ಬಾಲ್ಯ ವಿವಾಹ ತಡೆದು ಬಾಲಕಿಯರಿಬ್ಬರ ರಕ್ಷಣೆ

Public TV
1 Min Read
RCR Child Marriage

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದಗಣಿ ಗ್ರಾಮದಲ್ಲಿ ನಡೆಯುತ್ತಿದ್ದ ಎರಡು ಬಾಲ್ಯ ವಿವಾಹಗಳನ್ನ ತಡೆದು ಅಧಿಕಾರಿಗಳು ಬಾಲಕಿಯರನ್ನ ರಕ್ಷಿಸಿದ್ದಾರೆ. ಹಟ್ಟಿಯ ಸಂತೆ ಬಜಾರ ಪಕ್ಕದ ಮನೆಯೊಂದರಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹಗಳನ್ನ ತಡೆಯಲಾಗಿದೆ.

ಇಬ್ಬರು ಹಟ್ಟಿ ಕಂಪನಿ ಕಾರ್ಮಿಕರಿಗೆ ಸುರಪುರ ತಾಲೂಕಿನ ಯಾಳಗಿ, ದೇವದುರ್ಗ ತಾಲ್ಲೂಕಿನ ಕವಡಿಮಟ್ಟಿ ಗ್ರಾಮದ ಬಾಲಕಿಯರೊಂದಿಗೆ ವಿವಾಹ ನಿಶ್ಚಯವಾಗಿತ್ತು. ಖಚಿತ ದೂರಿನನ್ವಯ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಗೂ ಹಟ್ಟಿ ಠಾಣೆ ಪೊಲೀಸರ ನೇತೃತ್ವದಲ್ಲಿ ದಾಳಿ ಮಾಡಿ ಮದುವೆ ನಿಲ್ಲಿಸಲಾಗಿದೆ.

ಇಬ್ಬರು ಅಪ್ರಾಪ್ತರಾಗಿರುವ ಬಗ್ಗೆ ಖಚಿತವಾದ ಹಿನ್ನೆಲೆ ಅಧಿಕಾರಿಗಳು ಮದುವೆಯನ್ನ ನಿಲ್ಲಿಸಿ ಪೋಷಕರಿಂದ ಮುಚ್ಚಳಿಕೆ ಪತ್ರ ಬರೆಯಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *