ಬಸ್ ನಿಲ್ದಾಣದಲ್ಲಿರುತ್ತಿದ್ದ ವ್ಯಕ್ತಿಯನ್ನ ಬದಲಾಯಿಸಿದ ರೊಬೆನ್

Public TV
1 Min Read
CKM Homeless man copy

ಚಿಕ್ಕಮಗಳೂರು: ಹುಟ್ಟುಹಬ್ಬವನ್ನ ಪ್ರತಿಯೊಬ್ಬರು ಒಂದೊಂದು ರೀತಿ ಆಚರಿಸಿಕೊಳ್ಳುತ್ತಾರೆ. ಕೆಲವರು ದೇವಸ್ಥಾನಕ್ಕೆ ಹೋಗ್ತಾರೆ. ಕೆಲವರು ಫ್ರೆಂಡ್ಸ್ ಜೊತೆ ಪಾರ್ಟಿ ಮಾಡ್ತಾರೆ. ನಗರದ ಸಮಾಜ ಸೇವಾ ಕಾರ್ಯಕರ್ತನೋರ್ವ, ಸ್ನಾನವಿಲ್ಲದೆ ನಗರದ ಬಸ್‍ನಿಲ್ದಾಣದಲ್ಲಿ ವಾಸವಾಗಿದ್ದ ವ್ಯಕ್ತಿಯನ್ನು ಬದಲಾಯಿಸಿದ್ದಾರೆ.

CKM Homeless man 1 copy

ಕಲರಬುರಗಿ ಮೂಲಕ ಮುರಳಿ ಎಂಬಾತ ಬೇಲೂರು ರಸ್ತೆಯ ಬಸ್ ನಿಲ್ದಾಣದಲ್ಲಿಯೇ ವಾಸವಾಗಿದ್ದನು. ಜಿಲ್ಲಾ ಮಕ್ಕಳ ರಕ್ಷಣ ಘಟಕದ ಸದಸ್ಯೆ ಸಹನಾ ಈ ಮಾನಸಿಕ ಅಸ್ವಸ್ಥನನ್ನು ಗಮನಿಸಿ ಪತಿ ರೂಬೆನ್ ಮೊಸೆಸ್ ಅವರಿಗೆ ತಿಳಿಸಿದ್ದರು. ಮಂಗಳವಾರ ತಮ್ಮ ಹುಟ್ಟುಹಬ್ಬ ಮತ್ತು ವಿಶ್ವ ಸಮಾಜ ಸೇವಾ ದಿನ ಪ್ರಯುಕ್ತ ವ್ಯಕ್ತಿಯನ್ನು ಶುಚಿಗೊಳಿಸಿದ್ದಾರೆ.

CKM Homeless man 2 copy

ಮಂಗಳವಾರ ಕಟಿಂಗ್ ಶಾಪ್ ಬಂದಾಗಿದ್ದರಿಂದ ತಾವೇ ಮುರಳಿಯ ಕುರುಚಲು ಕೂದಲಿಗೆ ಕತ್ತರಿ ಹಾಕಿದ್ದಾರೆ. ಮುರಳಿಗೆ ಕಟಿಂಗ್ ಮತ್ತು ಸ್ನಾನ ಮಾಡಿಸಿ ಹೊಸ ಬಟ್ಟೆ ನೀಡಿದ್ದಾರೆ. ನಂತರ ಮುರಳಿಗೆ ಊಟ ನೀಡಿ, ಆತ ವಾಸವಾಗಿದ್ದ ಬಸ್ ನಿಲ್ದಾಣ ಸಹ ಶುಚಿಗೊಳಿಸಿದ್ದಾರೆ. ಈ ಮಾನವೀಯತೆ ಕೆಲಸಕ್ಕೆ ರೊಬೆಲ್ ಅವರ ಸ್ನೇಹಿತರು ಸಹ ಸಾಥ್ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *