ಪತಿ ಆತ್ಮಹತ್ಯೆ, ಪತ್ನಿ ಮತ್ತು ಮಗುವಿಗೆ ಅಪಘಾತ

Public TV
1 Min Read
CTD SUICIDE STILL

ಚಿತ್ರದುರ್ಗ: ಕೌಟಿಂಬಿಕ ಕಲಹದಂತಹ ಕ್ಷುಲ್ಲಕ ಕಾರಣಕ್ಕೆ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವಿಚಾರವನ್ನು ಸಂಬಂಧಿಕರಿಗೆ ತಿಳಿಸಲು ಹೋದ ಪತ್ನಿ ಮತ್ತು 2 ವರ್ಷದ ಮಗುವಿಗೆ ಅಪಘಾತವಾಗಿರುವ ಘಟನೆ ಚಿತ್ರದುರ್ಗ ನಗರದ ಕೆಳಗೋಟೆ ಬಡಾವಣೆಯಲ್ಲಿ ನಡೆದಿದೆ.

ಖಜಾನೆ ಇಲಾಖೆಯ ಮುಖ್ಯ ಲೆಕ್ಕಿಗ ನಾರಾಯಣಪ್ಪ (35) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ಅವರ ಪತ್ನಿ ರಮ್ಯ ಸಂಬಂಧಿಕರಿಗೆ ತಿಳಿಸಲು ತಮ್ಮ 2 ವರ್ಷದ ಮಗು ಆದ್ಯ ಜೊತೆ ಹೋದಾಗ ಅವರಿಗೆ ಅಪಘಾತ ಸಂಭವಿಸಿದೆ.

ctd daeth

ಸಂಬಂಧಿಕರ ಮನೆಗೆ ಹೋಗುತ್ತಿದ್ದ ರಮ್ಯ ಮತ್ತು ಮಗುವಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮಗು ಆದ್ಯ ಸ್ಥಳದಲ್ಲೇ ಮೃತಪಟ್ಟಿದೆ. ರಮ್ಯ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *