ಚಾಮರಾಜನಗರ: ಹೆತ್ತ ತಾಯಿಯನ್ನೇ ಮಾತನಾಡಿಸುವಂತಿಲ್ಲ, ಆಕೆ ಸತ್ತರೂ ಹೋಗುವಂತಿಲ್ಲ. ಇಷ್ಟೇ ಅಲ್ಲ ಯಾವುದೇ ಶುಭ ಕಾರ್ಯಗಳಿಗೂ ಇವರಿಗೆ ಪ್ರವೇಶವಿಲ್ಲ. ಸಂಬಂಧಿಕರ ಜೊತೆ ಅಕ್ಕ ಪಕ್ಕದವರ ಜೊತೆಯೂ ಮಾತನಾಡುವಂತಿಲ್ಲ ಇದು ಚಾಮರಾಜನಗರದಲ್ಲಿ ಕುಟುಂಬವೊಂದಕ್ಕೆ ಹೇರಲಾಗಿರುವ ಸಾಮಾಜಿಕ ಬಹಿಷ್ಕಾರ.
ಹೌದು. ಚಾಮರಾಜನಗರದ ಮೇದರ ಬೀದಿಯ ಪುಟ್ಟಸ್ವಾಮಿ ಎಂಬವರ ಕುಟುಂಬಕ್ಕೆ ಅವರ ಸಮುದಾಯದವರು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. 30 ವರ್ಷಗಳ ಹಿಂದೆ ಪುಟ್ಟಸ್ವಾಮಿಯವರ ತಾಯಿ ಮಾಡಿದ ತಪ್ಪಿಗೆ ಅವರ ಮಕ್ಕಳ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹೇರಲಾಗಿದೆ.
ತಾಯಿ ಮಾಡಿದ್ದ ತಪ್ಪೇನು?
ಪುಟ್ಟಸ್ವಾಮಿ ಅವರ ತಾಯಿ 30 ವರ್ಷಗಳ ಹಿಂದೆ ಗಂಡನನ್ನು ಬಿಟ್ಟು ಮತ್ತೊಬ್ಬನನ್ನು ಮದುವೆಯಾಗಿ ಓಡಿ ಹೋಗಿದ್ದರು. ಇದೇ ಕಾರಣವನ್ನಿಟ್ಟುಕೊಂಡು ಮಕ್ಕಳಿಗೆ ಬಹಿಷ್ಕಾರ ಹಾಕಲಾಗಿದೆ. ಹಿರಿಯ ಮಗ ನಾಗೇಂದ್ರ ಕುಟುಂಬ ದಂಡ ಕಟ್ಟಿ ಕುಲ ಸೇರಿಕೊಂಡಿದೆ. ಆದರೆ ಕೂಲಿ ನಾಲಿ ಮಾಡಿ ಬದುಕುವ ಇನ್ನೊಬ್ಬ ಮಗ ಪುಟ್ಟಸ್ವಾಮಿ ಕುಟುಂಬ ದಂಡ ಕಟ್ಟಲಾರದೆ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿದೆ.