ಜಕ್ಕಲಮಡುಗು ಜಲಾಶಯ ಭರ್ತಿ – ಹತ್ತಾರು ಗ್ರಾಮಗಳ ಜನರ ಸಂಚಾರಕ್ಕೆ ಸಂಚಕಾರ

Public TV
3 Min Read
Jakkalamadugu

– ನೀಗಿತು ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ ನಗರಗಳ ನೀರಿನ ದಾಹ

ಚಿಕ್ಕಬಳ್ಳಾಪುರ: ಮೊನ್ನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ವಿಶ್ವವಿಖ್ಯಾತ ನಂದಿಬೆಟ್ಟ ಮಾರ್ಗದ ಬ್ರಹ್ಮಗಿರಿ ಬೆಟ್ಟದಲ್ಲಿ ಭೂಕುಸಿತ ಉಂಟಾಗಿ ನಂದಿಬೆಟ್ಟದ ರಸ್ತೆಯೇ ಕೊಚ್ಚಿ ಹೋಗಿತ್ತು. ಆದರೆ ಇದೇ ದಿನ ಈ ನಂದಿಬೆಟ್ಟದ ಸುತ್ತಮುತ್ತಲಿನ ಪಂಚಗಿರಿಗಳ ಸಾಲಲ್ಲಿ ಸುರಿದ ಭಾರೀ ಮಳೆಗೆ ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ ನಗರಗಳ ಜನರ ಕುಡಿಯುವ ನೀರಿನ ದಾಹವನ್ನ ತೀರಿಸುವ ಜಕ್ಕಲಮಡುಗು ಜಲಾಶಯ ತುಂಬಿ ತುಳುಕಿದೆ. ಆದರೆ ಜಲಾಶಯದ ಹಿನ್ನೀರಿನಲ್ಲಿ ಸೇತುವೆಯೊಂದು ಮುಳುಗಿ ಹೋಗಿದ್ದು, ಇದರಿಂದ ಸ್ಥಳೀಯ ಹತ್ತಾರು ಗ್ರಾಮಗಳ ಜನರಿಗೆ ಸಂಚಾರಕ್ಕೆ ಸಂಕಷ್ಟವನ್ನೇ ತಂದೊಡ್ಡಿದೆ.

CKB DAM 7

ಏನು ಸಂಕಷ್ಟ..?: ಜಕ್ಕಲಮಡುಗು ತುಂಬಿ ತುಳುಕಿ ಕೋಡಿ ಹರಿದ ಹಿನ್ನೆಲೆಯಲ್ಲಿ ಜಲಾಶಯದ ಹಿನ್ನೀರಿನ ಸೇತುವೆ ಮೇಲೆ ಐದಾರು ಅಡಿ ನೀರು ನಿಂತಿದೆ. ಬೆಟ್ಟದ ಸಾಲುಗಳಿಂದ ಇದೇ ಸೇತುವೆ ಮೂಲಕ ಜಲಾಶಯಕ್ಕೆ ನೀರು ಹರಿದು ಬರ್ತಿದೆ. ಹೌದು ಮೊನ್ನೆ ರಾತ್ರಿ ಸುರಿದ ಒಂದೇ ಮಳೆಗೆ ಜಕ್ಕಲಮಡುಗು ಜಲಾಶಯ ತುಂಬಿ ತುಳುಕಿದ್ದು ಕೋಡಿ ಹರಿದಿದೆ. ಹೀಗಾಗಿ ಜಲಾಶಯದ ಹಿನ್ನೀರಿನಲ್ಲಿ ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ ಮಾರ್ಗದ ಸಂಪರ್ಕ ಸೇತುವೆಯಾಗಿದ್ದ ಸೇತುವೆ ಮುಳುಗಿದೆ. ಆದರೆ ಇದೇ ಮುಳುಗಿದ ಸೇತುವೆ ಮೇಲೆ ಜನ ಈಗ ಹರಸಾಹಸ ಪಟ್ಟು ಸಂಚಾರ ಮಾಡ್ತಿದ್ದಾರೆ. ಸೇತುವೆ ಮೇಲೆ ಹರಿವ ನೀರಿನ ಜೊತೆಯೇ ವಾಹನಗಳ ಸಂಚಾರ ಜನರ ಓಡಾಟ ಆಗ್ತಿದೆ. ಹರಿವ ನೀರಿನಲ್ಲೇ ಕಾರು ಹಾಗೂ ಬೈಕ್ ಗಳು ರಭಸವಾಗಿ ಮುನ್ನುಗ್ತುತ್ತಿವೆ. ಸೇತುವೆ ಮೇಲೆ ನಿಂತ ನೀರನ್ನ ಬೇಧಿಸಿಕೊಂಡು ಹರಸಾಹಸ ಪಟ್ಟು ಕಾರು ಬೈಕ್ ಚಲಾಯಿಸ್ತಿದ್ದು. ಸೇತುವೆ ದಾಟಲು ಹೋಗಿ ಸೇತುವೆ ಮಧ್ಯ ಭಾಗದಲ್ಲಿ ಬೈಕ್ ಗಳು ಕೆಟ್ಟು ಹೋಗ್ತಿವೆ. ಬೈಕ್ ಒಂದು ಕೆಟ್ಟು ನಿಂತ ಪರಿಣಾಮ ಮಗು ಸಮೇತ ಸೇತುವೆಯ ಅರ್ಧದಲ್ಲೇ ಮಹಿಳೆ ಇಳಿದು ನೀರಿನಲ್ಲೇ ನಡೆದುಕೊಂಡು ಹೋಗಿ ಸೇತುವೆ ದಾಟಿದ್ದಾಳೆ.

CKB DAM 5

ಜಲಾಶಯ ತುಂಬಿ ತುಳುಕುತ್ತಿರುವ ಪರಿಣಾಮ, ಜಲಾಶಯದ ಹಿನ್ನೀರಿನಲ್ಲಿ ಸೇತುವೆ ಮುಳುಗಿದೆ. ಹೀಗಾಗಿ ಚಿಕ್ಕಬಳ್ಳಾಪುರದಿಂದ ದೊಡ್ಡಬಳ್ಳಾಪುರದ ಕಡೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಗುಂಗೀರ್ಲಹಳ್ಳಿ, ಜಕ್ಕಲಮಡುಗು ಸೇರಿದಂತೆ ಮುಂದೆ ಹತ್ತಾರು ಗ್ರಾಮಗಳಿದ್ದು ಈ ಸೇತುವೆಯೂ ಮೂಲಕವೇ ಹಾದು ಹೋಗಬೇಕಿದೆ. ಆದರೆ ಈಗ ಸೇತುವೆ ಮೇಲೆ ನೀರು ತುಂಬಿಕೊಂಡಿರುವ ಕಾರಣ ವಾಹನಸವಾರರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನ-ಜಾನುವಾರುಳು ಸಹ ಜಮೀನು, ಹೊಲ, ತೋಟಗಳಿಗೆ ಇದೇ ಸೇತುವೆಯನ್ನೇ ಅವಲಂಬಿಸಿದ್ದಾರೆ. ಇನ್ನೂ ಶಾಲೆ ಕಾಲೇಜುಗಳಿಗೆ ಚಿಕ್ಕಬಳ್ಳಾಪುರಕ್ಕೆ ಬರುವ ವಿದ್ಯಾರ್ಥಿಗಳು ಸಹ ಇದೇ ರಸ್ತೆಯನ್ನೇ ಆಶ್ರಯಿಸಿದ್ದು, ಸಾಕಷ್ಟು ಸಮಸ್ಯೆಗಳನ್ನ ಅನುಭವಿಸುವಂತಾಗಿದೆ. ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಧರಿಸಿದ ವಾಚ್ ಬೆಲೆ ಕೇಳಿ ದಂಗಾದ ಅಭಿಮಾನಿಗಳು

CKB DAM 4

ಮೇಲ್ಸೇತುವೆಗೆ ಆಗ್ರಹ: ಈ ಹಿಂದೆ ಇದ್ದ ಹಳೆಯ ಜಲಾಶಯದ ಎತ್ತರವನ್ನ ಕಳೆದ 10 ವರ್ಷಗಳ ಹಿಂದೆ ಹೆಚ್ಚಳ ಮಾಡಿ ಜಲಾಶಯದಲ್ಲಿ ಹೆಚ್ಚಿನ ನೀರು ಸಂಗ್ರಹವಾಗುವಂತೆ ಮಾಡಲಾಗಿದೆ. ಜಲಾಶಯದ ಎತ್ತರವನ್ನ ಹೆಚ್ಚಳ ಮಾಡಿದ ನಂತರ ಮೂರ್ನಾಲ್ಕು ವರ್ಷಗಳ ಹಿಂದೆ ಸಹ ಜಕ್ಕಲಮಡುಗು ಜಲಾಶಯ ಭರ್ತಿಯಾದಾಗ ಇದೇ ಸಮಸ್ಯೆ ಆಗಿತ್ತು. ಮತ್ತೆ ಈಗ ಜಲಾಶಯ ತುಂಬಿದಾಗಲೂ ಮತ್ತೆ ಅದೇ ಸಮಸ್ಯೆ. ಹೀಗಾಗಿ ಈ ಸಮಸ್ಯೆಗೆ ಮೇಲ್ಸುತುವೆ ನಿರ್ಮಾಣ ಮಾಡಿ ಶಾಶ್ವತ ಪರಿಹಾರ ಮಾಡಿಕೊಡಿ ಅನ್ನೋದು ಇಲ್ಲಿನ ಹತ್ತಾರು ಗ್ರಾಮಗಳ ಜನರ ಆಗ್ರಹವಾಗಿದೆ. ಹೀಗಾಗಿ ಜಿಲ್ಲಾಢಳಿತ ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕಿದೆ.

CKB DAM 2

ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ ನಗರಗಳಿಗೆ ನೀರಿನ ದಾಹ ಮಾಯ:
ಈ ಜಲಾಶಯದಿಂದಲೇ ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರ ನಗರಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ. ಜಲಾಶಯ ಭರ್ತಿಯಾದ ಹಿನ್ನಲೆ ಇನ್ನೂ ಒಂದು ಒಂದೂವರೆ ವರ್ಷ ಈ ಎರಡು ನಗರಗಳ ಜನರಿಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇರಲ್ಲ. ಚಿಕ್ಕಬಳ್ಳಾಪುರ ದೊಡ್ಡಬಳ್ಳಾಪುರ ನಗರಗಳ ಜನರ ಪಾಲಿಗೆ ಇದು ಕಾವೇರಿ ಅಂತಲೇ ಫೇಮಸ್. ಇದನ್ನೂ ಓದಿ: ಅಫ್ಘಾನ್ ಮುಸ್ಲಿಮರಿಗೆ ಭಾರತದಲ್ಲಿ ಆಶ್ರಯ ಕಲ್ಪಿಸಬಾರದು: ಪ್ರವೀಣ್ ತೊಗಾಡಿಯಾ

Share This Article
Leave a Comment

Leave a Reply

Your email address will not be published. Required fields are marked *