ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 18 ವರ್ಷಗಳ ಬಳಿಕ ಐಪಿಎಲ್ ಚಾಂಪಿಯನ್ ಪಟ್ಟವನ್ನ ಮುಡಿಗೇರಿಸಿಕೊಂಡಿದೆ. ಆದರೆ, ಆರ್ಸಿಬಿ ಫ್ಯಾನ್ಸ್ಗಳು ಈ ಐತಿಹಾಸಿಕ ಕ್ಷಣವನ್ನು ಸಂಭ್ರಮಿಸುತ್ತಿದ್ದಾಗಲೇ ದುರಂತ ಸಂಭವಿಸಿದೆ. ಕಾಲ್ತುಳಿತದಲ್ಲಿ (Chinnaswamy Stampede) ಉಂಟಾದ ಅಭಿಮಾನಿಗಳ ಸಾವು-ನೋವಿಗೆ ಆರ್ಸಿಬಿ ಫ್ರಾಂಚೈಸಿ ಹಾಗೂ ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣ ಅನ್ನೋದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು. ಮಂಗಳ ರಾತ್ರಿ 11:20ರ ಸುಮಾರಿಗೆ ಆರ್ಸಿಬಿ ವಿಜಯಶಾಲಿಯಾಗಿತ್ತು, ಇದರಿಂದ ರಾತ್ರಿಯಿಡೀ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಬುಧವಾರ ಸಹ ಬೆಂಗಳೂರು ನಗರದ ವಿವಿಧೆಡೆ ಅಭಿಮಾನಿಗಳು ಸಂಭ್ರಮಾಚರಣೆ ಕೈಗೊಂಡಿದ್ದರು. ಹೀಗಿರುವಾಗಲೇ ಬೆಳಗ್ಗೆ 7:01 ಗಂಟೆಗೆ ಆರ್ಸಿಬಿ ಫ್ರಾಂಚೈಸಿ ಇಂದು 3:30ರ ಬಳಿಕ ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂ ವರೆಗೆ ವಿಕ್ಟರಿ ಪೆರೇಡ್ ನಡೆಸೋದಾಗಿ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ವೊಂದನ್ನ ಹಂಚಿಕೊಂಡಿತ್ತು. ಆದ್ರೆ ಘೋಷಣೆಗೂ ಮುನ್ನ ಯಾವುದೇ ಪೊಲೀಸ್ (Bengaluru Police Department) ಅನುಮತಿ ಪಡೆದಿರಲಿಲ್ಲ. ಪೊಲೀಸರು ಸಹ ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಮ್ಯಾನೇಜ್ಮೆಂಟ್ಗೂ ಸರಿಯಾದ ಸೂಚನೆ ಕೊಡದೇ 11 ಗಂಟೆಯಾದ್ರೂ ಸಭೆ ಮಾಡುವುದರಲ್ಲೇ ಕಾಲ ಕಳೆದರು. ನಿರಂತರ ಸಭೆ ನಡೆಸುತ್ತಿದ್ದ ಪೊಲೀಸರು 12 ಗಂಟೆ ಕಳೆದರೂ ಸರಿಯಾದ ತೀರ್ಮಾನಕ್ಕೆ ಬರೋದ್ರಲ್ಲಿ ವಿಫಲರಾಗಿದ್ದರು. ಇದನ್ನೂ ಓದಿ: ಮಾತೇ ಬರುತ್ತಿಲ್ಲ, ತುಂಬಾ ದುಃಖವಾಗಿದೆ: ಕಾಲ್ತುಳಿತ ದುರಂತಕ್ಕೆ ಕೊಹ್ಲಿ ಸಂತಾಪ
ಈ ನಡುವೆ ಮುಖ್ಯಮಂತ್ರಿಗಳು ಪಾಲ್ಗೊಳ್ಳುತ್ತಿದ್ದರಿಂದ ಸ್ಟೇಡಿಯಂಗಿಂತ ವಿಧಾನಸೌಧ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿತ್ತು. ಅಲ್ಲಿ ಅತಿಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗಿತ್ತು. ಇದಾದ ಬಳಿಕ ಪೊಲೀಸರು ಮಧ್ಯಾಹ್ನ 2 ಗಂಟೆ ವೇಳೆಗೆ ಟಿಕೆಟ್, ಪಾಸ್ ಇದ್ದವರಿಗೆ ಮಾತ್ರ ಅವಕಾಶ ಅಂತ ಪ್ರೆಸ್ನೋಟ್ ಹೊರಡಿಸಿದ್ದರು. ಆದ್ರೆ ಟಿಕೆಟ್ ಎಲ್ಲಿ ಸಿಗುತ್ತೆ ಅನ್ನೋದನ್ನ ಫ್ರಾಂಚೈಸಿ ಸ್ಪಷ್ಟಪಡಿಸಿರಲಿಲ್ಲ, ಪೊಲೀಸರು ಇದನ್ನ ಪ್ರಶ್ನೆ ಮಾಡಲಿಲ್ಲ. ಅಲ್ಲದೇ ಮಧ್ಯಾಹ್ನ 3:30ರ ಸುಮಾರಿಗೆ ಫ್ರೀ ಪಾಸ್ ಸಿಗುತ್ತೆ ಅಂತ ತನ್ನ ವೆಬ್ಸೈಟ್ ಮತ್ತು ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿತ್ತು. ಸಂಜೆ 5 ರಿಂದ 6 ಗಂಟೆ ವರೆಗೆ ಪೆರೇಡ್ ನಡೆಯಲಿದೆ ಅಂತ ಪೋಸ್ಟ್ ಹಂಚಿಕೊಂಡಿತ್ತು. ಆದ್ರೆ ಅಷ್ಟರಲ್ಲಾಗಲೇ ಸ್ಟೇಡಿಯಂ ಬಳಿ ಲಕ್ಷಾಂತರ ಜನ ಜಮಾಯಿಸಿದ್ದರು. ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭೀಕರ ಕಾಲ್ತುಳಿತ; ಫ್ಯಾನ್ಸ್ ಸಾವು-ನೋವಿಗೆ ಆರ್ಸಿಬಿ ಶೋಕ
ಈ ನಡುವೆ ಗೃಹಸಚಿವ ಪರಮೇಶ್ವರ್ ಅವರು ವಿಕ್ಟರಿ ಪೆರೇಡ್ ಇಲ್ಲ, ವಿಧಾನಸೌಧಕ್ಕೆ ಎಂಟ್ರಿ ಇಲ್ಲ, ಸ್ಟೇಡಿಯಂಗೆ ಹೋಗಿ ಅಂದುಬಿಟ್ಟರು. ಮಾಹಿತಿ ತಿಳಿದ ಜನ ಸ್ಟೇಡಿಯಂಗೆ ನುಗ್ಗಲು ಯತ್ನಿಸಿದ್ರು ಈ ಎಲ್ಲ ಬೆಳವಣಿಗೆಯಿಂದ ಅಭಿಮಾನಿಗಳ ಸಾವು ನೋವಾಗಿದೆ. ಇದನ್ನೂ ಓದಿ: ಟೀಂ ಇಂಡಿಯಾದ್ದು 5 ದಿನ, ಸಿಎಸ್ಕೆ 3 ದಿನದ ನಂತರ ಆಚರಣೆ ಮಾಡಿದ್ರೆ ಒಂದೇ ದಿನದಲ್ಲಿ ವಿಜಯೋತ್ಸವ ಆಚರಿಸಿದ್ದು ಯಾಕೆ? – ಜೆಡಿಎಸ್ ಆಕ್ರೋಶ
ದುರಂತಕ್ಕೆ ಪ್ರಮುಖ ಕಾರಣಗಳೇನು?
* ವಿಕ್ಟರಿ ಪೆರೇಡ್ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಪೊಲೀಸರು ತಡ ಮಾಡಿದ್ದು
* ಆಡಳಿತ ಮಂಡಳಿಗೆ ಖಡಕ್ ಸೂಚನೆ ಕೊಡೋದಕ್ಕೆ ಹಿಂದೇಟು ಹಾಕಿದ್ದು
* ಟಿಕೆಟ್ ಮತ್ತು ಪಾಸ್ ಬಗ್ಗೆ ಪೊಲೀಸರಿಗೆ ಮಾಹಿತಿಯೇ ಇರಲಿಲ್ಲ
* ಜನಕ್ಕೆ ಮಾಹಿತಿ ನೀಡೋದಕ್ಕೆ ಪೊಲೀಸರಿಗೆ ಆಸಕ್ತಿಯೇ ಇರಲ್ಲಿಲ್ಲ
* ಕಾರ್ಯಕ್ರಮ ಬೇಡ ಅನ್ನೋದಕ್ಕೆ ಪೊಲೀಸರ ಮೇಲೆ ಇದ್ದ ಒತ್ತಡ
* ವಿಧಾನಸೌದದ ಕಾರ್ಯಕ್ರಮ, ಪೆರೇಡ್ ಎರಡೂ ಬೇಡ ಅಂದಿದ್ದ ಆಯುಕ್ತರು
* ಪೊಲೀಸ್ ನಿಯೋಜನೆಯಲ್ಲಿ ನಿರಂತರವಾಗಿ ಯಡವಟ್ಟು
* ಗೇಟ್ ತೆಗೆಯಲು ಹಿಂದೆಟು