ಆಕಾಶದಿಂದ ಧರೆಗುರುಳಿತಾ ಕಲ್ಲು – ಕೊರೊನಾ ಭೀತಿ ನಡುವೆ ವಿಚಿತ್ರ ಕಲ್ಲಿನ ಆತಂಕ

Public TV
1 Min Read
ckb kallu

ಚಿಕ್ಕಬಳ್ಳಾಪುರ: ಕೊರೊನಾ ಭೀತಿ ನಡುವೆ ಚಿಕ್ಕಬಳ್ಳಾಪುರ ತಾಲೂಕಿನ ಶ್ರೀರಾಮಪುರ ಗ್ರಾಮದಲ್ಲಿ ಆಕಾಶದಿಂದ ಧರೆಗುರುಳಿದ ವಿಚಿತ್ರ ಕಲ್ಲೊಂದು ಆತಂಕ ಉಂಟುಮಾಡಿದೆ.

ಶ್ರೀರಾಮಪುರ ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದೆ ರಾತ್ರಿ 8 ಗಂಟೆ ಸುಮಾರಿಗೆ ಆಕಾಶದಿಂದ ಇದ್ದಕ್ಕಿದಂತೆ ಬೆಂಕಿಯ ಚೆಂಡಿನಂತೆ ಕಲ್ಲೊಂದು ಧರೆಗುರುಳಿದಿದ್ದು, ಗ್ರಾಮಸ್ಥರಲ್ಲಿ ಭಯ ಸೃಷ್ಟಿಸಿದೆ. ಗ್ರಾಮದ ಹೊರವಲಯದ ಶ್ರೀನಿವಾಸ್ ಎಂಬವರ ತೋಟದಲ್ಲಿ ಈ ವಿಚಿತ್ರ ಕಲ್ಲು ಕಂಡುಬಂದಿದ್ದು, ತೋಟದ ಬಳಿ ಬಂದಿದ್ದ ಶ್ರೀನಿವಾಸ್ ಕಲ್ಲು ಧರೆಗುರುಳಿದನ್ನ ಕಣ್ಣಾರೆ ಕಂಡು ಅಚ್ಚರಿಗೊಳಗಾಗಿದ್ದಾರೆ.

ckb kallu 1

ಈ ಕಲ್ಲು ಸರಿ ಸುಮಾರು 1 ರಿಂದ 2 ಕೆಜಿ ತೂಕವಿದ್ದು, ಇದು ಆಕಾಶಕಾಯ ಉಲ್ಕೆ ಇರಬಹದು ಅಂತ ಅನುಮಾನ ವ್ಯಕ್ತವಾಗಿದೆ. ಸದ್ಯ ಸಿಕ್ಕಿರುವ ಕಲ್ಲನ್ನ ಗಣಿ ಹಾಗೂ ಭೂ ವಿಜ್ಞಾನ ಇಲಾಖಾಧಿಕಾರಿಗಳಿಗೆ ನೀಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *