ಚಿಕ್ಕಬಳ್ಳಾಪುರ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದ ವೇಳೆ ಸಾವನ್ನಪ್ಪಿದ ಮೃತ ಪ್ರಜ್ವಲ್ ಹಾಗೂ ಶ್ರವಣ್ ನಿವಾಸಕ್ಕೆ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ ಸುಧಾಕರ್ (MC Sudhakar) ಭೇಟಿ ನೀಡಿದರು.
ಚಿಕ್ಕಬಳ್ಳಾಪುರ Chikkaballapura) ಜಿಲ್ಲೆಯ ಚಿಂತಾಮಣಿಯ ಕುರಟಹಳ್ಳಿ ಗ್ರಾಮದ ಶ್ರವಣ್ ನಿವಾಸಕ್ಕೆ ಭೇಟಿ ಮಾಡಿ, ತಂದೆ, ತಾಯಿ ಹಾಗೂ ತಾತನ ಜೊತೆ ಮಾತುಕತೆ ನಡೆಸಿ ಸ್ವಾಂತನ ಹೇಳಿದರು. ಬಳಿಕ ಗೋಪಲ್ಲಿಯ ಮೃತ ಪ್ರಜ್ವಲ್ ತಂದೆ ಗಣೇಶ್, ತಾಯಿ ಪವಿತ್ರಾ ಸೇರಿದಂತೆ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.ಇದನ್ನೂ ಓದಿ: ಕಾಲ್ತುಳಿತ ಘಟನೆಯಿಂದ ಸಿಎಂ ಸಿದ್ದರಾಮಯ್ಯ ಬಹಳ ನೊಂದಿದ್ದಾರೆ: ಎಂ.ಸಿ ಸುಧಾಕರ್
ನಂತರ ಘಟನೆ ಬಗ್ಗೆ ಮಾತನಾಡಿದ ಅವರು, ಘಟನೆಯ ದಿನ ಆಟಗಾರರ ಬಸ್ಗೆ ಅಭಿಮಾನಿಗಳು ಅಡ್ಡಗಟ್ಟಿದ್ದರು. ಇದರಿಂದ ನಿಗದಿತ ಸಮಯಕ್ಕೆ ಆಟಗಾರು ಕಾರ್ಯಕ್ರಮಕ್ಕೆ ಬರಲಾಗಲಿಲ್ಲ. ಹೀಗಾಗಿ ಕಾಲವ್ಯಯವಾಗುತ್ತಾ ತಡವಾಗಿಯೇ ಕಾರ್ಯಕ್ರಮ ಆರಂಭಗೊಂಡಿತು. ಅಭಿಮಾನಿ ಸಾಗರವೇ ಹರಿದುಬಂದಿತ್ತು ಎಂದರು.
ಘಟನೆ ಬಗ್ಗೆ ತನಿಖೆ ಆಗಲಿ. ಸಾವು-ನೋವಿನಿಂದಾಗಿ ಬಹಳ ನೋವನ್ನುಂಟು ಮಾಡಿದೆ. ಜೊತೆಗೆ ಸಿಎಂ ಬಹಳಷ್ಟು ಕುಂದು ಬಿಟ್ಟಿದ್ದಾರೆ. ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಿಎಂಗೆ ಮನಸ್ಸಿಲ್ಲ. ಸಿಐಡಿ ತನಿಖೆ ಜೊತೆ ನ್ಯಾಯಾಂಗ ತನಿಖೆ ಸಹ ನಡೆಯಲಿದೆ. ಅಧಿಕಾರಿಗಳ ಅಮಾನತು ಕೂಡ ಆಗಿದೆ. ಡಿಎನ್ಎ, ಆರ್ಸಿಬಿ ಹಾಗೂ ಕೆಎಸ್ಸಿಇ ಮೇಲೂ ಕ್ರಮ ಆಗಿದೆ. ಸಂಪೂರ್ಣ ತನಿಖೆ ನಂತರ ಲೋಪ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ತೀವಿ ಎಂದು ತಿಳಿಸಿದರು.ಇದನ್ನೂ ಓದಿ: ಹಾಸನ | ಬಿರುಗಾಳಿ ಸಹಿತ ಧಾರಾಕಾರ ಮಳೆ – ರೈತರ ಮೊಗದಲ್ಲಿ ಮಂದಹಾಸ