಜಾರಿ ಮಾಡೋ ಮೊದಲು ಸರ್ಕಾರ ತಜ್ಞರ ಸಮಿತಿ ರಚನೆ ಮಾಡಬೇಕು: ಎಬಿವಿಪಿ

Public TV
By Public TV
44 minutes ago
calcutta high court
Court

West Bengal SIR | 60 ಲಕ್ಷ ಆಕ್ಷೇಪಣೆಗಳಲ್ಲಿ 47 ಲಕ್ಷ ಅರ್ಜಿ ಇತ್ಯರ್ಥ – ಸುಪ್ರೀಂಗೆ ಹೈಕೋರ್ಟ್ ವರದಿ

Public TV
By Public TV
1 hour ago
Munirabad PSI Suspend
Districts

ಅಕ್ರಮಗಳಿಗೆ ಬ್ರೇಕ್ ಹಾಕದೇ ಕರ್ತವ್ಯ ಲೋಪ – ಮುನಿರಾಬಾದ್ ಪಿಎಸ್‌ಐ ಅಮಾನತು

Public TV
By Public TV
1 hour ago
S.S Mallikarjun
Davanagere

ಸಮರ್ಥ್ ಗೆಲುವಿಗಾಗಿ ಕೆಂಡ ತುಳಿದು ವಿಶೇಷ ಪೂಜೆ ಸಲ್ಲಿಸಿದ ಸಚಿವ ಎಸ್‌.ಎಸ್ ಮಲ್ಲಿಕಾರ್ಜುನ್

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?